ಖ್ಯಾತ ನಟ ಆನಂದ್‌ರಾಜ್‌ ಸಹೋದರ ಆತ್ಮಹತ್ಯೆಗೆ ಸಿಕ್ತು ಟ್ವಿಸ್ಟ್‌! ಡೆತ್‌ ನೋಟಲ್ಲಿದ್ದ ಹೆಸರು ಯಾವುದು?

Suvarna News   | Asianet News
Published : Mar 13, 2020, 01:16 PM IST
ಖ್ಯಾತ ನಟ ಆನಂದ್‌ರಾಜ್‌ ಸಹೋದರ ಆತ್ಮಹತ್ಯೆಗೆ ಸಿಕ್ತು ಟ್ವಿಸ್ಟ್‌! ಡೆತ್‌ ನೋಟಲ್ಲಿದ್ದ ಹೆಸರು ಯಾವುದು?

ಸಾರಾಂಶ

ನಟ ಆನಂದರ್‌ರಾಜ್‌ ಸಹೋದರ ಕನಗಸಭೈ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರ ಕೈಗೆ ಸಿಕ್ಕಿದೆ ಡೆತ್ ನೋಟ್. ಅದರಲ್ಲಿದ್ದ ಹೆಸರು ಯಾವುದು?

200ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಿರುವ ಬಹುಭಾಷಾ ನಟ ಆನಂದ್‌ ರಾಜ್‌ ಜೀವನದಲ್ಲಿ ಎಂದೂ ಊಹಿಸಿಕೊಳ್ಳಲಾಗದ ದುರ್ಘಟನೆಯೊಂದು ನಡೆದಿದೆ. 

ಹೌದು! ಅನಂದರ್‌ ರಾಜ್‌ ಸಹೋದರ ಕನಗಸಭೈ ಮಾರ್ಚ್‌ 5ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಪಕ್ಕದಲ್ಲೇ ಇದ್ದ ಕಾರಣ ಪೊಲೀಸರು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸಿಕೊಂಡಿದ್ದರು.

ಕನಗಸಭೈ ಮೂಲತಃ ಚೆನ್ನೈ ನಿವಾಸಿಯಾದರೂ, ಪಾಂಡಿಚೇರಿಯಲ್ಲಿದ್ದರು. ವಿವಾಹವಾಗದೇ ಕನಗಸಭೈ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದರು. ಚಿಟ್‌ ಫಂಡ್‌ ಸಹ ನಡೆಸುತ್ತಿದ್ದರು. ಹೆಚ್ಚು ಹಣ-ಕಾಸಿನ ವಹಿವಾಟು ನಡೆಸುತ್ತಿದ್ದರು. ಸಹೋದರ ಆನಂದ್‌ ರಾಜ್‌ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಅವರ ಸಹಾಯದಿಂದ ಅನೇಕ ಸಿನಿ ತಾರೆಯರ ಸಂಪರ್ಕವೂ ಇತ್ತು. 

ರಾಜಪ್ರಭುತ್ವಕ್ಕೆ ಗುಡ್‌ಬೈ: ಹ್ಯಾರಿ ದಂಪತಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಹೀಗೆ!

ಕನಗಸಭೈ ಆತ್ಮಹತ್ಯೆಗೆ ಕಾರಣವೇನು?

ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಕನಗಸಭೈ ಪತ್ರವೊಂದನ್ನು ಬರೆದಿದ್ದರು. ಅದನ್ನು ಪೊಲೀಸರು ಡೆತ್ ನೋಟ್ ಎಂದು ಪರಿಗಣಿಸಿದ್ದಾರೆ. ಅದರಲ್ಲಿ ಕನಗಸಭೈ ಸುಮಾರು 50 ಕೋಟಿ ರು. ಸಾಲ ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಚಿಟ್‌ ಫಂಡ್‌ನಲ್ಲಿ ಮೋಸ ಮಾಡಿದ್ದಾರೆ. ಇದಕ್ಕೆಲ್ಲಾ ಕಾರಣ ಮತ್ತೊಬ್ಬ ಸಹೋದರ ಭಾಸ್ಕರ್‌ ಮತ್ತು ಅವರ ಮಗ ಶಿವಚಂದ್ರನ್‌ ಎಂದೇ ಹೇಳಲಾಗುತ್ತಿದೆ. 

ಆದರೆ ಕನಗಸಭೈ ಯಾರ ಯಾರ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದರು ಎಂಬುದಿನ್ನೂ ಬಹಿರಂಗಗೊಳಿಸಿಲ್ಲ. ಸದ್ಯ ವಿಚಾರಣೆ ನಡೆಯುತ್ತಿದ್ದು, ಆತ್ಮಹತ್ಯೆ ಪ್ರಕರಣ ಒಂದೊಂದೇ ತಿರುವು ಪಡೆದುಕೊಳ್ಳುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?