ಮುನ್ನಾಭಾಯಿ ಎಂಬಿಬಿಎಸ್ ಚಿತ್ರವನ್ನು ನಿಜವಾಗಿಯೂ ಶಾರುಖ್ ಖಾನ್ ಮಾಡಬೇಕಿತ್ತು. ಆದೆ ಅವರು ನಿರಾಕರಿಸಿದ್ದು ಏಕೆ?
ಬಾಲಿವುಡ್ನಲ್ಲಿ ಶಾರುಖ್ ಖಾನ್ಗೆ (Shah Rukh Khan) ಮೂರು ದಶಕಗಳಿಗಿಂತಲೂ ಹೆಚ್ಚು ಸಮಯವಾಗಿದೆ ಮತ್ತು ಈ ಸಮಯದಲ್ಲಿ ಅವರು ತಮ್ಮ ಇಡೀ ಚಲನಚಿತ್ರ ಜೀವನದಲ್ಲಿ ಅನೇಕ ದೊಡ್ಡ ಹಿಟ್ಗಳನ್ನು ನೀಡಿದ್ದಾರೆ. ತಮ್ಮ ಪ್ರತಿಸ್ಪರ್ಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದ್ದಾರೆ. ಇಂದಿಗೂ ಶಾರುಖ್ ಖಾನ್ ಅವರ ಚಿತ್ರಗಳು ಥಿಯೇಟರ್ಗಳಲ್ಲಿ ಪ್ರದರ್ಶನಗೊಂಡಾಗ ಪ್ರೇಕ್ಷಕರು ಈ ಚಿತ್ರವನ್ನು ವೀಕ್ಷಿಸಲು ಮುಗಿಬೀಳುತ್ತಾರೆ. ನಿರ್ದೇಶಕರು ಮತ್ತು ಪ್ರೇಕ್ಷಕರ ಮೊದಲ ಆಯ್ಕೆಯಾಗಿರುವ ಕೆಲವೇ ಸ್ಟಾರ್ಗಳ ಪಟ್ಟಿಯಲ್ಲಿ ಈ ಪಠಾಣ್ ನಟನಿಗೆ ಟಾಪ್ಮೋಸ್ಟ್ ಸ್ಥಾನವೂ ಇದೆ. ಅದೇ ರೀತಿ ಬ್ಲಾಕ್ಬಸ್ಟರ್ (Blockbustur) ಚಿತ್ರಗಳನ್ನು ನೀಡುವ ನಿರ್ದೇಶಕರು, ನಿರ್ಮಾಪಕರು ತಮ್ಮ ಚಿತ್ರಕ್ಕೆ ಕರೆದಾಗ ಅವರ ಚಿತ್ರವನ್ನು ಖ್ಯಾತನಾಮ ನಟರೂ ನಿರಾಕರಿಸುವುದಿಲ್ಲ.
ಆದರೆ ಶಾರುಖ್ ಅವರು ಬ್ಲಾಕ್ಬಸ್ಟರ್ ನಿರ್ದೇಶಕ ರಾಜಕುಮಾರ್ ಹಿರಾನಿಯವರ ಚಿತ್ರವೊಂದಕ್ಕೆ ನಿರಾಕರಿಸಿ ಭಾರಿ ಸುದ್ದಿಯಾಗಿದ್ದಾರೆ. ಆದರೆ ಆ ಚಿತ್ರ ಬಾಲಿವುಡ್ನ ಹಲವು ದಾಖಲೆಗಳನ್ನು ಮುರಿದು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿತ್ತು. ಅಷ್ಟಕ್ಕೂ ಇಂಥದ್ದೊಂದು ಸೂಪರ್ಹಿಟ್ ಆಗಬಹುದಾದ ಚಿತ್ರ ಯಾವುದು? ಶಾರುಖ್ ಖಾನ್ ನಟಿಸಲು ನಿರಾಕರಿಸಿದ್ದು ಏಕೆ ಗೊತ್ತಾ?
ಈ ಚಿತ್ರವೇ ಸೂಪರ್ಹಿಟ್ ಬ್ಲಾಕ್ಬಸ್ಟರ್ ಎನಿಸಿರೋ 'ಮುನ್ನಾಭಾಯಿ ಎಂಬಿಬಿಎಸ್' (Munnabhai MBBS), ನಿರ್ದೇಶಕ ರಾಜ್ಕುಮಾರ್ ಹಿರಾನಿ ಈ ಹಿಂದೆ ಶಾರುಖ್ ಖಾನ್ ಅವರನ್ನು ಆಫರ್ನೊಂದಿಗೆ ಸಂಪರ್ಕಿಸಿದ್ದರು, ಆದರೆ ಎಸ್ಆರ್ಕೆ ಚಿತ್ರ ಮಾಡಲು ನಿರಾಕರಿಸಿದ್ದರು. ಆ ನಂತರ ಈ ಚಿತ್ರ ಸಂಜಯ್ ದತ್ (Sanjay Datt) ಕೈ ಸೇರಿತು. ಈ ಚಿತ್ರ ಬಿಡುಗಡೆಯಾದದ್ದು 2003ರಲ್ಲಿ. ಅಂದರೆ 10 ವರ್ಷಗಳ ಹಿಂದೆ. ನಂತರ ಈ ಚಿತ್ರ ಕೆಲವು ಭಾಷೆಗಳಲ್ಲಿ ರೀಮೇಕ್ ಕೂಡ ಆಯಿತು. ಮುನ್ನಾಬಾಯಿ ಚಿತ್ರವನ್ನು ಇಂದಿಗೂ ಜನರು ನೋಡಿ ನೋಡಿ ನಗುವುದು ಉಂಟು, ಇಂದಿಗೂ ಅದು ಹಿಟ್ ಲಿಸ್ಟ್ನಲ್ಲಿಯೇ ಇದೆ. ಆದರೆ ಶಾರುಖ್ ಖಾನ್ ಇದನ್ನು ನಿರಾಕರಿಸಿದ್ದರಿಂದ ಈ ಚಿತ್ರ ಸಂಜಯ್ ದತ್ ಅವರಿಗೆ ಒಲಿದು ಬಂತು. ಇದನ್ನು ಸ್ವತಃ ಶಾರುಖ್ ಖಾನ್ ಪ್ರಸ್ತಾಪಿಸಿದ್ದಾರೆ.
Anushka Shetty: ಗುಟ್ಟಾಗಿ ಮದ್ವೆಯಾದ್ರಾ ಅನುಷ್ಕಾ ಶೆಟ್ಟಿ? ಮೌನ ಮುರಿದ ನಟಿ ಹೇಳಿದ್ದೇನು?
ಶಾರುಖ್ ಖಾನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral) ಆಗುತ್ತಿದೆ, ಇದರಲ್ಲಿ ಪಠಾಣ್ ನಟ ಅವರು 'ಮುನ್ನಾಭಾಯಿ ಎಂಬಿಬಿಎಸ್' ಮಾಡಲು ಏಕೆ ನಿರಾಕರಿಸಿದರು ಎಂಬುದನ್ನು ಬಹಿರಂಗಪಡಿಸುವುದನ್ನು ಕಾಣಬಹುದು. ಈ ಬಗ್ಗೆ ಮಾತನಾಡಿರುವ ಶಾರುಖ್, 'ನಾನು ಮುನ್ನಾಭಾಯ್ ಎಂಬಿಬಿಎಸ್ ಮಾಡಲು ಸಾಧ್ಯವಾಗಲಿಲ್ಲ, ಏಕೆಂದರೆ ನಾನು ಆ ಸಮಯದಲ್ಲಿ ಗಾಯಗೊಂಡಿದ್ದೇನೆ. ನಂತರ ನಾನು ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ ಮತ್ತು ನಾನು ಯಾವಾಗ ಕೆಲಸವನ್ನು ಪುನರಾರಂಭಿಸಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಅದಕ್ಕೇ ನಾನು ಈ ಸಿನಿಮಾ ಮಾಡಲಿಲ್ಲ.
ರಾಜ್ಕುಮಾರ್ ಹಿರಾನಿ ಚಿತ್ರಕ್ಕಾಗಿ ಹೆಚ್ಚು ಕಾಯಲು ಬಯಸಲಿಲ್ಲ, ಏಕೆಂದರೆ ಇದು ಅವರ ವೃತ್ತಿಜೀವನದ ಆರಂಭವಾಗಿದೆ ಎಂದು ಶಾರುಖ್ ಹೇಳಿದರು. 'ರಾಜು ತಮ್ಮ ಮೊದಲ ಚಿತ್ರ ಮಾಡುತ್ತಿದ್ದಾರೆ. ನಾನು ಮುನ್ನಾಭಾಯ್ ಎಂಬಿಬಿಎಸ್ಗೆ ಸಹಿ ಹಾಕಿದಾಗ ದೇವದಾಸ್ ಚಿತ್ರೀಕರಣದಲ್ಲಿದ್ದೆ. ನನಗೆ ನೋವಾದಾಗ ಲಂಡನ್ನಿಂದ ರಾಜು ಫೋನ್ ಮಾಡಿ ಕೇಳಿದರು- ‘ಈ ಸಿನಿಮಾ ಯಾವಾಗ ಮಾಡುತ್ತೀರಿ?’ ಎಂದು ಗೌರವದಿಂದ ಹೇಳಬಯಸುತ್ತೇನೆ, ಆಗಿನ ಕಾಲದಲ್ಲಿ ರಾಜು ದೊಡ್ಡ ನಿರ್ದೇಶಕರಾಗಿರಲಿಲ್ಲ. ಚಿಕ್ಕ ಸಿನಿಮಾ ಮಾಡುತ್ತಿದ್ದ ಅವರಿಗೆ ಸ್ಟಾರ್ ಗಾಗಿ ಕಾಯುವುದು ಕಷ್ಟವಾಗುತ್ತಿದೆ ಎನ್ನುವುದು ನನಗೆ ಅರ್ಥವಾಗಿತ್ತು. ಆದ್ದರಿಂದ ನನಗಾಗಿರುವ ತೊಂದರೆಯನ್ನು ಅವರಿಗೆ ಹೇಳಿದೆ ಎಂದಿದ್ದಾರೆ ಶಾರುಖ್.
ದೂರವಾದ್ರೂ ಹೊಟ್ಟೆ ಬಳಿ ನಾಗಚೈತನ್ಯ ಕುರುಹು: ಯಾಕಪ್ಪಾ ಇದು ಅಂತಿದ್ದಾರೆ ಫ್ಯಾನ್ಸ್!
ಇದರೊಂದಿಗೆ, ಮುನ್ನಾಭಾಯ್ ಎಂಬಿಬಿಎಸ್ನಲ್ಲಿ ಸಂಜಯ್ ದತ್ ಅವರ ಕೆಲಸವನ್ನು ಶಾರುಖ್ ಖಾನ್ ಶ್ಲಾಘಿಸಿದರು ಮತ್ತು ಸಂಜಯ್ ದತ್ಗಿಂತ ಉತ್ತಮವಾಗಿ ಈ ಪಾತ್ರವನ್ನು ಅವರು ಎಂದಿಗೂ ನಿರ್ವಹಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಅದಕ್ಕಾಗಿಯೇ ಅವರು ಎಂದಿಗೂ ಪಶ್ಚಾತ್ತಾಪ ಪಡಲಿಲ್ಲ. ಈ ಹಿಂದೆ, ರಾಜ್ಕುಮಾರ್ ಹಿರಾನಿ ಕೂಡ ಈ ಚಿತ್ರದ (Film) ಬಗ್ಗೆ ಮಾತನಾಡಿದ್ದರು ಮತ್ತು ಈ ಚಿತ್ರದ ಬಗ್ಗೆ ಮೊದಲು ಶಾರುಖ್ ಖಾನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು.