
ಸ್ಯಾಂಡಲ್ ವುಡ್ ನಟರಲ್ಲಿ ಕ್ರೇಜಿ ಅಭಿಮಾನಿಗಳನ್ನು ಹೊಂದಿರುವುದು ಚಾಲೆಂಜಿಂಗ್ ಸ್ಟಾರ್ ಎಂದರೆ ತಪ್ಪಾಗದು ನೋಡಿ. ದರ್ಶನ್ ಅಂದ್ರೆ ಪಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಅಭಿಮಾನಿಗಳು ಅಪಾರ.
ರಾಮನಗರ ತಾಲ್ಲೂಕಿನ ಕರೇನಹಳ್ಳಿಯ ಕಾರ್ತಿಕ್ ಎಂಬಾತ ದರ್ಶನ್ ಹುಚ್ಚು ಅಭಿಮಾನಿಯಾಗಿದ್ದು ಬೆನ್ನ ಮೇಲೆ ಸಂಗೊಳ್ಳಿ ರಾಯಣ್ಣ ಟ್ಯಾಟು ಹಾಕಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಒಂದು ಭುಜದಲ್ಲಿ ದರ್ಶನ್ ಸಾರಥಿ ಚಿತ್ರದಲ್ಲಿ ಬಳಸಿದ ಕುದುರೆ ಟ್ಯಾಟು ಹಾಕಿಸಿಕೊಂಡು ಮತ್ತೊಂದು ಭುಜದ ಮೇಲೆ ಯಜಮಾನ ಚಿತ್ರದ ಹೆಸರು ಹಾಕಿಸಿಕೊಂಡಿದ್ದಾನೆ.
ದರ್ಶನ್ಗೆ 'ಚಾಲೆಂಜಿಂಗ್ ಸ್ಟಾರ್' ಎಂದು ಬಿರುದು ಕೊಟ್ಟ ಬಳಗವಿದು!
ಮಂಡ್ಯ ಲೋಕಸಭಾ ಚುನಾವಣೆ ವೇಳೆ ಸುಮಲತಾ ಅಂಬರೀಶ್ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತುಕೊಂಡು ದರ್ಶನ್ ಪ್ರಚಾರದ ವೇಳೆ ಲಕ್ಷಾಂತರ ಅಭಿಮಾನಿಗಳು ಪ್ರೀತಿಗಳಿಸಿರುವುದಕ್ಕೆ ಪ್ರಚಾರಕ್ಕೆ ಆಗಮಿಸಿದ ಜನ ಸಾಗರವೇ ಸಾಕ್ಷಿ.
ಇನ್ನು ಕಾರ್ತಿಕ್ ದರ್ಶನ್ ರನ್ನು ಭೇಟಿ ಮಾಡಲು ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದು ವಿಫಲರಾಗಿದ್ದು ಒಮ್ಮೆಯಾದರೂ ಹತ್ತಿರದಿಂದ ನೋಡಿ ಮಾತನಾಡಿಸಬೇಕೆಂಬುದು ಅವರ ಹಂಬಲ.
ದರ್ಶನ್ ಜತೆ ನಟಿಸಿದ್ದ ನಟಿ ಲೋಕಸಭಾ ಸಂಸದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.