ಸಂತೋಷಂ ಅವಾರ್ಡ್ಸ್ ಅವಾಂತರ; ಬೆಂಗಳೂರಿಗೆ ವಾಪಸ್ ಹೊರಟ ಸ್ಯಾಂಡಲ್‌ವುಡ್ ತಾರೆಯರು

Published : Dec 03, 2023, 03:39 PM ISTUpdated : Dec 03, 2023, 04:09 PM IST
ಸಂತೋಷಂ ಅವಾರ್ಡ್ಸ್ ಅವಾಂತರ; ಬೆಂಗಳೂರಿಗೆ ವಾಪಸ್ ಹೊರಟ ಸ್ಯಾಂಡಲ್‌ವುಡ್ ತಾರೆಯರು

ಸಾರಾಂಶ

ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್‌ ಬೆಂಗಳೂರಿಗೆ ಹೊರಟಿದ್ದಾರೆ. 

ತೆಲುಗಿನ ಪ್ರತಿಷ್ಠಿತ 'ಸಂತೋಷಂ ಅವಾರ್ಡ್ಸ್' ನೀಡಲು 'ಕನ್ನಡ ಸ್ಟಾರ್ಸ್'ಗೆ  ಗೋವಾಗೆ ಆಹ್ವಾನ ನೀಡಿದ್ದ ಸುರೇಶ್ ಅವರಿಂದ ಕನ್ನಡದ ಸಿನಿತಾರೆಯರಿಗೆ ಅವಮಾನವಾಗಿದೆ ಎನ್ನಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್ ಓ ಸುರೇಶ್ ಕೊಂಡೇಟಿಯಿಂದ ಈ ರೀತಿ ಅವಮಾನ  ಆಗಿದ್ದು, ಕನ್ನಡದ ತಾರೆಯರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್ ಬೆಂಗಳೂರಿಗೆ ಬರುತ್ತಿದ್ದಾರೆ ಎನ್ನಲಾಗಿದೆ. 

ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಲಾಗಿದೆ. ಹೋಟೆಲ್ ರೂಮ್ಸ್ ನಿಂದ ಹಿಡಿದು ಹಾಸ್ಪಿಟಾಲಿಟಿ ನೀಡಲು ಸಹ ಆಯೋಜಕರು ವಿಫಲರಾಗಿದ್ದಾರೆ ಎನ್ನಲಾಗಿದೆ. ಕೊನೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಾಂತಿ ಸಿನಿಮಾಗೆ ಅವಾರ್ಡ್ ನೀಡ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಆಗಿದೆಯಂತೆ. ಆಯೋಜನೆಯಲ್ಲಿ ಮಹಾ ಎಡವಟ್ಟು ನಡೆದಿದ್ದು, ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಮೋಸವಾಗಿದೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಕರೆದು ಈ ರೀತಿ ಅವಮಾನ ಆಗಿರುವುದು ತುಂಬಾ ಬೇಸರ ತರಿಸಿದೆ ಎಂದು ಗೋವಾಗೆ ಹೋಗಿ ವಾಪಸ್ಸಾಗುತ್ತಿರುವ ಸೆಲೆಬ್ರಿಟಿಗಳು ಹೇಳಿದ್ದಾರೆ.

ಗಂಡು ಮಕ್ಕಳಿಗೆ ಅಪ್ಪ ಏನು ಕಲಿಸಬೇಕೆಂದು ಹೇಳಿಕೊಟ್ಟ ನಟಿ ಸಾಯಿ ಪಲ್ಲವಿ!

ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್‌ ಬೆಂಗಳೂರಿಗೆ ಹೊರಟಿದ್ದಾರೆ. ಗೋವಾದ ಕಾರ್ಯಕ್ರಮಕ್ಕೆ ಹೋಗಿದ್ದ ಸುಮಾರು 30ರಿಂದ 35 ಮಂದಿ ಕನ್ನಡಿಗರಿಗೆ ಅವಮಾನವಾಗಿದೆ. ಹೊಟೆಲ್ ರೂಮು ಬುಕ್ಕಿಂಗ್, ಆತಿಥ್ಯ ಎಲ್ಲದರಲ್ಲೂ ಎಡವಟ್ಟು ಎದ್ದು ಕಾಣುತ್ತಿದೆ ಎಂದು ಕನ್ನಡದ ನಟನಟಿಯರು ಕೋಪಗೊಂಡಿದ್ದಾರೆ ಎನ್ನಲಾಗಿದೆ. 

ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ, ರಶ್ಮಿಕಾ ಮಂದಣ್ಣ ಉಪದೇಶ ಕೇಳಿ ನೆಟ್ಟಿಗರು ಸುಸ್ತೋ ಸುಸ್ತು!

ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್ ನಲ್ಲಿ ಭಾಗಿಯಾಗದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅವರಿಗೂ ಸಹ ಕಾರ್ಯಕ್ರಮದಲ್ಲಿ ಪ್ರಾಯೋಜಕರಿಂದ ಬಹಳಷ್ಟು ಎಡವಟ್ಟುಗಳು ನಡೆದಿವೆ ಎನ್ನಲಾಗಿದೆ. ಈ ಮೊಲದೇ ಟ್ವೀಟ್ ಮೂಲಕ ತಮಿಳು ಮಂದಿ ಅಸಹಕಾರ ವ್ಯಕ್ತಪಡಿಸಿದ್ದರು. ಇದೀಗ ತಮಿಳು ತಾರೆಯರೂ ಕೂಡ ಕಾರ್ಯಕ್ರಮ ಬಾಯ್ಕಾಟ್ ಮಾಡಲು ಪ್ಲಾನ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ, ತೆಲುಗು ಸಿನಿತಾರೆಯರನ್ನು ಹೊರತು ಪಡಿಸಿ ಕನ್ನಡ, ತಮಿಳು ಸ್ಟಾರ್ಸ್ ಭಾಗವಹಿಸುವಿಕೆ ಈ ಮೂಲಕ ತಡೆಯಾದಂತಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!