ಗುಜರಾತ್: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವಿದ್ಯಾರ್ಥಿ ಬಂಧನ: ಪಾಕ್ ಕೈವಾಡ ಶಂಕೆ

Published : May 23, 2022, 05:35 PM IST
ಗುಜರಾತ್: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ವಿದ್ಯಾರ್ಥಿ ಬಂಧನ: ಪಾಕ್ ಕೈವಾಡ ಶಂಕೆ

ಸಾರಾಂಶ

ಮಾರುಕಟ್ಟೆಯಲ್ಲಿ 2000 ರೂಪಾಯಿಯ ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ 20 ವರ್ಷದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ನಕಲಿ ನೋಟುಗಳನ್ನು ಪಾಕಿಸ್ತಾನದ ಮೂಲಕ ದೇಶಕ್ಕೆ ತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಗುಜರಾತ್‌ (ಮೇ 23): 20 ವರ್ಷದ ಕಂಪ್ಯೂಟರ್ ಇಂಜಿನಿಯರ್ ವಿದ್ಯಾರ್ಥಿಯನ್ನು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದು, ಈತ ಶೀಘ್ರ ಹಣ ಗಳಿಸಲು 2000 ರೂಪಾಯಿಯ ಭಾರತೀಯ ಕರೆನ್ಸಿಯ ನಕಲಿ ನೋಟುಗಳನ್ನು (Fake Currency) ಮಾರುಕಟ್ಟೆಗೆ ಚಲಾವಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಆರೋಪಿ ದಿಲೀಪ್ ಕೇಶ್ವಾಲಾನನ್ನು 2000 ರೂಪಾಯಿ ಮುಖಬೆಲೆಯ 1.94 ಲಕ್ಷ ರೂಪಾಯಿ ಮೌಲ್ಯದ ನಕಲಿ ನೋಟುಗಳೊಂದಿಗೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕಲಿ ನೋಟುಗಳನ್ನು ಪಾಕಿಸ್ತಾನದ (Pakistan) ಮೂಲಕ ಭಾರತಕ್ಕೆ ತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಲ್ಲದೇ ಘಟನೆಯ ಹಿಂದಿನ ಪ್ರಮುಖ ಮಾಸ್ಟರ್ ಮೈಂಡ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

“ಕೇಶ್ವಾಲಾ ಅಡ್ಡ ವ್ಯಾಪಾರ ಮಾಡುವ ಮೂಲಕ ತ್ವರಿತವಾಗಿ ಹಣವನ್ನು ಗಳಿಸಲು ಬಯಸಿದ್ದ.  ಐದು ತಿಂಗಳ ಹಿಂದೆ ಆನ್‌ಲೈನ್ ಪೋರ್ಟಲ್ ಮೂಲಕ ಮುಖ್ಯ ಮಾಸ್ಟರ್‌ಮೈಂಡ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದ" ಎಂದು ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸ್ ಇನ್ಸ್‌ಪೆಕ್ಟರ್ ಡಿಬಿ ಬರಾದ್ ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ

ಕಾರ್ಯ ವಿಧಾನ ಹೇಗೆ?: ಪೋಲೀಸರ ಪ್ರಕಾರ, ಮುಖ್ಯ ಮಾಸ್ಟರ್ ಮೈಂಡ್ 2000 ರೂಪಾಯಿ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿಯನ್ನು (Fake Note) ಕೊರಿಯರ್ ಮೂಲಕ ಕೇಶ್ವಾಲಾಗೆ ಕಳುಹಿಸಿದ್ದಾನೆ. ಕೇಶ್ವಾಲಾ ನಂತರ ಈ ನಕಲಿ ಭಾರತೀಯ ನೋಟುಗಳ ಮೂಲಕ ಗ್ಯಾಜೆಟ್‌ಗಳು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸುತ್ತಾರೆ ಎಂದು ಬರಾದ್ ತಿಳಿಸಿದ್ದಾರೆ. 

ಇದನ್ನೂ ಓದಿ: ನಕಲಿ ನೋಟು ಅದಲು ಬದಲು ಪ್ರಕರಣ: ಮತ್ತೆ ನಾಲ್ವರ ಬಂಧನ

ಕೇಶ್ವಾಲಾ ಗ್ಯಾಜೆಟ್/ಎಲೆಕ್ಟ್ರಾನಿಕ್ ಉಪಕರಣಗಳನ್ನು (Electronics) ಖರೀದಿಸಿದ ನಂತರ ಅದನ್ನು ಮತ್ತೊಂದು ಅಂಗಡಿಗೆ ಮಾರಾಟ ಮಾಡುತ್ತಾರೆ ಮತ್ತು ಪ್ರತಿಯಾಗಿ ಮೂಲ ಭಾರತೀಯ ಕರೆನ್ಸಿಯನ್ನು ಪಡೆಯುತ್ತಾನೆ.  ಇದೇ ರೀತಿಯ ಇನ್ನೂ ಅನೇಕ ವಹಿವಾಟುಗಳ ನಂತರ, ಆರೋಪಿಯು ಗಣನೀಯ ಮೊತ್ತವನ್ನು ನಗದು ರೂಪದಲ್ಲಿ ಸಂಗ್ರಹಿಸುತ್ತಾನೆ, ನಂತರ ಅವನು ಅಂಗಾಡಿಯಾ ಮೂಲಕ ಕಳುಹಿಸುತ್ತಾನೆ.

ಅಂಗಾಡಿಯಾ ವ್ಯವಸ್ಥೆಯು ದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಸಮಾನಾಂತರ ಬ್ಯಾಂಕಿಂಗ್ ವ್ಯವಸ್ಥೆಯಾಗಿದ್ದು, ವ್ಯಾಪಾರಿಗಳು ಕೊರಿಯರ್ ಪ್ರತಿನಿಧಿಸುವ ಅಂಗಡಿಯಾ ಎಂಬ ವ್ಯಕ್ತಿಯ ಮೂಲಕ ಸಾಮಾನ್ಯವಾಗಿ ಒಂದು ರಾಜ್ಯದಿಂದ ಇನ್ನೊಂದಕ್ಕೆ ಹಣವನ್ನು ಕಳುಹಿಸುತ್ತಾರೆ.

ಬಳಿಕ ಅಂಗಾಡಿಯಾ ಬಿಟ್‌ಕಾಯಿನ್ (Bitcoin) ಖಾತೆ ಮೂಲಕ ಮುಖ್ಯ ಮಾಸ್ಟರ್‌ಮೈಂಡ್‌ಗೆ ಹಣವನ್ನು ಕಳುಹಿಸುತ್ತಾರೆ. ಈ ರೀತಿಯಾಗಿ, ಪ್ರಮುಖ ಆರೋಪಿಯ ಗುರುತು ಎಂದಿಗೂ ಬಹಿರಂಗಗೊಳ್ಳುವುದಿಲ್ಲ.

ಈ ಸಂಪೂರ್ಣ ಕಾರ್ಯಾಚರಣೆಯ ಹಿಂದಿನ ಪ್ರಮುಖ ಸಂಚುಕೋರ ಕೇಶ್ವಾಲಾ ಅವರಂತಹ ಅನೇಕ ಸೇವಾ ಹುಡುಗರನ್ನು ಹೊಂದಿದ್ದು, ಅವರು ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಇದನ್ನೂ ಓದಿ: ಖೋಟಾ ನೋಟಿನ ದಂಧೆ: ಖತರ್ನಾಕ್ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಉತ್ತರ ಕನ್ನಡ ಪೊಲೀಸರು

ಕೇಶ್ವಾಲಾ ಕಳೆದ ಐದು ತಿಂಗಳಿನಿಂದ ವಂಚನೆಯ ಪ್ರಮುಖ ಸಂಘಟಕನಾಗಿ ಕೆಲಸ ಮಾಡುತ್ತಿದ್ದಾನೆ ಮತ್ತು ಅಂತಹ ಹಲವಾರು ವಹಿವಾಟುಗಳನ್ನು ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸಂಚುಕೋರನನ್ನು ಬಂಧಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಮತ್ತು ಪಾಕಿಸ್ತಾನದ ಮೂಲಕ ಭಾರತಕ್ಕೆ ನಕಲಿ ನೋಟುಗಳನ್ನು ಹೇಗೆ ತರುತ್ತಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?