ಇಸ್ರೇಲ್‌ ಮೇಲೆ ಹಮಾಸ್‌ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್‌

Published : Oct 25, 2023, 04:43 PM IST
ಇಸ್ರೇಲ್‌ ಮೇಲೆ ಹಮಾಸ್‌ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್‌

ಸಾರಾಂಶ

ಇಸ್ರೇಲ್‌ ಮೇಲೆ ಹಮಾಸ್‌ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ಅರಬ್​-ಇಸ್ರೇಲಿ ನಟಿ ಮೈಸಾ ಅಬ್ದೆಲ್​ ಹದಿ ಅವರನ್ನು ಬಂಧಿಸಲಾಗಿದೆ.   

ಇಸ್ರೇಲ್‌ ಮತ್ತು ಹಮಾಸ್‌ ಉಗ್ರರ ನಡುವೆ ನಡೆಯುತ್ತಿರುವ ದಾಳಿ-ಪ್ರತಿದಾಳಿ ವಿಕೋಪಕ್ಕೆ ಹೋಗಿರುವ ನಡುವೆಯೇ, ಎರಡೂ ಪಕ್ಷಗಳ ಪರವಾಗಿ ತಮ್ಮದೇ ಆದ ರೀತಿಯಲ್ಲಿ ಹಲವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಇಸ್ರೇಲ್‌ ಮೇಲೆ ಭೀಕರವಾಗಿ ದಾಳಿ ನಡೆಸಿ ಸಹಸ್ರಾರು ಮಂದಿಯ ಮಾರಣ ಹೋಮ ಮಾಡಿ ದಾಳಿಗೆ ಕಾರಣರಾದ ಹಮಾಸ್‌ ಗುಂಪನ್ನು ಕೆಲವರು ಉಗ್ರರು ಎಂದರೆ ಇನ್ನು ಕೆಲವರು ಅವರನ್ನು ಸೈನಿಕರು ಎಂದು ಕರೆದು ಅವರ ಪರವಾಗಿ ತಮ್ಮ ವಾದವನ್ನು ಇಡುತ್ತಿದ್ದಾರೆ. ಇನ್ನು ಕೆಲವರು ಇಸ್ರೇಲ್‌ ಮೇಲೆ ಕರುಣೆ ತೋರುತ್ತಿದ್ದರೆ, ಹಮಾಸ್‌ ಪರವಾಗಿ ಇರುವವರು ಇಸ್ರೇಲ್‌ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.

ಇವೆಲ್ಲವುಗಳ ನಡುವೆಯೇ, ಇಸ್ರೇಲ್‌ ಮತ್ತು ಹಮಾಸ್‌ ನಡುವಿನ ಈ ಯುದ್ಧದ ಕುರಿತು ಪೋಸ್ಟ್‌ ಮಾಡಿ ಅರೆಸ್ಟ್‌ ಆಗಿದ್ದಾರೆ ಖ್ಯಾತ ನಟಿ ಮೈಸಾ ಅಬ್ದೆಲ್​ ಹದಿ (Maisa Abdel Hadi). ಇವರು ಅರಬ್​-ಇಸ್ರೇಲಿ ನಟಿ. ಈ ಯುದ್ಧಕ್ಕೆ ಸಂಬಂಧಿಸಿದಂತೆ  ಆಕ್ಷೇಪಾರ್ಹ ರೀತಿಯಲ್ಲಿ ಪೋಸ್ಟ್​ ಮಾಡಿದ ಕೆಲವರನ್ನು ಇದಾಗಲೇ ಅರೆಸ್ಟ್‌ ಮಾಡಲಾಗಿದ್ದು, ಭಯೋತ್ಪಾದನೆಗೆ ಪ್ರಚೋದನೆ ನೀಡುವ ಹೇಳಿಕೆ ಕೊಟ್ಟಿರುವ ಆರೋಪದ ಮೇಲೆ ಮೈಸಾ ಅವರು ಅರೆಸ್ಟ್‌ ಆಗಿದ್ದಾರೆ.  

ಅರ್ಜುನ್‌ ಕಪೂರ್‌ ಜೊತೆ ಬ್ರೇಕಪ್‌ ಆಗಿದ್ದು ನಿಜನಾ? ಕೊನೆಗೂ ಮೌನ ಮುರಿದ ಮಲೈಕಾ ಅರೋರಾ

ಮೈಸಾ ಅದ್ಬೆಲ್​ ಹದಿ ಇಸ್ರೇಲ್​ನ ನಝರತ್​ ನಗರದಲ್ಲಿ ವಾಸಿಸುತ್ತಿದ್ದಾರೆ.  ಅವರು ಇಸ್ರೇಲ್​ ಮೇಲೆ ಹಮಾಸ್​ ನಡೆಸಿದ ದಾಳಿಯ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದರು. ಆ ಫೋಟೋದಲ್ಲಿ ಹಮಾಸ್​ ಉಗ್ರರು ಬುಲ್ಡೋಜರ್​ ಬಳಸಿ ಇಸ್ರೇಲ್​ ಗಡಿಯ ಬೇಲಿಯನ್ನು ಮುರಿದು ನುಗ್ಗುತ್ತಿದ್ದರು. ಇದಕ್ಕೆ ಅವರು ನೀಡಿರುವ ಶೀರ್ಷಿಕೆಯಿಂದ ಅವರು ಅರೆಸ್ಟ್‌ ಆಗಿದ್ದಾರೆ. ಅವರು ‘ಬರ್ಲಿನ್​ ಶೈಲಿಯಲ್ಲಿ ಹೋಗೋಣ’ ಎಂದು ಬರೆದುಕೊಂಡಿದ್ದರು. ಬರ್ಲಿನ್‌ ಶೈಲಿಗೂ, ನಟಿಯ ಅರೆಸ್ಟ್‌ಗೂ ಕಾರಣವೂ ಇದೆ. ಅದೇನೆಂದರೆ, 1989ರ ನವೆಂಬರ್​ 9ರಂದು ಲಕ್ಷಾಂತರ ಜನರು ಬರ್ಲಿನ್​ ಗೋಡೆಯನ್ನು ನಾಶಪಡಿಸಿದ್ದರು. ಇದೀಗ ಹಮಾಸ್‌ ಉಗ್ರರೂ, ಇದೇ ರೀತಿಯಲ್ಲಿ ಇಸ್ರೇಲ್​ನ ಗಡಿಯನ್ನು ನಾಶ ಮಾಡಬೇಕು ಎಂದು ನಟಿ ಹೇಳಿದ್ದರು. ಇಷ್ಟೇ ಅಲ್ಲದೇ ಹಮಾಸ್‌ ಉಗ್ರರು ಇಸ್ರೇಲಿಗರನ್ನು ಒತ್ತೆಯಾಳಾಗಿಟ್ಟುಕೊಂಡಿರುವ ಫೋಟೋಗಳನ್ನು ಶೇರ್‌ ಮಾಡಿದ್ದ ನಟಿ ಇದಕ್ಕೆ ನಗುವ ಎಮೋಜಿ ಹಾಕಿದ್ದರು. 

ಇದು ಭಯೋತ್ಪಾದನೆಗೆ ಕುಮ್ಮಕ್ಕು ಎನ್ನುವ ನಿಟ್ಟಿನಲ್ಲಿ ಅರೆಸ್ಟ್‌ ಮಾಡಲಾಗಿದೆ. ನಟಿಯ ವಿಚಾರಣೆ ನಡೆಸಲಾಗುತ್ತಿದೆ. ಅಂದಹಾಗೆ ಯುದ್ಧ ಇದೀಗ 18ನೇ ದಿನಕ್ಕೆ ಕಾಲಿಟ್ಟಿದೆ. ಸುಮಾರು ಏಳು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.  

ಕೈಕೊಟ್ಟ ಐಶ್ವರ್ಯ ರೈ, ಮಾಜಿ ಪ್ರೇಮಿ ಸಲ್ಮಾನ್‌ರಿಂದ ಬೆದರಿಕೆ! ನೋವು ತೋಡಿಕೊಂಡ ವಿವೇಕ್‌ ಓಬಿರಾಯ್‌
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!