ಮದ್ವೆನೇ ಆಗಲ್ಲ ಎಂದಿದ್ದ ರಾಖಿಗೆ ಡಿವೋರ್ಸ್​ಗೂ ಮುನ್ನವೇ ಸಿಕ್ಕನಂತೆ ಮತ್ತೊಬ್ಬ- ಯಾರೀತ?

By Suvarna NewsFirst Published Jun 15, 2023, 2:58 PM IST
Highlights

ಆದಿಲ್​ ಖಾನ್​ರನ್ನು ಮದುವೆಯಾಗಿ ಅವರನ್ನು ಜೈಲಿಗೆ ತಳ್ಳಿದ್ದ ರಾಖಿ ಸಾವಂತ್​, ಮದ್ವೆನೇ ಆಗಲ್ಲ ಎಂದಿದ್ದರು. ಆದರೆ ಈಗ ಹೊಸ ಹುಡುಗ ಸಿಕ್ಕಿರುವ ಬಗ್ಗೆ ಹೇಳಿಕೊಂಡಿದ್ದಾರೆ.  
 

ರಾಖಿ ಸಾವಂತ್​ Rakhi Sawant ಸದ್ಯ ಭಾರಿ ಚರ್ಚೆಯಲ್ಲಿರುವ ನಟಿ. ಈಕೆಯ ಇತ್ತೀಚಿನ ಕೆಲವು ಘಟನೆಗಳನ್ನು ಮೆಲುಕು ಹಾಕಿದ ಬಳಿಕ ಇವರನ್ನು ಡ್ರಾಮಾ ಕ್ವೀನ್​ ಎಂದು ಕರೆಯುವವರೇ ಹೆಚ್ಚಾಗಿದ್ದಾರೆ.  ಆದಿಲ್​ ಖಾನ್​ ದುರ್ರಾನಿ ಅವರ ಜೊತೆಗಿನ ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.  

 ಇದಾದ ಬಳಿಕ ರಾಖಿ ಹಿಜಾಬ್​ ಧರಿಸಿ ಬಂದು ಇಸ್ಲಾಂ ಸ್ವೀಕರಿಸಿರುವ ಬಗ್ಗೆ ಜಗಜ್ಜಾಹೀರ ಮಾಡಿದ್ದರು. ವಿಡಿಯೋ  ಹಂಚಿಕೊಂಡಿದ್ದು,  ಅದರ ಶೀರ್ಷಿಕೆಯಲ್ಲಿ 'ನನ್ನ ಮೊದಲ ರೋಸಾ' ಎಂದು ಬರೆದುಕೊಂಡಿದ್ದರು. ವಿಡಿಯೋದಲ್ಲಿ ಅವರು,  'ಎಲ್ಲರಿಗೂ ಸಲಾಮ್ ವಾಲೇಕುಮ್. ಇಂದು ನನ್ನ ಮೊದಲ ರೋಜಾ. ಮತ್ತು ನನ್ನನ್ನು ನಂಬಿರಿ, 4 ಗಂಟೆಯಿಂದ ಉಪವಾಸವಿದ್ದೇನೆ. ಆದರೂ  ನನಗೆ ಹಸಿವಾಗುತ್ತಿಲ್ಲ. ನಾನು ನಮಾಜ್ ಮಾಡುತ್ತಿದ್ದೇನೆ. ನಾನು ಪ್ರಾರ್ಥಿಸುತ್ತೇನೆ. ನಾನು ಒಳಗಿನಿಂದ ತುಂಬಾ ನಿರಾಳವಾಗಿದ್ದೇನೆ ಮತ್ತು ನಾನು ಇನ್ನೂ ಕಲಿಯುತ್ತಿದ್ದೇನೆ' ಎಂದಿದ್ದರು. ಇವೆಲ್ಲಾ ಬೆಳವಣಿಗೆಯ ಬಳಿಕ ಮದುಮಗಳಂತೆ ಸಿಂಗರಿಸಿಕೊಂಡು ಮತ್ತೆ ಜೀವನದಲ್ಲಿ ಮದುವೆಯನ್ನೇ ಆಗುವುದಿಲ್ಲ ಎಂದು ಪಣತೊಟ್ಟಿದ್ದರು.

Latest Videos

Drama Queen ರಾಖಿ ಸಾವಂತ್​ ಬಾಯಲ್ಲಿ ಇಂಥ ಮಾತಾ? ಮನಸೋತ ನೆಟ್ಟಿಗರು

ಆದರೆ ಅದನ್ನೀಗ ರಾಖಿ ಮರೆತಂತಿದೆ. ಮತ್ತೊಬ್ಬ ಹುಡುಗ ತಮ್ಮ ಬಾಳಲ್ಲಿ ಎಂಟ್ರಿ ಕೊಟ್ಟಿರೋದಾಗಿ ನಟಿ ಹೇಳಿಕೊಂಡಿದ್ದಾರೆ. ದುಬೈನಲ್ಲಿಯೂ ಬಿಜಿನೆಸ್​ ನಡೆಸ್ತಿರೋ ರಾಖಿ ಸಾವಂತ್​, ಅಲ್ಲಿಂದ ವಾಪಸಾಗಿದ್ದಾರೆ. ಈಗ ಹೊಸ ಹುಡುಗನ ಬಗ್ಗೆ ತಿಳಿಸಿದ್ದಾರೆ. 'ನಾನೊಬ್ಬರನ್ನು ಭೇಟಿಯಾಗಿದ್ದೇನೆ, ಆದರೆ ಅವರ ಜೊತೆ ಹೊಸ ಜೀವನ ಶುರು ಮಾಡಲು ಭಯ ಆಗುತ್ತಿದೆ, ನಾನಿನ್ನೂ ರೆಡಿ ಇಲ್ಲ' ಎಂದಿದ್ದಾರೆ.  ಆ ಹೊಸಬನ ಬಗ್ಗೆ ಹೇಳಿರುವ ರಾಖಿ, 'ಅವರು ತುಂಬ ಒಳ್ಳೆಯವರು. ಮೊದಲ ಮದುವೆಯಲ್ಲಿ ಏನಾಯ್ತು ಅಂತ ನಿಮಗೆಲ್ಲ ಗೊತ್ತಿದೆ. ಅದಕ್ಕೆ ನನಗೆ ಈಗ ಭಯವಾಗ್ತಿದೆ. ನನ್ನ ಜೀವನದಲ್ಲಿಯೂ ಖುಷಿ ಬೇಕು. ಜೀವನದಲ್ಲಿ ಸಿಕ್ಕಾಪಟ್ಟೆ ಅತ್ತಿದ್ದೇನೆ. ಡಿಪ್ರೆಶನ್‌ನಲ್ಲಿ (Depression) ಇದ್ದಿದ್ದಕ್ಕೆ ನಾನು ದುಬೈಗೆ ಹಾರಿದ್ದೆ. ಅಲ್ಲಿಂದ ಒಂದಷ್ಟು ಔಷಧ ತಂದಿದ್ದೇನೆ. ಈಗ ಹೊಸ ಹುಡುಗ ಸಿಕ್ಕಿದ್ದಾರೆ.  ಜೀವನದಲ್ಲಿ ನಮ್ಮನ್ನು ನೋಯಿಸುವವರು ಇರುತ್ತಾರೆ. ಕೆಲವರು ಗಾಯಕ್ಕೆ ಉಪ್ಪು ಹಾಕ್ತಾರೆ. ಕೆಲವರು ನಮ್ಮ ಗಾಯಕ್ಕೆ ಔಷಧಿ ಹಚ್ಚುತ್ತಾರೆ. ಅವರನ್ನು ನಾವು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು. ನನ್ನ ಹೊಸ ಹುಡುಗ ಅಂಥವರು' ಎಂದಿದ್ದಾರೆ ರಾಖಿ.
 
ಅಂದಹಾಗೆ ಆದಿಲ್​ ಜೈಲಿನಲ್ಲಿ ಇದ್ದಾರೆ. ಇದಾಗಲೇ ತಾವು ಇಸ್ಲಾಂ ಧರ್ಮಕ್ಕೆ  ಮತಾಂತರ ಆಗಿರುವುದಾಗಿ ರಾಖಿ ಹೇಳಿಕೊಂಡಿದ್ದಾರೆ. ಆದರೆ ಆದಿಲ್​ ಖಾನ್​ ಮತ್ತು ರಾಖಿ ಇದುವರೆಗೆ ಕಾನೂನುಬದ್ಧವಾಗಿ ಬೇರ್ಪಟ್ಟಿಲ್ಲ, ಅಂದರೆ ವಿಚ್ಛೇದನ ಅಗಲಿಲ್ಲ. ಈ ಬಗ್ಗೆಯೂ ಹೇಳಿಕೊಂಡಿರುವ ರಾಖಿ, 'ನನಗೆ ಮತ್ತು ಆದಿಲ್‌ನಿಂದ ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸಿಕ್ಕಿದಕೂಡಲೇ ನಾನು ಬೇರೆ ಜೀವನ ಶುರು ಮಾಡಬಹುದು ಎಂದು ಕಾಯುತ್ತಿದ್ದೇನೆ. ಆದಿಲ್ ಇನ್ನೂ ಜೈಲಿನಲ್ಲಿದ್ದಾನೆ. ದುಬೈನಲ್ಲಿದ್ದಾಗ (Dubai) ಅವನು ನನಗೆ ತುಂಬ ಸಲ ಫೋನ್ ಮಾಡಿದ್ದಾನೆ. ನನ್ನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ಸ್ವಾತಂತ್ರ್ಯ ಕೊಡು ಅಂತ ಕೇಳಿದ್ದಾನೆ. ಅದು ನನ್ನಿಂದ ಆಗದು. ಅವನಿಗೆ ಜಾಮೀನು ಸಿಕ್ಕಿದರೆ ನನಗೆ ವಿಚ್ಛೇದನವೂ ಸಿಗುತ್ತದೆ. ಇದಕ್ಕೂ ಮುನ್ನ ಆದಿಲ್‌ಗೆ ಎರಡು ಬಾರಿ ವಿಚ್ಛೇದನ ಆಗಿದೆ. ನನಗೆ ವಿಚ್ಛೇದನ ಸಿಗೋದು ಮುಖ್ಯ' ಎಂದಿದ್ದಾರೆ.

ನಟಿ ಶೆರ್ಲಿನ್​ ಚೋಪ್ರಾ ವಿಡಿಯೋ ಲೀಕ್​ ಮಾಡಿದ ರಾಖಿ ಸಾವಂತ್​: ಹೈಕೋರ್ಟ್ ಹೇಳಿದ್ದೇನು?

click me!