Daily Horoscope: ಮೀನಕ್ಕೆ ಗುರು ಎಂಟ್ರಿ, ಹೀಗಿರಲಿದೆ ಎಲ್ಲ ರಾಶಿಗಳ ಇಂದಿನ ಫಲ

By Suvarna NewsFirst Published Apr 13, 2022, 5:00 AM IST
Highlights

13 ಏಪ್ರಿಲ್ 2022, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭಕ್ಕೆ ಶುಭ ದಿನ

ಮೇಷ(Aries): ಒಂದೇ ಬಾರಿಗೆ ಎಲ್ಲ ಕಾರ್ಯಗಳು ಮುಗಿದು ಹೋಗಬೇಕು ಎನ್ನುವ ಆತುರ ಬೇಡ. ನಿಧಾನವಾದರೂ ತಪ್ಪಿಲ್ಲದಂತೆ, ಬಹಳ ಚೆನ್ನಾಗಿ ಆಗುವಂತೆ ಮಾಡುವ ನಿರ್ಧಾರ ಉತ್ತಮ. ಇಬ್ಬರ ನಡುವೆ ತಂದಿಡುವ ಕೆಲಸ ಸಲ್ಲದು. ಗಾಸಿಪ್ ಹತ್ತಿರ ಹೋಗಿ ಗಾಳಿಯೂದಬೇಡಿ. ಗಣಪತಿಯ ಸ್ಮರಣೆ ಮಾಡಿ. 

ವೃಷಭ(Taurus): ಶುಭ ದಿನಗಳು ಆರಂಭವಾಗುತ್ತಿದೆ. ಆದಾಯ ಹೆಚ್ಚಲಿದೆ. ಹಣಕಾಸಿನ ವಿಚಾರದಲ್ಲಿ ನೆಮ್ಮದಿ ಪಡೆಯುವಿರಿ. ಭವಿಷ್ಯದಲ್ಲಿ ಲಾಭ ತರುವ ಹೊಸ ಡೀಲ್‌ಗಳಿಗೆ ಸಹಿ ಹಾಕುವಿರಿ. ಸಂಗಾತಿಯೊಂದಿಗೆ ಸಮನ್ವಯ ಸಾಧಿಸಲು ಯತ್ನ ಹೆಚ್ಚಿಸಬೇಕು. ಗುರು ಸ್ಮರಣೆ ಮಾಡಿ. 

Latest Videos

ಮಿಥುನ(Gemini): ಕಾರ್ಯ ವಾಸಿ ಕತ್ತೆ ಕಾಲು ಹಿಡಿ ಎನ್ನುವ ಹಾಗೆ ನಿಮಗೆ ಇಷ್ಟವಿಲ್ಲದೇ ಇದ್ದರೂ ಕಾರ್ಯವಾಗಲು ಮತ್ತೊಬ್ಬರನ್ನು ಇಂದ್ರ ಚಂದ್ರ ಎನ್ನಬೇಕಾಗುತ್ತದೆ. ತೊಂದರೆಯಿಲ್ಲ, ಲಾಭವೇ ಇರಲಿದೆ. ಹೊಸ ಉದ್ಯೋಗಾವಕಾಶಗಳು ಎದುರಾಗಲಿವೆ. ಗುರು ಸ್ಮರಣೆ ಮಾಡಿ. 

ಕಟಕ(Cancer): ಹೆಚ್ಚು ಕೆಲಸ ಕಡಿಮೆ ಪ್ರತಿಫಲ. ಹಾಗಂಥ ನಿರಾಶೆ ಆಗುವುದು ಬೇಡ. ಮುಂದೆ ಶುಭ ದಿನಗಳು ಇವೆ. ಮನೆಯಲ್ಲಿ ಶಾಂತಿ ನೆಲೆಯಾಗಲಿದೆ. ನಿರುದ್ಯೋಗಿಗಳಿಗೆ ಅವಕಾಶ ಬರಲಿದೆ. ಗುರುವು ನಿಮ್ಮ ಅದೃಷ್ಟದ ಮನೆಗೆ ಪ್ರವೇಶಿಸಿದ್ದಾನೆ. ಆತ್ಮವಿಶ್ವಾಸದಲ್ಲಿ ಮುನ್ನುಗ್ಗಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಸಿಂಹ(Leo): ಸ್ನೇಹಿತರು, ಬಂಧುಗಳು ನಿಮಗೆ ನೆರವು ನೀಡುವರು. ನಿಮ್ಮ ಬೆಳವಣಿಗೆ ಕಂಡು ಹೊಟ್ಟೆಕಿಚ್ಚು ಪಡುವವರೂ ಇದ್ದಾರೆ. ಅವರ ಬಗ್ಗೆ ಹೆಚ್ಚಿನ ಎಚ್ಚರ ವಹಿಸಿ. ಮನೆಯಲ್ಲಾಗಬೇಕಾದ ಶುಭ ಕಾರ್ಯಗಳಿಗಾಗಿ ಹೆಚ್ಚಿನ ಪ್ರಯತ್ನ ಅಗತ್ಯ. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಕನ್ಯಾ(Virgo): ಮತ್ತೊಬ್ಬರ ಹಂಗಿನಲ್ಲಿ ಸಿಲುಕುವುದಕ್ಕೆ ಹೋಗದಿರಿ. ಸ್ನೇಹಿತರ ಸಹಕಾರಕ್ಕೆ ನಿಲ್ಲಲಿದ್ದೀರಿ. ಆರೋಗ್ಯದಲ್ಲಿ ಕೊಂಚ ಏರುಪೇರು ಸಾಧ್ಯತೆ. ಮಕ್ಕಳ ಬೆಳವಣಿಗೆ ನೆಮ್ಮದಿ ತರುವುದು. ಧನ ಹಾನಿ ಸಂಭವವಿದ್ದು, ಮೈಯೆಲ್ಲ ಎಚ್ಚರವಾಗಿ ವ್ಯವಹರಿಸಿ. ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ. 

Chikkamagaluru: ಹರಿಹರಪುರ ಮಠದಲ್ಲಿ ಕುಂಭಾಭಿಷೇಕಕ್ಕೆ ಭರ್ಜರಿ ಸಿದ್ಧತೆ

ತುಲಾ(Libra): ಕಪಟಿಗಳು, ಜೊತೆಗೇ ಇದ್ದು ಮೋಸ ಮಾಡುವವರ ವಿಚಾರದಲ್ಲಿ ಎಚ್ಚರಿಕೆ ಇರಲಿ. ಎಲ್ಲರನ್ನೂ ಅತಿಯಾಗಿ ನಂಬಿಕೊಳ್ಳಲು ಹೋಗಬೇಡಿ. ಕೊಟ್ಟ ಸಾಲ ಹಿಂದಿರುಗದೆ ಕಂಗಾಲಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಸಂಗಾತಿಯೊಂದಿಗೆ ನೆಮ್ಮದಿಯ ದಿನ. ಬೃಹಸ್ಪತಿ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಯಾವುದೇ ಘಟನೆ ಆದರೂ ಥಟ್ಟನೆ ಪ್ರತಿಕ್ರಿಯೆ ನೀಡುವುದು ಬೇಡ. ತಾಯಿಯ ಅಗತ್ಯಗಳೇನು ಕೇಳಿ ಈಡೇರಿಸಿ. ಹೊಸ ಭರವಸೆಗಳು ಮೈಗೂಡುವುವು. ಅವಿವಾಹಿತರಿಗೆ ಉತ್ತಮ ಫಲಗಳಿವೆ.  ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಗಣಪತಿಗೆ ದೂರ್ವೆ ಅರ್ಪಿಸಿ. 

ಧನುಸ್ಸು(Sagittarius): ಒಂದು ಪಡೆಯುವುದಕ್ಕಾಗಿ ಎರಡು ಕಳೆದುಕೊಳ್ಳುವ ಸ್ಥಿತಿಗೆ ತಲುಪುವುದು ಬೇಡ. ಜಾಣ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿರಿ. ಹತ್ತಿರದವರ ಜೊತೆ ಕಲಹ ಸಂಭವವಿದೆ. ಹೆಚ್ಚಿನ ಹಾನಿ ತಪ್ಪಿಸಲು ಮೌನವಾಗಿರಲು ಪ್ರಯತ್ನಿಸಿ. ಹಲ್ಲು ನೋವು, ಮೂಳೆ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹಸಿರು ಧಾನ್ಯಗಳನ್ನು ದಾನ ಮಾಡಿ.

ಮಕರ(Capricorn): ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಸಂಬಂಧಿಗಳು ಕಷ್ಟದಲ್ಲಿ ಇದ್ದಾರೆ ಎಂದು ತಿಳಿದು ನೀವಾಗಿಯೇ ಸಹಾಯ ಮಾಡಲಿದ್ದೀರಿ. ಹೇಳಿದ್ದು, ಕೇಳಿದ್ದು ಎಲ್ಲ ಸುಳ್ಳಾಗಿರಬಹುದು ಎಂಬ ಪ್ರಜ್ಞೆ ಇರಲಿ. ಶೇರು ವ್ಯವಹಾರಗಳಲ್ಲಿ ಲಾಭವಿರಲಿದೆ. ಹಸಿರು ವಸ್ತ್ರ ದಾನ ಮಾಡಿ. 

ರಾಹು ಕೇತು ಗೋಚಾರ: ಈ ಐದು ರಾಶಿಗಳಿಗೆ ಬಂತು ಕಂಟಕ ಕಾಲ

ಕುಂಭ(Aquarius): ದುಂದು ವೆಚ್ಚಕ್ಕೆ ಕಡಿವಾಣ ಹಾಕಿರಿ. ಸಂಸಾರದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಕೋಪದ ಕೈಗೆ ಬುದ್ದಿ ಕೊಟ್ಟು ಚೆನ್ನಾಗಿರುವುದನ್ನು ಹಾಳು ಮಾಡಿಕೊಳ್ಳುವ ಸಂಭವವಿದೆ. ಸಂಯಮ ವಹಿಸಿ. ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯವಿರಲಿ. ಯೋಗ, ಧ್ಯಾನವನ್ನು ಅಭ್ಯಾಸ ಮಾಡಿಕೊಳ್ಳಿ. 

ಮೀನ(Pisces): ಕೂತು ತಿಂದರೆ ಕುಡಿಕೆ ಹೊನ್ನೂ ಸಾಲುವುದಿಲ್ಲ. ನಿಮ್ಮ ಯೋಗ್ಯತೆಗೆ ತಕ್ಕದ್ದಲ್ಲವೆಂದು ಎಲ್ಲ ಅವಕಾಶಗಳನ್ನೂ ಕಳೆದುಕೊಳ್ಳಬೇಡಿ. ಕಷ್ಟ ಪಟ್ಟರೆ ಫಲವಿರಲಿದೆ. ವೃತ್ತಿರಂಗದಲ್ಲಿ ಏಳ್ಗೆ ಇರುತ್ತದೆ. ಹೊಸ ವಸ್ತುಗಳ ಖರೀದಿ ಖುಷಿ ತರಲಿದೆ. ನಿಮ್ಮ ಗುರುವಿನ ಸ್ಮರಣೆ ಮಾಡಿ. 

 

click me!