Sanjay Dutt: ತಮಿಳು ಸಿನಿಮಾದಲ್ಲಿ ಮತ್ತೆ ವಿಲನ್ ಆಗಲು 10 ಕೋಟಿ ಡಿಮ್ಯಾಂಡ್ ಮಾಡಿದ ದತ್?

By Vaishnavi ChandrashekarFirst Published Sep 13, 2022, 11:08 AM IST
Highlights

ಮತ್ತೆ ಬ್ಯಾಡ್ ಬಾಯ್ ಪಾತ್ರ ಆಯ್ಕೆ ಮಾಡಲು ದೊಡ್ಡ ಮೊತ್ತ ಡಿಮ್ಯಾಂಡ್ ಮಾಡಿದ ಸಂಜಯ್ ಸತ್. ತಲಪತಿ ವಿಜಯ್ ಸಿನಿಮಾ ಕಥೆ ಏನು?
 

ಕೆಜಿಎಫ್ ಚಾಪ್ಟರ್ (KGF) 1 ಮತ್ತು ಚಪ್ಟರ್ 2 ಮೂಲಕ ಸೌತ್ ಚಿತ್ರರಂಗಕ್ಕೆ ಕಾಲಿಟ್ಟ ಬಾಲಿವುಡ್ ನಟ ಸಂಜಯ್ ದತ್ (Sanjay Dutt) ಇದೀಗ ತಮಿಳು ಸಿನಿಮಾ ಕಥೆವೊಂದಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗಿದೆ. ತಲಪತಿ ವಿಜಯ್‌ 67ನೇ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಬಾಷಾ ಪಾತ್ರವಿದ್ದು ಅದಕ್ಕೆ ತಲೈವ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಸೂಕ್ತ ಎಂದು ತಂಡ ಬಹಿರಂಗ ಪಡಿಸಿದ್ದರು. ಈಗ ಸಂಜಯ್ ಎಂಟ್ರಿ ಬಗ್ಗೆ ಕ್ಲಾರಿಟಿ ಸಿಕ್ಕಿದೆ...

'ಈ ಚಿತ್ರಕಥೆಗೆ ಅತಿ ಹೆಚ್ಚು ಪ್ರಭಾವ ಬೀರುವ ವ್ಯಕ್ತಿಗಳು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು. ಪಾತ್ರಕ್ಕೆ ಬರೆಯುವಾಗಲೇ ನಮಗೆ ತೆಲೆ ಬಂದಿದ್ದು ಸಂಜಯ್ ದತ್, ಅವರಿಗಿಂತ ಬೆಸ್ಟ್‌ ಯಾರಿದ್ದಾರೆ ಹೇಳಿ? ಸಂಜಯ್ ದತ್ ಜೊತೆ ನಿರ್ದೇಶಕ ಲೋಕೇಶ್ ಮಾತುಕತೆ ನಡೆಸುತ್ತಿದ್ದಾರೆ ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಸಂಭಾವನೆ ವಿಚಾರ ಹೇಳಬೇಕು ಅಂದ್ರೆ ಸಂಜಯ್ ದತ್‌ಗೆ 10 ಕೋಟಿ ರೂಪಾಯಿ ನೀಡಲಾಗುತ್ತಿದೆ' ಎಂದು ಚಿತ್ರತಂಡದ ಆಪ್ತರು ಪಿಂಕ್‌ವಿಲ್ಲಾ ವೆಬ್‌ಗೆ ಮಾಹಿತಿ ನೀಡಿದ್ದಾರೆ. 

' ಇದೊಂದು ಪ್ಯಾನ್‌ ಇಂಡಿಯಾ ಸಿನಿಮಾ ಆಗಲಿದೆ. ವಿಕ್ರಮ್ ಸಿನಿಮಾ ಬಿಡುಗಡೆ ನಂತರ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ ಉತ್ತರ ಭಾರತ ಸಿನಿಮಾ ರಂಗದಲ್ಲಿ ಒಂದು ಗ್ರಿಪ್ ಸಿಗುತ್ತಿದೆ ಹೀಗಾಗಿ ವಿಜಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ಕ್ರಿಯೇಟ್ ಮಾಡಬಹುದು. ಹಿಂದಿ ಬೆಲ್ಟ್‌ನಲ್ಲಿ ಹೆಸರು ಮಾಡುವುದಕ್ಕೆ ವಿಜಯ್‌ಗೂ ಸಹ ಸಮಯ ತೆಗೆದುಕೊಳ್ಳುತ್ತದೆ. ಹಿಂದಿ ಮಾರ್ಕೆಟ್‌ನಲ್ಲಿ ತಳಪತಿ ವಿಜಯ್ ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಕಾಣಲಿದೆ' ಎಂದು ತಿಳಿದು ಬಂದಿದೆ.

ಇನ್ನೂ ಪ್ಲ್ಯಾನಿಂಗ್‌ನಲ್ಲಿ ಬ್ಯುಸಿಯಾಗಿರುವ ತಂಡ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರೆ.

ಕೆಜಿಎಫ್ ಬಳಿಕ ಮತ್ತೆ ಕನ್ನಡಕ್ಕೆ ಬರ್ತಿದ್ದಾರೆ ಆಧೀರ ಸಂಜಯ್ ದತ್; ಇಂಟ್ರಸ್ಟಿಂಗ್ ವಿಚಾರ ಬಹಿರಂಗ

ಸಂಜಯ್ ದತ್ ನಂತರ ಕೇಳಿ ಬರುತ್ತಿರುವ ಮತ್ತೊಂದು ವಿಚಾರ ಏನೆಂದರೆ ಮಲಯಾಳಂ ನಟ ಪೃಥ್ವಿರಾಜ್‌ ಕೂಡ ನೆಗೆಟಿವ್ ಪಾತ್ರ ಮಾಡಲಿದ್ದಾರೆ. ನಿರ್ದೇಶಕ ಲೋಕೇಶ್‌ ಜೊತೆ ಸಣ್ಣ- ಪುಟ್ಟ ಪೇಪರ್‌ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 2023ರ ದೀಪಾವಳ ಹಬ್ಬದ ದಿನ ಸಿನಿಮಾ ರಿಲೀಸ್ ಮಾಡಬೇಕು ಎಂದು ತಳಪತಿ ವಿಜಯ್ ಪ್ಲ್ಯಾನ್ ಮಾಡಿದ್ದಾರೆ. 2023ರ ಜನವರಿಯಲ್ಲಿ ವಿಜಯ್ ವರಿಸು ಸಿನಿಮಾ ರಿಲೀಸ್ ಆಗುತ್ತಿದೆ. ವರ್ಷಕ್ಕೆ ಎರಡು ಸಿನಿಮಾ ಕೊಡುವ ಮೂಲಕ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗಲಿದ್ದಾರೆ.

ಸಂಜಯ್ ದತ್ ಕೆಲಸ ಮಾಡಿದ ಚಿತ್ರಗಳೆಲ್ಲವೂ ಫ್ಲಾಪ್:

2013 ರಲ್ಲಿ, ಸಂಜಯ್ ದತ್ 'ಜಿಲಾ ಗಾಜಿಯಾಬಾದ್', 'ಪೊಲೀಸ್‌ಗಿರಿ' ಮತ್ತು 'ಜಂಜೀರ್' ಎಂಬ ಮೂರು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಮೂರು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕ್ರಮವಾಗಿ 16 ಕೋಟಿ, 16.81 ಕೋಟಿ ಮತ್ತು 15.19 ಕೋಟಿ ಕಲೆಕ್ಷನ್ ಮಾಡಿದೆ. ಎಲ್ಲಾ ಮೂರು ಚಿತ್ರಗಳು ಫ್ಲಾಪ್ ಎಂದು ಸಾಬೀತಾಯಿತು.2014 ರಲ್ಲಿ, ಸಂಜಯ್ ದತ್ 'ಉಂಗ್ಲಿ' ಮತ್ತು 'ಪಿಕೆ' ಚಿತ್ರಗಳಲ್ಲಿ ಕಾಣಿಸಿಕೊಂಡರು. 'ಉಂಗ್ಲಿ' ಬಾಕ್ಸ್ ಆಫೀಸ್‌ನಲ್ಲಿ 19.47 ಕೋಟಿ ಗಳಿಸಿ ಫ್ಲಾಪ್ ಆಗಿತ್ತು. ಅದೇ ಸಮಯದಲ್ಲಿ 'ಪಿಕೆ' 340.8 ಕೋಟಿ ಗಳಿಸಿತು ಮತ್ತು ಸಾರ್ವಕಾಲಿಕ ಬ್ಲಾಕ್ಬಸ್ಟರ್ ಆಗಿತ್ತು. ಆದರೆ ಈ ಚಿತ್ರದ ನಾಯಕ ನಟ ಆಮೀರ್ ಖಾನ್ ಮತ್ತು ಅದರಲ್ಲಿ ಸಂಜಯ್ ದತ್ ತುಂಬಾ ಚಿಕ್ಕ ಪಾತ್ರವನ್ನು ಹೊಂದಿದ್ದರು. ಹಾಗಾಗಿ ಕ್ರೆಡಿಟ್ ಆಮೀರ್ ಖಾನ್ ಗೆ ಸಲ್ಲುತ್ತದೆ.

ಸುಮಾರು 3 ವರ್ಷಗಳ ವಿರಾಮದ ನಂತರ, ಸಂಜಯ್ ದತ್ 2017 ರಲ್ಲಿ 'ಭೂಮಿ' ಚಿತ್ರದ ಮೂಲಕ ದೊಡ್ಡ ಪರದೆಯ ಮೇಲೆ ಮರಳಿದರು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 10.63 ಕೋಟಿ ಗಳಿಸಲು ಸಾಧ್ಯವಾಯಿತು ಮತ್ತು ಫ್ಲಾಪ್‌  ಎಂದು ಸಾಬೀತಾಯಿತು.2018 ರಲ್ಲಿ, ಸಂಜಯ್ ದತ್ 'ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್ 3' ನಲ್ಲಿ ಕೆಲಸ ಮಾಡಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 6.68 ಕೋಟಿ ರೂ. ಗಳಿಕೆಯೊಂದಿಗೆ ಫ್ಲಾಪ್‌ ಆಯಿತು.

click me!