Daily Horoscope: ಧನುವಿಗೆ ಧನಲಾಭ, ವೃಶ್ಚಿಕಕ್ಕೆ ಸ್ಥಾನ ಬಲ

By Suvarna NewsFirst Published Apr 15, 2022, 5:00 AM IST
Highlights

15 ಏಪ್ರಿಲ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ನಿಮ್ಮ ರಾಶಿಯ ಇಂದಿನ ಫಲಗಳೇನಿವೆ ನೋಡಿ.

ಮೇಷ(Aries): ಅಧ್ಯಾಪಕ ವೃತ್ತಿಯವರು, ವ್ಯಾಪಾರಿಗಳಿಗೆ ಉತ್ತಮ ದಿನ. ಉದ್ಯೋಗ ರಂಗದಲ್ಲಿ ಸಿಹಿ ಸುದ್ದಿ ಕಿವಿಗೆ ಬೀಳುವುದು. ಆತ್ಮವಿಶ್ವಾಸದ ಕಾರಣದಿಂದ ಕಚೇರಿಯಲ್ಲಿ ನಾಯಕತ್ವ ಪ್ರದರ್ಶಿಸುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರುತ್ತವೆ. ಸಂಗಾತಿಗಾಗಿ ಕೊಂಚ ಸಮಯ ನೀಡಿ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ.

ವೃಷಭ(Taurus): ವಿದೇಶಕ್ಕೆ ಹೋಗಿ ಉದ್ಯೋಗ ಮಾಡುವ ಹಾದಿ ಸುಗಮವಾಗುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಿರುತ್ತದೆ. ಕೌಟುಂಬಿಕ ಭಿನ್ನಾಭಿಪ್ರಾಯಗಳು ಸರಿ ಹೋಗುತ್ತವೆ. ಸಂಗಾತಿಯ ಬೆಂಬಲ ನಿಮಗಿರುತ್ತದೆ. ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಣಿಸಬಹುದು. ಕನ್ನಿಕಾ ಮುತ್ತೈದೆಗೆ ಬಾಗೀನ ಅರ್ಪಿಸಿ. 

Latest Videos

ಮಿಥುನ(Gemini): ವಿದ್ಯಾಪ್ರವೃತ್ತಿಯವರು ಹಿನ್ನಡೆಗೆ ಎಳೆಯಲ್ಪಟ್ಟರೂ ವಿಶೇಷ ಹಾನಿಯಾಗದಂತೆ ಗಾಯತ್ರಿ ಜಪ ಮಾಡಿ. ಜಡತ್ವದಿಂದಾಗಿ ಕಾರ್ಯ ಹಾನಿಯಾಗುವುದು. ವಾಹನ ಸಂಚಾರದಲ್ಲಿ ಬಹಳ ಎಚ್ಚರ ಅಗತ್ಯ. ಖರ್ಚು ವೆಚ್ಚಗಳು ಅಧಿಕವಾಗಲಿವೆ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಕಟಕ(Cancer): ಇಷ್ಟ ಮಿತ್ರರ ಸಹಕಾರದಿಂದ ಮಾನಸಿಕ ಸಮಾಧಾನ ಇರುವುದು. ದೈವಾನುಗ್ರಹ ಇರಲಿದೆ. ತಾಯಿಯಿಂದ ಹಣ ಪಡೆಯುವ ಸಾಧ್ಯತೆಗಳಿವೆ. ವಾಹನ ಚಲಾಯಿಸುವಾಗ ಎಚ್ಚರಿಗೆ ಅಗತ್ಯ. ಸಾಲ ನೀಡಲು ಹೋಗಬೇಡಿ. ಉದ್ಯೋಗದಲ್ಲಿ ಹೊಸ ವಿಷಯ ಕಲಿಕೆ, ಶಾರದಾಂಬೆಯ ಸ್ತುತಿ ಮಾಡಿ. 

ಸಿಂಹ(Leo): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ.  ವಿದೇಶಿ ಮೂಲದಿಂದ ಅಥವಾ ಅನಿರೀಕ್ಷಿತವಾಗಿ ಲಾಭ ಬರುವ ಸಾಧ್ಯತೆ ಇದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವಿರುತ್ತದೆ. ಮಹಾಲಕ್ಷ್ಮೀ ಸ್ಮರಣೆ ಮಾಡಿ. 

ವಾಸ್ತು ಪ್ರಕಾರ Attached Bathroom ಒಳ್ಳೇದೋ ಅಲ್ವೋ?

ಕನ್ಯಾ(Virgo): ಜೀರ್ಣಕ್ರಿಯೆ ಸಮಸ್ಯೆಗಳು ಕಾಡಬಹುದು. ಮನಸ್ಸು ಚಂಚಲವಾಗಿರಲಿದೆ. ಮಿತ್ರರು ನೀಡುವ ಸಲಹೆಗಳು ಬದುಕಿಗೆ ಸಹಕಾರಿಯಾಗಬಲ್ಲದು. ಸರ್ಕಾರಿ ಉದ್ಯೋಗದಲ್ಲಿ ವರ್ಗಾವಣೆ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಉತ್ತಮ ಸಮನ್ವಯವಿರುತ್ತದೆ. ಕೆಂಪು ವಸ್ತುಗಳನ್ನು ದಾನ ಮಾಡಿ. 

ತುಲಾ(Libra): ಕೆಲಸ ಬದಲಿಸಲು ಇಚ್ಛಿಸುವವರಿಗೆ ಹಾಗೂ ನಿರುದ್ಯೋಗಿಗಳಿಗೆ ದೊಡ್ಡ ಕಂಪನಿಯಿಂದ ಸಂದರ್ಶನಕ್ಕೆ ಕರೆ ಬರುವ ಸಾಧ್ಯತೆ ಇದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ತಂದೆತಾಯಿಯ ಮನಸ್ಸಿಗೆ ನೋವಾಗುವಂಥ ಮಾತುಗಳು ಬೇಡ. ಸಂಗಾತಿಯೊಂದಿಗೆ ಸಂಯಮ ತೋರಿ. ಕೆಂಪು ಬಟ್ಟೆ ಧರಿಸಿ ತಾಯಿಯ ಕೈಯಿಂದ ಕುಂಕುಮ ಇಡಿಸಿಕೊಳ್ಳಿ. 

ವೃಶ್ಚಿಕ(Scorpio): ಹೊಸದನ್ನು ಕಲಿಯುವ ನಿಮ್ಮ ಮನಸ್ಥಿತಿಯಿಂದ ವೃತ್ತಿಪರ ಜೀವನದಲ್ಲಿ ಹೊಸ ಅವಕಾಶಗಳು ತೆರೆಯುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸ್ಥಾನ ಬಲಗೊಳ್ಳುತ್ತದೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ತಾಯಿಯ ಆಶೀರ್ವಾದ ಪಡೆಯಿರಿ. 

ಶತಮಾನದ ಸಪ್ತಗ್ರಹ ಪಲ್ಲಟ: 5 ರಾಶಿಗಳಿಗೆ ಕಾದಿದೆ ಆಪತ್ತು

ಧನುಸ್ಸು(Sagittarius): ನಿಮ್ಮ ಆದಾಯದಲ್ಲಿ ಹೆಚ್ಚಳವಾಗಬಹುದು. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ಕುಟುಂಬದ ವಾತಾವರಣವು ಮಂಗಳಕರವಾಗಿರುತ್ತದೆ. ಆರೋಗ್ಯದಿಂದಿರಲು ಆಹಾರದ ಜೊತೆಗೆ ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಮಕರ(Capricorn): ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ, ಕೊಂಚ ನಿರಾಸೆಯಾಗುತ್ತದೆ. ವ್ಯಾಪಾರದಲ್ಲಿ ಕೊಂಚ ಲಾಭ. ಸುಸ್ತು, ನಿರಾಸಕ್ತಿ ಕಾಡುವ ಸಂಭವ, ಕೊಟ್ಟ ಮಾತು ತಪ್ಪುವ ಯೋಚನೆ ಬೇಡ. ಹಣದ ವಿಷಯದಲ್ಲಿ ವಂಚಿಸಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿ. ದುರ್ಗಾ ಅಷ್ಟೋತ್ತರ ಪಠಣ ಮಾಡಿ.

ಕುಂಭ(Aquarius): ನಿಮ್ಮ ಕೋಪ ಮತ್ತು ಹಠಮಾರಿತನದ ವರ್ತನೆಯು ಕೆಲಸಗಳಲ್ಲಿ ಅಡೆತಡೆಗಳನ್ನು ತರಬಹುದು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಅಡೆತಡೆಗಳನ್ನು ಎದುರಿಸಬಹುದು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು ಈ ತಿಂಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಕೆಂಪು ಧಾನ್ಯ ದಾನ ಮಾಡಿ. 

ಮೀನ(Pisces): ಕೆಲವು ಪ್ರಮುಖ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಮನೆ ಸ್ಥಳಾಂತರ ಕೆಲಸಗಳು ನಡೆಯಲಿವೆ. ಸತ್ಸಂಗ ಇತ್ಯಾದಿ ಕಾರಣಕ್ಕಾಗಿ ನೀವು ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ವ್ಯಾಪಾರ ಮಾಡುವವರು ಪಾಲುದಾರಿಕೆಯಿಂದ ಪ್ರಯೋಜನ ಪಡೆಯುತ್ತಾರೆ. ತಾಯಿಯ ಕೈಯಿಂದ ಸಿಹಿ ತಿನ್ನಿಸಿಕೊಳ್ಳಿ. 

click me!