Satish Kaushik ಕೊಲೆಯಾಗಿದ್ದು ನಿಜನಾ? ಮೌನ ಮುರಿದ ಪತ್ನಿ

By Suvarna NewsFirst Published Mar 13, 2023, 3:42 PM IST
Highlights

ನಟ, ನಿರ್ದೇಶಕ ಸತೀಶ್​ ಕೌಶಿಕ್​ ಅವರನ್ನು ತಮ್ಮ ಪತಿಯೇ ಕೊಲೆ ಮಾಡಿರುವುದಾಗಿ ಮಹಿಳೆಯರೊಬ್ಬರು ನೀಡಿರುವ ಹೇಳಿಕೆಗೆ ಸತೀಶ್​ ಅವರ ಪತ್ನಿ ಶಶಿ ಕೌಶಿಕ್ ಹೇಳಿದ್ದೇನು?
 

ಹಿರಿಯ ನಟ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಅವರು ಇದೇ 9ರಂದು ನಿಧನರಾಗಿದ್ದಾರೆ. ಎದೆ ನೋವಿನಿಂದ ಬಳಲಿ ಅವರು ಕೊನೆಯುಸಿರೆಳೆದಿರುವುದಾಗಿ ಹೇಳಲಾಗುತ್ತಿದೆ. ಆದರೆ ಅವರ ಸಾವಿನ ಕುರಿತು ಪೊಲೀಸರಿಗೆ ಅನುಮಾನ ಮೂಡಿದೆ.  ಹೋಳಿ ಪಾರ್ಟಿಯಲ್ಲಿ ಭಾಗವಹಿಸಿ ಸಂತೋಷದಿಂದಿದ್ದ ಸತೀಶ್​ ಅವರು ದಿಢೀರನೆ ಎದೆನೋವೆಂದು ಹೇಳಿದ್ದರು.  ಆಸ್ಪತ್ರೆಗೆ ಸಾಗಿಸಿ ಸ್ವಲ್ಪ ಹೊತ್ತಿನಲ್ಲಿಯೇ ಅವರು ಇಹಲೋಕ ತ್ಯಜಿಸಿದರು. ಆದರೆ ಇದು ಕೊಲೆ ಎಂದು ಕೆಲವರು ಹೇಳಿ ಕೊಳ್ಳುತ್ತಿದ್ದಾರೆ.  ಹೋಳಿ ಪಾರ್ಟಿಯಲ್ಲಿಯೇ ಏನೋ ಎಡವಟ್ಟು ಆಗಿರುವ ಶಂಕೆಯಿಂದ ಇದಾಗಲೇ ಪೊಲೀಸರು ಹೋಳಿ ಪಾರ್ಟಿ ಆಯೋಜಿಸಿದ್ದ ಫಾರ್ಮ್‌ಹೌಸ್‌ಗೆ ಭೇಟಿ ನೀಡಿ, ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್ ಮಾಲೀಕ ಪರಾರಿಯಾಗಿದ್ದು, ಪೊಲೀಸರ ಸಂದೇಹ ಇನ್ನಷ್ಟು ಹೆಚ್ಚುವಂತೆ ಮಾಡಿದೆ. ಇದರ ಮಧ್ಯೆಯೇ, ಮಹಿಳೆಯೊಬ್ಬರು ತಮ್ಮ ಪತಿಯೇ ಸತೀಶ್​ ಅವರನ್ನು ಕೊಲೆ ಮಾಡಿರುವುದಾಗಿ ಹೇಳಿಕೆ ಕೊಟ್ಟಿದ್ದು, ಭಾರಿ ಕೋಲಾಹಲವನ್ನೇ ಸೃಷ್ಟಿಸಿದೆ. 

'ಸತೀಶ್ ಅವರು ನನ್ನ ಪತಿಗೆ ದುಬೈನಲ್ಲಿ (Dubai) ಹೂಡಿಕೆ ಮಾಡಲು 15 ಕೋಟಿ ರೂ. ನೀಡಿದ್ದರು. ಈಗ ಅದನ್ನವರು ವಾಪಸ್ ಕೇಳುತ್ತಿದ್ದರು. ಆದರೆ ನನ್ನ ಪತಿ ಅದನ್ನು ತಿರುಗಿಸಲಿಲ್ಲ, ಬದಲಿಗೆ ಕೆಲವು ಮಾತ್ರೆಗಳನ್ನು ನೀಡಿ, ಸತೀಶ್ ಅವರನ್ನು  ಕೊಲೆ ಮಾಡಿದ್ದಾರೆ' ಎಂದು ದೆಹಲಿ ಪೊಲೀಸ್ ಕಮಿಷನರ್‌ಗೆ (Police Commissioner) ಮಹಿಳೆ ದೂರಿದ್ದಾರೆ. '2022ರ ಆಗಸ್ಟ್‌ನಲ್ಲಿ ದುಬೈಗೆ ಭೇಟಿ ನೀಡಿದ್ದ ಸತೀಶ್ ಕೌಶಿಕ್ ಅವರು ನನ್ನ ಪತಿ ವಿಕಾಸ್​ ಮಾಲು (Vikas Malu) 15 ಕೋಟಿ ರೂ.ಗಳನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಇದೇ ವಿಚಾರವಾಗಿ ನನ್ನ ಪತಿ ಮತ್ತು ಸತೀಶ್ ಕೌಶಿಕ್ ಅವರ ನಡುವೆ ವಾಗ್ವಾದ ನಡೆದಿತ್ತು. ಆಗ ನಾನು ಅಲ್ಲಿಯೇ ಇದ್ದೆ. ನನಗೆ ಹಣದ ಅವಶ್ಯಕತೆ ಇದೆ. ನಾನು 15 ಕೋಟಿ ರೂ.ಗಳನ್ನು ನೀಡಿ 3 ವರ್ಷ ಆಗಿದೆ. ಇನ್ನೂ ನೀನು ವಾಪಸ್​ ಕೊಡುತ್ತಿಲ್ಲ, ನಾನು ಮೋಸ ಹೋಗಿದ್ದೇನೆ ಎನಿಸುತ್ತಿದೆ. ನನ್ನ ಹಣ ವಾಪಸ್ ಕೊಡು ಎಂದು ಸತೀಶ್ ಹೇಳುತ್ತಿದ್ದುದನ್ನು ನಾನು ಕೇಳಿಸಿಕೊಂಡಿದ್ದೆ. ಆದರೆ ನನ್ನ ಪತಿಗೆ ಅದನ್ನು ತಿರುಗಿಸುವ ಮನಸ್ಸು ಇರಲಿಲ್ಲ. ಅದಕ್ಕಾಗಿಯೇ ಕೊಲೆ ಮಾಡಿದ್ದಾರೆ' ಎಂದು ಮಹಿಳೆ ಹೇಳಿದ್ದಾರೆ.

Latest Videos

Satish Kaushik ಸಾವಿಗೆ ಭಾರಿ ಟ್ವಿಸ್ಟ್​: ನನ್ನ ಪತಿಯೇ ಕೊಲೆ ಮಾಡಿದ್ದು ಎಂದ ಮಹಿಳೆ!

ಈ ಬಗ್ಗೆ ಈಗ ಖುದ್ದು ಸತೀಶ್​ ಕೌಶಿಕ್​ ಅವರ ಪತ್ನಿ ಮೌನ ಮುರಿದಿದ್ದಾರೆ. ಪತಿಯ ಅಗಲಿಕೆಯಿಂದ ಸಾಕಷ್ಟು ನೋವು ಅನುಭವಿಸುತ್ತಿರುವ ಪತ್ನಿ ಶಶಿ ಕೌಶಿಕ್ (Shashi Koushik)  ತಮ್ಮ ಪತಿಯ ಕೊಲೆ ಆಗಿದೆ ಎಂದು ಮಹಿಳೆ ಮಾಡುತ್ತಿರುವ ಆರೋಪ ಸರಿಯಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಗುರುಗ್ರಾಮದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡಿದ ಶಶಿ ಕೌಶಿಕ್ ಅವರು, ಮಹಿಳೆ ಮಾಡುತ್ತಿರುವ ಆರೋಪ  ಸಂಪೂರ್ಣ ಸುಳ್ಳು, ಅವರಿಬ್ಬರ ನಡುವೆ ಜಗಳ ನಡೆದಿಲ್ಲ, ಅವರ ಪತ್ನಿ ಸುಳ್ಳು ಆರೋಪ ಮಾಡುತ್ತಿದ್ದಾರೆ.  ಆಕೆ ಪತಿಯಿಂದ ಬೇರ್ಪಟ್ಟಿದ್ದಾರೆ, ಆದ್ದರಿಂದ ಸಹಾನುಭೂತಿ ಪಡೆಯಲು ಅಥವಾ ಈ ಬಗ್ಗೆ ಅವರನ್ನು ತೊಂದರೆಗೆ ಸಿಲುಕಿಸಲು ಹೀಗೆ ಮಾಡಿರಬಹುದು ಎಂದಿದ್ದಾರೆ. ಪ್ರಾಥಮಿಕ ಪೋಸ್ಟ್‌ಮಾರ್ಟಂ ರಿಪೋರ್ಟ್​ನಲ್ಲಿ ಕೂಡ ಸತೀಶ್​ ಅವರ ದೇಹದಲ್ಲಿ ಶೇ.98 ಬ್ಲಾಕ್ ಆಗಿದೆ ಎಂದು ಹೇಳಲಾಗಿದೆ. ಇದು ಕೊಲೆಯಲ್ಲ ಎಂದಿದ್ದಾರೆ.
 
ಇವೆಲ್ಲವುಗಳ ನಡುವೆಯೇ ಸತೀಶ್​ ಕೌಶಿಕ್​ ಅವರು ಆಡಿದ್ದ ಕೊನೆಯ ಮಾತುಗಳನ್ನು ನೆನಪಿಸಿಕೊಂಡು ಅವರ ಮ್ಯಾನೇಜರ್ ಸಂತೋಷ್ ರೈ (Santosh Rai) ಕಣ್ಣೀರಿಟ್ಟಿದ್ದಾರೆ.  'ಸತೀಶ್​  ಘಟನೆಯ ಹಿಂದಿನ ರಾತ್ರಿ ಊಟದ ನಂತರವೂ ಸಂಪೂರ್ಣವಾಗಿಯೇ ಚೆನ್ನಾಗಿದ್ದರು. ರಾತ್ರಿ 8.30ರ ಸುಮಾರಿಗೆ ಊಟ ಮಾಡಿದ್ದರು.  ನಾವು ಮಾರ್ಚ್ 9 ರಂದು ಬೆಳಿಗ್ಗೆ 8.50 ಕ್ಕೆ ಮುಂಬೈಗೆ ವಿಮಾನವನ್ನು ಹಿಡಿಯಬೇಕಾಗಿತ್ತು. ಅದಕ್ಕಾಗಿ ಅವರು, ಸಂತೋಷ್, ಬೇಗ ಮಲಗು, ನಾವು ಬೆಳಿಗ್ಗೆ ಹೊರಡಬೇಕು ಎಂದರು. ನಂತರ ನಾನು ಪಕ್ಕದ ಕೋಣೆಗೆ ಹೋಗಿ ಮಲಗಿದ್ದೆ. ಸತೀಶ್​ ಅವರು ತಮ್ಮ ಕಾಗಜ್  2 (Kagaz 2) ಚಿತ್ರವನ್ನು ನೋಡಬೇಕು ಎಂದು ಹೇಳುತ್ತಿದ್ದರು. ಈ ಚಿತ್ರದ ಎಡಿಟಿಂಗ್​ ಕೆಲಸ ಬಾಕಿ ಇತ್ತು. ಆದ್ದರಿಂದ ನನ್ನನ್ನು ಅವರು ಕರೆದಿದ್ದರು. ಬೆಳಿಗ್ಗೆ 11 ಗಂಟೆಗೆ ನನಗೆ ಕರೆ ಮಾಡಿದರು. ನಂತರ 11.30ಕ್ಕೆ ಸಿನಿಮಾ ನೋಡತೊಡಗಿದರು. 12 ಗಂಟೆಯ ಸುಮಾರಿಗೆ ಅವರು ನನ್ನ ಹೆಸರನ್ನು ಜೋರಾಗಿ ಕೂಗಲು ಪ್ರಾರಂಭಿಸಿದರು. ನಾನು ಓಡಿ ಬಂದೆ. ಆಗ ಅವರು ಯಾಕೋ ಉಸಿರಾಟ ಏರುಪೇರಾಗುತ್ತಿದೆ. ದಯವಿಟ್ಟು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಎಂದರು. ಕೂಡಲೇ ಕಾರು ಹತ್ತಿ ಆಸ್ಪತ್ರೆಗೆ ಹೊರಟೆವು. ಆಸ್ಪತ್ರೆಗೆ ಹೋದ ತಕ್ಷಣ ಎದೆನೋವು ಮತ್ತಷ್ಟು ಹೆಚ್ಚಾಯಿತು. ಅವರು ಒದ್ದಾಡುತ್ತಿದ್ದರು. ಆಗಲೇ ಅವರಿಗೆ ತಾವು ಸಾಯುತ್ತೇವೆ ಎಂದು ಎನ್ನಿಸಿತೋ ಏನೋ ಗೊತ್ತಿಲ್ಲ. ನನ್ನ ಭುಜದ ಮೇಲೆ ತಲೆಯಿಟ್ಟು ಹೇಳಿದರು- ಸಂತೋಷ್, ನಾನು ಸಾಯಲು ಬಯಸುವುದಿಲ್ಲ, ನನ್ನನ್ನು ಉಳಿಸಿ ಪ್ಲೀಸ್​ ಎಂದರು. ನಾನು ಮಗಳು ವಂಶಿಕಾಗಾಗಿ ಬದುಕಲು ಬಯಸುತ್ತೇನೆ. ಆದರೆ ನಾನು ಬದುಕುವುದಿಲ್ಲ ಎಂದೆನಿಸುತ್ತಿದೆ. ನನಗೆ ಏನಾದರೂ ಆದರೆ ನನ್ನ ಶಶಿ ಮತ್ತು ವಂಶಿಕಾಳನ್ನು (Vamshika) ನೋಡಿಕೊಳ್ಳಿ ಎಂದು ಹೇಳಿದರು. ಇಷ್ಟು ಹೇಳುತ್ತಲೇ ಅವರು ಜಗತ್ತಿಗೆ ವಿದಾಯ ಹೇಳಿದರು' ಎಂದು ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡು ಸಂತೋಷ್​ ಕಣ್ಣೀರು ಹಾಕಿದ್ದಾರೆ. 

ಬದುಕಲ್ಲ ಅನಿಸ್ತಿದೆ, ಪ್ಲೀಸ್​ ಇದೊಂದು ಆಸೆ ನೆರವೇರಿಸು ಎನ್ನುತ್ತಲೇ ಕೊನೆಯುಸಿರೆಳೆದ ನಟ ಸತೀಶ್​ ಕೌಶಿಕ್​!

 

click me!