ಟಿ20 ವಿಶ್ವ​ಕಪ್‌ಗೆ ಮೂವರು ವೇಗಿಗಳು ಫಿಕ್ಸ್, ಮತ್ತೊಬ್ಬ ಯಾರು..?

Published : Dec 06, 2019, 01:17 PM IST
ಟಿ20 ವಿಶ್ವ​ಕಪ್‌ಗೆ ಮೂವರು ವೇಗಿಗಳು ಫಿಕ್ಸ್, ಮತ್ತೊಬ್ಬ ಯಾರು..?

ಸಾರಾಂಶ

ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡದ ವೇಗಿಗಳಾಗಿ ಮೂವರು ಸ್ಥಾನ ಭದ್ರವಾಗಿದ್ದು, ಇನ್ನೊಂದು ಸ್ಥಾನ ಸದ್ಯದಲ್ಲೇ ನಿರ್ಧಾರವಾಗಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ

ಹೈದ​ರಾ​ಬಾದ್‌[ಡಿ.06]: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ 2020ರ ಟಿ20 ವಿಶ್ವ​ಕಪ್‌ಗೆ ತಂಡದ ಸಂಯೋ​ಜನೆಯ ಗುಟ್ಟನ್ನು ಬಿಚ್ಚಿ​ಟ್ಟಿ​ದ್ದಾರೆ. ಆಸ್ಪ್ರೇ​ಲಿ​ಯಾ​ದಲ್ಲಿ ನಡೆ​ಯ​ಲಿ​ರುವ ವಿಶ್ವ​ಕಪ್‌ಗೆ ತಂಡ ನಾಲ್ವರು ವೇಗಿ​ಗ​ಳನ್ನು ಆಯ್ಕೆ ಮಾಡಲು ನಿರ್ಧ​ರಿ​ಸಿದ್ದು, ಆ ಪೈಕಿ ಮೂವರು ಯಾರೆಂಬುದು ನಿರ್ಧಾರವಾಗಿದೆ ಎಂದು ಹೇಳಿದ್ದಾರೆ. 

ಇಂದಿನ ಪಂದ್ಯದಲ್ಲೇ 3ನೇ ಅಂಪೈರ್‌ನಿಂದ ನೋಬಾಲ್‌ ನಿರ್ಧಾ​ರ!

‘ಒಂದು ಸ್ಥಾನ​ಕ್ಕಾಗಿ ಪೈಪೋಟಿ ಇದೆ. ಮೂವರು ತಮ್ಮ ಸ್ಥಾನ​ಗ​ಳನ್ನು ಬಹು​ತೇಕ ಖಚಿತಪಡಿ​ಸಿ​ಕೊಂಡಿದ್ದಾರೆ. ಇದೊಂದು ಅರೋ​ಗ್ಯ​ಕರ ಸ್ಪರ್ಧೆ​ಯಾ​ಗ​ಲಿದ್ದು, ಹೇಗೆ ಸಾಗ​ಲಿದೆ ಎನ್ನು​ವುದು ಕುತೂ​ಹಲ ಮೂಡಿ​ಸಿದೆ’ ಎಂದು ಕೊಹ್ಲಿ ಹೇಳಿ​ದರು. ಭಾರತ ತಂಡದ ವೇಗಿ​ಗಳ ಆಯ್ಕೆಯಲ್ಲಿ ಇರುವ ಗೊಂದಲದ ಬಗ್ಗೆ ಮಾತ​ನಾ​ಡಿದ ಕೊಹ್ಲಿ, ‘ಆಯ್ಕೆ ವಿಚಾರದಲ್ಲಿ ಹೆಚ್ಚೇನೂ ಸಮಸ್ಯೆ ಆಗು​ವು​ದಿಲ್ಲ. ಭುವ​ನೇ​ಶ್ವರ್‌ ಕುಮಾರ್‌ ಹಾಗೂ ಜಸ್ಪ್ರೀತ್‌ ಬುಮ್ರಾ ಅನು​ಭವ ಹೊಂದಿ​ದ್ದಾರೆ. ಮೊಹಮದ್‌ ಶಮಿ ಟಿ20 ತಂಡಕ್ಕೆ ಮರ​ಳಿದ್ದು, ಅವ​ರೊ​ಬ್ಬ ಅದ್ಭುತ ಬೌಲರ್‌. ಟಿ20 ಮಾದ​ರಿ​ಯಲ್ಲೂ ಅವರ ದಾಖಲೆ ಅತ್ಯು​ತ್ತಮವಾ​ಗಿದೆ’ ಎಂದರು.

ಇಂಡೋ-ವಿಂಡೀಸ್‌ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ದೀಪಕ್‌ ಚಹರ್‌ ತಂಡಕ್ಕೆ ಕಾಲಿಟ್ಟ ಕೆಲವೇ ದಿನ​ಗ​ಳಲ್ಲಿ ತಾವು ವಿಶ್ವ​ಕಪ್‌ ತಂಡಕ್ಕೆ ಆಯ್ಕೆಯಾಗಬಲ್ಲ ಬೌಲರ್‌ ಎನಿ​ಸಿದ್ದಾರೆ. ಆರಂಭಿಕ ಹಾಗೂ ಕೊನೆ ಓವರ್‌ಗಳಲ್ಲಿ ಬೌಲ್‌ ಮಾಡುವ ಸಾಮರ್ಥ್ಯ ಹೊಂದಿದ್ದು, ಒತ್ತಡ ನಿಭಾ​ಯಿ​ಸುವ ಕಲೆ ಸಹ ಇದೆ. ಹೀಗಾಗಿ, 4ನೇ ಆಯ್ಕೆ ಅವರೇ ಆಗ​ಲಿ​ದ್ದಾರೆ ಎಂದು ಹಲವರು ಅಭಿ​ಪ್ರಾ​ಯಿ​ಸಿ​ದ್ದಾರೆ. ಖಲೀಲ್‌ ಅಹ್ಮದ್‌, ಶಾರ್ದೂಲ್‌ ಠಾಕೂರ್‌, ನವ್‌ದೀಪ್‌ ಸೈನಿ, ಉಮೇಶ್‌ ಯಾದವ್‌ ನಡುವೆ ಪೈಪೋಟಿ ಇದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?