ಕಾರ್ಟೂನ್, ಓವರ್ ಆಯ್ತು..: ರಶ್ಮಿಕಾ ಮಂದಣ್ಣ ವರ್ತನೆಗೆ ಕಿಡಿ ಕಾರಿದ ನೆಟ್ಟಿಗರು

By Vaishnavi ChandrashekarFirst Published Dec 19, 2022, 2:27 PM IST
Highlights

ಕರಾಟೆ ಕಿಡ್‌ ರೀತಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ. ಕಾರ್ಟೂನ್‌ ಎಂದು ಕಾಲೆಳೆದ ನೆಟ್ಟಿಗರು...

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸಿನಿ ಜರ್ನಿ ಅರಂಭಿಸಿದ್ದರು. ಕನ್ನಡದಲ್ಲಿ ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ ನಂತರ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಬಹು ಬೇಡಿಕೆ ನಟಿಯಾಗಿ ಮಿಂಚಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ಗುಡ್‌ ಬೈ ಸಿನಿಮಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜುನು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜನವರಿ 23ರಂದು ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. 

ಸದ್ಯ ರಶ್ಮಿಕಾ ಮಂದಣ್ಣ ಸುದ್ದಿಯಲ್ಲಿರುವುದು ಅವಾರ್ಡ್‌ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ರೀತಿ. ಗ್ರಾಜಿಯಾ ಇಂಡಿಯಾ 2022 ಅವಾರ್ಡ್‌ ಕಾರ್ಯಕ್ರಮದಲ್ಲಿ ವೈಟ್ ಆಂಡ್ ವೈಟ್ ಸೂಟ್‌ಗೆ ಬ್ಲ್ಯಾಕ್‌ ಬೆಲ್ಟ್‌ ಧರಿಸಿ ರಶ್ಮಿಕಾ ಮಿಂಚಿದ್ದಾರೆ. ರಶ್ಮಿಕಾ ಹೇರ್‌ಸ್ಟೈಲ್‌ಯಿಂದ ಹಿಡಿದು ಕ್ಯಾಮೆರಾಗೆ ಪೋಸ್‌ ಕೊಟ್ಟಿರುವ ರೀತಿಗೆ ಸಖತ್ ಟ್ರೋಲ್ ಆಗಿದ್ದಾರೆ. ಅಲ್ಲದೆ ಈ ಉಡುಪು ಡಿಸೈನ್ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಕರಾಟೆ ಡ್ರೆಸ್‌ ಬಾಡಿಗೆಗೆ ತಂದಿದೀಯಾ ಅಥವಾ ಕದ್ಕೊಂಡು ಬಂದ್ಯಾ ಎಂದು ಕಾಮೆಂಟ್ ಬಂದಿದೆ. 

ಪ್ಯಾಪರಾಜಿಗಳ ಮುಂದೆ ಪೋಸ್‌ ಕೊಟ್ಟ ರಶ್ಮಿಕಾ ಮಂದಣ್ಣ ಎಂದಿನಂತೆ ತಮ್ಮ ಸಿಗ್ನೆಚರ್‌ ಫೋಸ್‌ ಹಾರ್ಟ್‌ ತೋರಿಸಿದ್ದಾರೆ ಅಲ್ಲದೆ ಅವರುಗಳು ತಂದಿರುವ ಸ್ವೀಟ್‌ಗಳನ್ನು ಸ್ವೀಕರಿಸಿದ್ದಾರೆ. ಪೋಟೋಗೆ ಪೋಸ್ ಕೊಡುವಾಗಲೂ ಕಾಲುಗಳನ್ನು ಅಗಲಿಸಿಕೊಂಡು ನಿಂತಿದ್ದಾರೆ. Shinchan ಸಹೋದರಿ ರೀತಿ ಕಾಣಿಸುತ್ತಿರುವ ಇಷ್ಟೊಂದು ಓವರ್ ಆಕ್ಟಿಂಗ್ ಯಾರಿಗಾಗಿ ಎಂದು ಕಾಲೆಳೆದಿದ್ದಾರೆ.

Rashmika or Samantha ಸಮಂತಾ ಜೊತೆ ನಟಿಸಲು ಇಷ್ಟ ಯಾವುದೇ ಬ್ಯಾಗೇಜ್ ಇರುವುದಿಲ್ಲ: ರಿಷಬ್ ಶೆಟ್ಟಿ

ಟ್ರೋಲ್‌ ಮಾಡುವವರಿಗೆ ಉತ್ತರ:

ಸಿನಿ ಜರ್ನಿ ಆರಂಭದಿಂದ ಅಣ್ಣ ಪುಟ್ಟ ವಿಚಾರಗಳಿಗೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಿದ್ದಾರೆ. ಇಷ್ಟು ದಿನ ಸುಮ್ಮನಿರುವ ಈಗ ಇದಕ್ಕೆ ಉತ್ತರ ಕೊಡಬೇಕು ಎಂದು ಪೋಸ್ಟ್‌ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳುಗಳಿಂದ ಅಥವಾ ವರ್ಷಗಳಿಂದ ನನಗೆ ಟ್ರೋಲ್ ವಿಚಾರಗಳು ತುಂಬಾನೇ ತೊಂದರೆ ಕೊಡುತ್ತಿದೆ. ನನ್ನ ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲ್ಲೂ ನಾನು ತುಂಬಾನೇ hate ಸ್ವೀಕರಿಸುತ್ತಿರುವೆ' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

ನಾನು ಆಯ್ಕೆ ಮಾಡಿಕೊಂಡಿರುವ ಜೀವನಕ್ಕೆ ಬೆಲೆ ಇದೆ ಎಂಬುದು ನನಗೆ ಗೊತ್ತಿದೆ ಹೀಗಾಗಿ ನಾನು everyone’s cup of tea ಅಲ್ಲ ಅನ್ನೋ ವಿಚಾರ ಸ್ಪಷ್ಟವಾಗಿ ಗೊತ್ತಿದೆ, ಪ್ರತಿಯೊಬ್ಬರು ನನ್ನನ್ನು ಪ್ರೀತಿಸಬೇಕು ಎಂದು ನಿರೀಕ್ಷೆ ಮಾಡುತ್ತಿಲ್ಲ. ಒಪ್ಪಿಕೊಳ್ಳದಿದ್ದರೂ ಪರ್ವಾಗಿಲ್ಲ ನೆಗೆಟಿವಿಟಿ ಕೊಡಬೇಡ.ನಾನು ಹೇಳದ ಮಾತುಗಳನ್ನು  ಹೇಳಿರುವ ಎಂದು ಹಾಸ್ಯಾ ಮಾಡಿ  ವ್ಯಂಗ್ಯ ಮಾಡುವುದು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿವೆ. ಇದರಿಂದ ಮನಸ್ಸಿಗೆ ನೋವು ಕೊಡುತ್ತಿದೆ ಮತ್ತು ನನ್ನ ಸ್ಥೈರ್ಯವನ್ನು ಕೆಡಿಸುತ್ತಿದೆ.ನನ್ನ ಗಮನಕ್ಕೆ ಬಂದಿರುವ ಪ್ರಕಾರ ನನ್ನ ಕೆಲವೊಂದು ಸಂದರ್ಶನಗಳ ಕ್ಲಿಪ್‌ಗಳನ್ನು ತಪ್ಪಾಗಿ ತೋರಿಸಿ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ.ಖಂಡಿತ ನಾನು ನೆಗೆಟಿವ್ ಕಾಮೆಂಟ್‌ಗಳನ್ನು ಸ್ವೀಕರಿಸುತ್ತೀನಿ ಏಕೆಂದರೆ ಅದೇ ನನ್ನ ಶ್ರಮಕ್ಕೆ ಕಾರಣ ಹಠದಿಂದ ಕೆಲಸ ಮಾಡುವ ಹುಮ್ಮಸ್ಸು ನೀಡುತ್ತದೆ ಆದರೆ ಈ ದೇಷ ಬೆಳೆಸುವುದರಲ್ಲಿ ಏನಿದೆ ಅರ್ಥ?  ತುಂಬಾ ವರ್ಷಗಳಿಂದ ಇದನ್ನು ನಿರ್ಲಕ್ಷಿಸುವಂತೆ ಹೇಳುತ್ತಿದ್ದಾರೆ ಆದರೆ ಇದರಿಂದ ಏನೂ ಪರಿಹಾರ ಸಿಕ್ಕಿಲ್ಲ ಸಮಯ ಇನ್ನು ಹೆಚ್ಚಿಗೆ ಕೆಟ್ಟದಾಗುತ್ತಿದೆ.ಅಭಿಮಾನಿಗಳ ಸಪೋರ್ಟ್‌ನಿಂದ ನಾನು ವೃತ್ತಿ ಜೀವನದಲ್ಲಿ ಈ ಮಟ್ಟಕ್ಕೆ ಬರಲು ಸಾಧಯವಾಗಿದ್ದು. ಹಾಗೂ ಅದೇ ಪ್ರೀತಿ ನನ್ನ ನೋವನ್ನು ಹೇಳಿಕೊಳ್ಳಲು ಧೈರ್ಯ ಕೊಟ್ಟಿದ್ದು. ಅದೆಷ್ಟೋ ಜನರಿಂದ ನಾನು ಸ್ಪೂರ್ತಿಗೊಂದು ಕೆಲಸ ಮಾಡುತ್ತಿರುವೆ, ಆರಂಭದಲ್ಲಿ ಹೇಗೆ ನಿಮ್ಮನ್ನು ನಾನು ಪ್ರೀತಿಸುತ್ತಿದ್ದೆ ಅದೇ ರೀತಿ ಪ್ರೀತಿ ಮಾಡುತ್ತೀನಿ. ಶ್ರಮದಿಂದ ಕೆಲಸ ಮಾಡಿ ಒಳ್ಳೆ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀನಿ' ಎಂದಿದ್ದಾರೆ.

 

click me!