ಕಿಚ್ಚನ 'ಪೈಲ್ವಾನ್‌' ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

Suvarna News   | Asianet News
Published : Jan 28, 2020, 04:09 PM IST
ಕಿಚ್ಚನ 'ಪೈಲ್ವಾನ್‌' ನೃತ್ಯ ನಿರ್ದೇಶಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ!

ಸಾರಾಂಶ

ಬಾಲಿವುಡ್‌ ಸ್ಟಾರ್ ಡ್ಯಾನ್ಸ್‌ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ವಿರುದ್ಧ ಮಹಿಳೆಯೊಬ್ಬಳು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಿ, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟಕ್ಕೂ ಈ ಫೇಮಸ್ ನೃತ್ಯ ನಿರ್ದೇಶಕ ಮಾಡಿದ ತಪ್ಪೇನು?  

ಬಿ-ಟೌನ್‌ನಲ್ಲಿ ಹೆಚ್ಚು ಡಿಮ್ಯಾಂಡ್‌ ಇರುವ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ಮೂಲತಃ ಚೆನ್ನೈನವರು. 12ನೇ ವಯಸ್ಸಿಗೆ ನೃತ್ಯ ಕಲಿತು, 19ನೇ ವಯಸ್ಸಿಗೆ ನೃತ್ಯ ಶಾಲೆ ತೆರೆದ ಗಣೇಶ್ ತಮ್ಮ ಸಂಸ್ಥೆಯಿಂದ ಮುಂಬೈ ಸ್ಲಂ ಮಕ್ಕಳಿಗೆ ಫ್ರೀ ಡ್ಯಾನ್ಸ್‌ ಹೇಳಿಕೊಟ್ಟಿದ್ದಾರೆ. ಇದರಿಂದಾನೇ ಎಷ್ಟೋ ಮಕ್ಕಳು ತಮ್ಮ ಜೀವನ ನಿರೂಪಿಸಿಕೊಂಡಿದ್ದಾರೆ. 

ದೇಹವನ್ನು ಇಂಚಿಂಚೂ ನೋಡಬೇಕೆಂದಿದ್ದ ನಿರ್ದೇಶಕ: ನಟಿ ಆರೋಪ

ಗಣೇಶ್‌ ಶಾಲೆಯಲ್ಲೇ ನೃತ್ಯ ವಿದ್ಯಾರ್ಥಿನಿಯಾಗಿದ್ದ ಮಹಿಳೆಯೊಬ್ಬಳು ಇದೀಗ ಇರವರಿಗೆ ಸಹಾಯಕ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಗಣೇಶ್‌ ಕೆಲವು ದಿನಗಳಿಂದ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ ಮಾಡುತ್ತಿದ್ದಾರೆ, ಎಂದು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಈ ಮಹಿಳೆ. ದೂರು ದಾಖಲಿಸಿಕೊಂಡ ಪೊಲೀಸರು ಗಣೇಶ್‌ ಅವರ ವಿಚಾರಣೆ ನಡೆಸುತ್ತಿದ್ದಾರೆ. 

ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ; ಮತ್ತೆ ಕೋರ್ಟ್ ಮೆಟ್ಟಿಲೇರಿದ ತನುಶ್ರೀ ದತ್ತಾ

ಚಿತ್ರರಂಗದಲ್ಲಿ ಅವಕಾಶಗಳನ್ನು ಹೆಚ್ಚೆಚ್ಚು ಗಿಟ್ಟಿಸಿಕೊಳ್ಳುತ್ತಿರುವ ಮಹಿಳೆಗೆ ಕೆಲವು ದಿನಗಳಿಂದ ಕಮಿಷನ್‌ ಕೊಡುವಂತೆಯೂ ಗಣೇಶ್‌ ಒತ್ತಾಯಿಸುತ್ತಿದ್ದಾರಂತೆ. ಒಂದು ವೇಳೆ ಹಣ ನೀಡದಿದ್ದರೆ ಪೋರ್ನ್‌ ವಿಡಿಯೋ ನೋಡಬೇಕು ಎಂದು ಹೇಳುತ್ತಿದ್ದಾರೆಂದು, ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಹಿಂದೆ ಗಣೇಶ್‌ ವಿರುದ್ಧ ಸರೋಜ್‌ ಖಾನ್‌ ಹಾಗೂ ತನುಶ್ರೀ ದತ್ತಾ ಸಹ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 

ಕಿಚ್ಚ ಸುದೀಪ್‌ ಅಭಿನಯದ 'ಪೈಲ್ವಾನ್' ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ' ಕೆಜಿಎಫ್‌ ಚಾಪ್ಟರ್‌-1' ಚಿತ್ರಕ್ಕೆ ಗಣೇಶ್‌ ಡ್ಯಾನ್ಸ್‌ ಕೊರಿಯೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!