
ಭಾರತೀಯ ಬರಹಗಾರ್ತಿ, ನಟಿ ಮತ್ತು ಸಿನಿಮಾ ನಿರ್ಮಾಪಕಿ ತಾಹಿರಾ ಕಶ್ಯಪ್(Tahira Kashyap) ಅವರು ಇತ್ತೀಚೆಗೆ ಸೋರೆಕಾಯಿ ಜ್ಯೂಸ್(Juice) ಕುಡಿದು ವಿಷದಂಶ ಹೆಚ್ಚಾಗಿ ಬಳಲುತ್ತಿದ್ದಾರೆ. ಅವರನ್ನು ಎರಡು ದಿನಗಳ ಕಾಲ ಐಸಿಯುಗೆ(ICU) ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಆಯುಷ್ಮಾನ್ ಕುರ್ರಾನಾ ಅವರ ಪತ್ನಿ ಇನ್ಸ್ಟಾಗ್ರಾಮ್ನಲ್ಲಿ ತನ್ನ ಆರೋಗ್ಯ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ತಮಗಾದ ಆರೋಗ್ಯ ಸಮಸ್ಯೆಯ ಬಗ್ಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತನ್ನ ಫಾಲೋವರ್ಸ್ಗೆ ದೇಹಕ್ಕೆ ಮಾರಕವಾಗಬಹುದಾದ್ದರಿಂದ ರಸ ಕಹಿಯಾದರೆ ಕುಡಿಯಬೇಡಿ ಎಂದು ಹೇಳಿದ್ದಾರೆ.
ರೆಸಿಪಿ - ಸೋರೆಕಾಯಿ ಸಿಪ್ಪೆಯಿಂದ ಮಾಡಿ ಟೆಸ್ಟಿ ಈಸಿ ಚಟ್ನಿ!
ತಾಹಿರಾ ಇನ್ಸ್ಟಾಗ್ರಾಮ್ನಲ್ಲಿ ತಾನು ಕಹಿ ಸೊರೆಕಾಯಿ(bottle gourd) ಜ್ಯೂಸ್ ಸೇವಿಸಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಈ ಕಾರಣದಿಂದಾಗಿ ಸೋರೆಕಾಯಿ ವಿಷದ ಸೇರಿಕೊಂಡು ತಮ್ಮನ್ನು ಎರಡು ದಿನಗಳ ಕಾಲ ಐಸಿಯುಗೆ ಸೇರಿಸಬೇಕಾಯಿತು ಎಂದಿದ್ದಾರೆ. ಅದನ್ನು ಸೇವಿಸಿದ ನಂತರ ಆಕೆಯ ದೇಹವು ಕೆಟ್ಟದಾಗಿ ಪ್ರತಿಕ್ರಿಯಿಸಿತು ಎಂದು ಅವರು ಹೇಳಿದ್ದಾರೆ.
ಅವರಿಗೆ 17 ಬಾರಿ ವಾಂತಿಯಾಗಿತ್ತು. ಆಕೆಯ ರಕ್ತದೊತ್ತಡ 40 ಕ್ಕೆ ಇಳಿದಿತ್ತು. ಕಹಿ ಸೋರೆಕಾಯಿ ಜ್ಯೂಸ್ ಕುಡಿಯುವುದು ಬಹುತೇಕ ಸೈನೈಡ್ ಇದ್ದಂತೆ ಎಂದು ತನ್ನ ವೈದ್ಯರು ತನಗೆ ಹೇಳಿದರು ಎಂದಿದ್ದಾರೆ.
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವ ಸೋರೆಕಾಯಿ ಹಲ್ವಾ, ಮೊಸರು ಬಜ್ಜಿ ಮಾಡೋದ್ಹೇಗೆ?
ಸೋರೆ ವಿಷದಿಂದಾಗಿ ತಾನು ಎರಡು ದಿನಗಳ ಕಾಲ ಐಸಿಯುನಲ್ಲಿದ್ದೆ ಎಂದು ತಾಹಿರಾ ಬಹಿರಂಗಪಡಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಅವರು ಅದೇ ತಪ್ಪನ್ನು ಮಾಡಿದ್ದರಿಂದ ಸೊರೆ ಜ್ಯೂಸ್ ಕಹಿಯಾದರೆ ಅದನ್ನು ತಪ್ಪಿಸಲು ಕುಡಿಯದಿರಿ ಎಂದು ಫಾಲೋವರ್ಸ್ಗೆ ವಿನಂತಿಸಿದ್ದಾರೆ.
ಅವರು ಪ್ರತಿದಿನ ಅರಶಿನ ಮತ್ತು ಆಮ್ಲಾದೊಂದಿಗೆ ಸೋರೆಕಾಯಿಯ ಜ್ಯೂಸ್ ಕುಡಿಯುತ್ತಿದ್ದರು ಎಂದು ಅವರು ಹೇಳಿದ್ದಾರೆ. ಆದರೆ ಅವರು ಅನಾರೋಗ್ಯಕ್ಕೆ ಒಳಗಾದ ದಿನ ಆ ಜ್ಯೂಸ್ ಕಹಿಯಾಗಿತ್ತು. ಮಿಶ್ರಣವನ್ನು ಸೇವಿಸಿದ ತಕ್ಷಣ ಆಕೆಯ ದೇಹವು ಪ್ರತಿಕ್ರಿಯಿಸಿತು ಎಂದಿದ್ದಾರೆ.
ವೈದ್ಯರು ಕೂಡ ವಿಡಿಯೋ ಹಂಚಿಕೊಳ್ಳುವುದರಿಂದ ಜಾಗೃತಿಯನ್ನು ಹರಡುವಂತೆ ಕೇಳಿಕೊಂಡಿದ್ದರು. ನಾನು ನನ್ನ ಫೋನನ್ನು ಆರಿಸಿಕೊಂಡಿದ್ದೇನೆ. ಹಸಿರುಸೋರೆಕಾಯಿ ವಿಷದ ಭೀಕರ ಪರಿಣಾಮಗಳನ್ನು ಉಂಟುಮಾಡುತ್ತದೆ. ಅದು ಭೀಕರವಾದದ್ದು. ದಯವಿಟ್ಟು ಗಮನಿಸಿ. ಇದು ಮಾರಕವಾಗಿದೆ. ಆರೋಗ್ಯದ ಹೆಸರಿನಲ್ಲಿ ಕೇವಲ ರಸವನ್ನು ಕುಡಿಯಬೇಡಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.