
ದುಬೈ[ಡಿ.06]: ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಟಿ20 ಹಾಗೂ ಏಕದಿನ ಸರಣಿಯಲ್ಲಿ ಬೌಲರ್ಗಳು ನೋಬಾಲ್ ಎಸೆದರೆ ಅದನ್ನು ಮೈದಾನದಲ್ಲಿರುವ ಅಂಪೈರ್ ಬದಲಿಗೆ ಮೂರನೇ ಅಂಪೈರ್ ನಿರ್ಧರಿಸಲಿದ್ದಾರೆ ಎಂದು ಗುರುವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಘೋಷಿಸಿತು.
ಇಂಡೋ-ವಿಂಡೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ
ನೋಬಾಲ್ ನಿರ್ಧರಿಸಲು ತಂತ್ರಜ್ಞಾನದ ಸಹಾಯ ಪಡೆಯಲಿದ್ದು, 3ನೇ ಅಂಪೈರ್ ಪ್ರತಿ ಎಸೆತವನ್ನು ಗಮನಿಸಲಿದ್ದಾರೆ. ಇದೇ ಮೊದಲು 2016ರಲ್ಲಿ ಈ ಪ್ರಯೋಗ ನಡೆದಿತ್ತು. ಆದರೆ ಭಾರತ ಆಡುವ ಪಂದ್ಯದಲ್ಲಿ ಇಂತಹ ಪ್ರಯೋಗ ಇದೇ ಮೊದಲು. ಇದೇ ವರ್ಷ ಆಗಸ್ಟ್ನಲ್ಲಿ ನೋಬಾಲ್ ನಿರ್ಧಾರಿಸುವ ಜವಾಬ್ದಾರಿ 3ನೇ ಅಂಪೈರ್ನದ್ದು ಎಂದು ಐಸಿಸಿ ಘೋಷಿಸಿತ್ತು. ಆ ಪ್ರಯೋಗವನ್ನು ಸರಣಿಯಲ್ಲಿ ನಡೆಸಲಿದೆ. ಮುಂಬರುವ ದಿನಗಳಲ್ಲಿ ಕೆಲ ಆಯ್ದ ಸರಣಿಗಳಲ್ಲಿ ಈ ಪ್ರಯೋಗ ನಡೆಸಿ, ತಂತ್ರಜ್ಞಾನ ಸಹಾಯದ ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ.
ನೋಬಾಲ್ ಘೋಷಣೆ ಹೇಗೆ?
3ನೇ ಅಂಪೈರ್ ಪ್ರತಿ ಎಸೆತವನ್ನು ಟೀವಿ ಪರದೆಯಲ್ಲಿ ವೀಕ್ಷಿಸಲಿದ್ದಾರೆ. ನೋಬಾಲ್ ಎಂದು ನಿರ್ಧರಿಸಿದ ಬಳಿಕ ಆ ತೀರ್ಪನ್ನು ಮೈದಾನದಲ್ಲಿರುವ ಅಂಪೈರ್ಗೆ ತಿಳಿಸಲಿದ್ದಾರೆ. ಒಂದೊಮ್ಮೆ ನೋಬಾಲ್ನಲ್ಲಿ ವಿಕೆಟ್ ಪತನಗೊಂಡಿದ್ದರೆ, ಬ್ಯಾಟ್ಸ್ಮನ್ನನ್ನು ಕ್ರೀಸ್ಗೆ ಮರಳುವಂತೆ ಸೂಚಿಸಲಾಗುತ್ತದೆ. 3ನೇ ಅಂಪೈರ್ನ ಸೂಚನೆ ಇಲ್ಲದೆ ಮೈದಾನದಲ್ಲಿರುವ ಅಂಪೈರ್ಗಳು ನೋಬಾಲ್ ಘೋಷಿಸುವುದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.