Daily Horoscope: ಸೂರ್ಯನ ಮೇಷ ಸಂಕ್ರಮಣ ಇಂದು, ನಿಮ್ಮ ರಾಶಿಫಲ ಹೀಗಿದೆ..

By Suvarna NewsFirst Published Apr 14, 2022, 5:04 AM IST
Highlights

14 ಏಪ್ರಿಲ್ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕನ್ಯಾಗೆ ಕಾರ್ಯ ವಿಳಂಬ, ಕುಂಭಕ್ಕೆ ಸಾಮಾನ್ಯ ದಿನ

ಮೇಷ(Aries): ವ್ಯಾಪಾರ, ವಾಹನಾದಿಗಳಿಂದ ಲಾಭ. ಬಹಳಷ್ಟು ಸಮಯದಿಂದ ಬಾಕಿ ಉಳಿದ ಕೆಲಸಗಳು ನೆರವೇರುವುವು. ದೂರ ಸಂಚಾರಕ್ಕೆ ಸಕಾಲವಲ್ಲ. ಯಾರನ್ನೂ ಚುಚ್ಚಿ ಮಾತಾಡುವುದು, ಹಂಗಿಸುವುದು ಬೇಡ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ಸಂಭವ ಇದೆ. ಆದಿತ್ಯ ಹೃದಯ ಪಠಿಸಿ. 

ವೃಷಭ(Taurus): ಆದಾಯ ಹೆಚ್ಚುವುದು. ಅನುವಂಶಿಕ ಸ್ವತ್ತುಗಳ ಲಾಭ, ಭಾಗ್ಯ ವೃದ್ಧಿ ಅವಕಾಶಗಳಿವೆ. ಕಾರ್ಯರಂಗದಲ್ಲಿ ಕೊಂಚ ಪ್ರಗತಿಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲವಿದೆ. ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಬಹುದು. ಈ ಬಗ್ಗೆ ಎಚ್ಚರ ಅಗತ್ಯ. ವಿಷ್ಣು ಸಹಸ್ರನಾಮ ಹೇಳಿ. 

Latest Videos

ಮಿಥುನ(Gemini): ನ್ಯಾಯಾಲಯ ಕಾರ್ಯ, ಸರ್ಕಾರಿ ಕೆಲಸಗಳು ಅಭಿವೃದ್ಧಿಯನ್ನು ತರಲಿವೆ. ವ್ಯಾಪಾರ, ವ್ಯವಹಾರಗಳ ವಹಿವಾಟಿನಲ್ಲಿ ಉತ್ತಮ ಆದಾಯವಿದೆ. ರಾಜಕೀಯ ವ್ಯಕ್ತಿಗಳಿಗೆ ಸ್ಥಾನಲಾಭವಿದೆ. ಪ್ರಭಾವಿ ವ್ಯಕ್ತಿಗಳ ನೆರವು ದೊರೆಯಲಿದೆ. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಕಟಕ(Cancer): ಮನೆಯಲ್ಲಿ ಮಂಗಲ ಕಾರ್ಯ ಸಂಭವ. ಸಹೋದ್ಯೋಗಿಗಳು ನಿಮ್ಮ ಹೆಸರಿಗೆ ಕಳಂಕ ತರಲು ಪ್ರಯತ್ನಿಸಬಹುದು. ಇದರಿಂದ ಒತ್ತಡಕ್ಕೊಳಗಾಗುವಿರಿ. ಉದ್ಯಮಗಳಲ್ಲಿ ಅಪಾರ ಲಾಭ ಕಾಣುವಿರಿ. ಉದ್ಯೋಗಿಗಳಿಗೆ ಆದಾಯ ಹೆಚ್ಚುವುದು. ನವಗ್ರಹ ಸ್ಮರಣೆ ಮಾಡಿ. 

ಸಿಂಹ(Leo): ಉನ್ನತ ವ್ಯಾಸಂಗಕ್ಕಾಗಿ ವಿದೇಶ ಪ್ರವಾಸ ಮಾಡಬೇಕಾಗಬಹುದು. ತಂದೆಯೊಂದಿಗೆ ಕಿರಿಕಿರಿ ಹೆಚ್ಚಲಿದೆ. ಉದ್ಯಮ ವಿಸ್ತರಿಸುವ ಕೆಲಸ ನಡೆಯಬಹುದು. ವಿದೇಶಿ ವ್ಯವಹಾರಗಳು ಸಲೀಸಾಗಿ ನಡೆಯುತ್ತವೆ. ಸಂಗಾತಿಯ ಸಹಕಾರ ಸಿಗಲಿದೆ. ರಾಘವೇಂದ್ರ ಶತನಾಮಾವಳಿ ಹೇಳಿಕೊಳ್ಳಿ. 

ಕನ್ಯಾ(Virgo): ಯೋಜಿತ ಕಾರ್ಯಗಳು ವಿಳಂಬವಾಗಿ ಆತಂಕವಾಗುವುದು. ಕಂಕಣ ಬಲದಲ್ಲಿ ಅಡ್ಡಿ ಆತಂಕಗಳು ಮುಗಿದಂತೆ ಕಾಣುತ್ತಿಲ್ಲ. ಇದೊಂದು ಸಾಧಾರಣ ದಿನವಾಗಿದ್ದು, ಮಾನಸಿಕವಾಗಿ ಸ್ವಲ್ಪ ಮಟ್ಟಿನ ಒತ್ತಡವಿರಲಿದೆ. ಕುಟುಂಬ ಸೌಖ್ಯಕ್ಕಾಗಿ ನೀವು ತಗ್ಗಬೇಕು. ಗೋಧಿ ದಾನ ಮಾಡಿ. 

ಮೇಷ ರಾಶಿಯಲ್ಲಿ ಸೂರ್ಯ ಸಂಕ್ರಮಣ: ಈ ನಾಲ್ಕು ರಾಶಿಗಳಿಗೆ ಶುರುವಾಯ್ತು ಒಳ್ಳೆ ದಿನ

ತುಲಾ(Libra): ವೃತ್ತಿರಂಗದಲ್ಲಿ ಯಶೋಲಾಭವಿದೆ. ಪಾಲುದಾರರೊಂದಿಗೆ ವೃಥಾ ವಾಗ್ವಾದದಿಂದ ಭಿನ್ನಾಭಿಪ್ರಾಯ ಹೆಚ್ಚುವುದು. ಅವಿರತ ದುಡಿಮೆಯೊಂದಿಗೆ ಅನಾರೋಗ್ಯವೂ ತೋರಿ ಕಿರಿಕಿರಿ ಎನಿಸಲಿದೆ. ಧನ ಲಾಭವಿದೆ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ವಿಷ್ಣು ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಭೂಮಿ, ಕಾರ್ಖಾನೆ ಕಸುಬಿನವರಿಗೆ ನಷ್ಟ. ಸಾಂಸಾರಿಕ ಸುಖ ಚೆನ್ನಾಗಿರಲಿದೆ. ಅಪವಾದ ಭಯ ಕಾಡುವುದು. ಆಪ್ತರು ನಯವಂಚಕರಾಗಿ ಬದಲಾಗಬಹುದು. ಕೋಪ ತಾಪಗಳು ನೆಮ್ಮದಿ ಕೆಡಿಸಲಿವೆ. ವಿದ್ಯಾರ್ಥಿಗಳು ಪರಿಶ್ರಮ ಹೆಚ್ಚಿಸಬೇಕು. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಧನುಸ್ಸು(Sagittarius): ದೇವತಾ ಕಾರ್ಯಕ್ಕಿದು ಸುಗಮ ಕಾಲ. ಬಂಧು ಬಳಗದ ಸಂಪೂರ್ಣ ಸಹಕಾರ ಸಿಗಲಿದೆ. ಧನಾಗಮನ ಚೆನ್ನಾಗಿರುವುದರಿಂದ ಕಾರ್ಯದಲ್ಲಿ ಉತ್ಸಾಹ ಹೆಚ್ಚಲಿದೆ. ಮಕ್ಕಳ ಕಲಿಕೆ ಉತ್ತಮವಾಗಿರಲಿದೆ. ತಂದೆ ತಾಯಿಯ ಬಗ್ಗೆ ಕೊಂಚ ಆತಂಕವಾಗುವುದು. ಗೋ ಗ್ರಾಸ ನೀಡಿ. 

ಮಕರ(Capricorn): ಉದ್ಯೋಗ ವರ್ಗದವರಿಗೆ ಸಂಬಳದ ಕುರಿತ ಅಸಮಾಧಾನ ಕಾಡಿ ಕೆಲಸ ಮಾಡುವ ಆಸಕ್ತಿ ಕಳೆದುಕೊಳ್ಳಬಹುದು. ಹೊಸ ಹೂಡಿಕೆ ಫಲ ನೀಡದು. ವ್ಯಾಪಾರ ವ್ಯವಹಾರಗಳು ಹೆಚ್ಚು ಲಾಭ ತಂದರೂ ಖರ್ಚು ವೆಚ್ಚ ಅದನ್ನು ಮೀರಿ ಇರುವುದು. ಸಂಗಾತಿಯೊಂದಿಗೆ ಮುನಿಸು ತಲೆದೋರಲಿದೆ. ನಿಮ್ಮ ಗುರುಗಳ ಸ್ಮರಣೆ ಮಾಡಿ. 

Mahavir Jayanti ಯಾವಾಗ? ಹಬ್ಬದ ವೈಶಿಷ್ಟ್ಯತೆ ಏನು?

ಕುಂಭ(Aquarius): ತಪ್ಪಿ ಹೋದ ಅವಕಾಶಗಳು ಪುನಾ ಲಭಿಸಲಿವೆ. ಸಂಗಾತಿಯ ಮನದಾಸೆ ಪೂರೈಸಲು ಹೆಚ್ಚಿನ ಧನ ವ್ಯಯವಾದೀತು. ಆಸ್ತಿ ವಿಚಾರವಾಗಿ ಸಂತೋಷ ಇರಲಿದೆ. ಕಾರ್ಯಗಳು ಮುಂದೆ ಸಾಗಲಿವೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವರು. ಸೂರ್ಯನಿಗೆ ಅರ್ಘ್ಯ ನೀಡಿ. 

ಮೀನ(Pisces): ಬಹಳ ಕಾಲದಿಂದ ಬಾಕಿ ಇರಿಸಿಕೊಂಡ ಸರ್ಕಾರಿ ಕೆಲಸಗಳು ಈಡೇರಲಿವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಿದ್ದಿಸಲಿದೆ. ಧಾರ್ಮಿಕ ವಿಚಾರಗಳಲ್ಲಿ ಸಮಯ ವ್ಯಯಿಸುವಿರಿ. ಮಾತು ಮುಖ್ಯವಾಗಿರುವ ಕೆಲಸಗಳಲ್ಲಿ ಪ್ರಶಂಸೆ ಗಳಿಸುವಿರಿ. ಮನೆ ದೇವರ ಸ್ಮರಣೆ ಮಾಡಿ. 

click me!