Mahesh Babu: ತಂದೆ ಸೂಪರ್ ಸ್ಟಾರ್ ಕೃಷ್ಣ ಬಗ್ಗೆ ಭಾವುಕ ಸಾಲು ಹಂಚಿಕೊಂಡ ನಟ ಮಹೇಶ್ ಬಾಬು

Published : Nov 26, 2022, 12:03 PM ISTUpdated : Nov 26, 2022, 12:12 PM IST
Mahesh Babu: ತಂದೆ ಸೂಪರ್ ಸ್ಟಾರ್ ಕೃಷ್ಣ ಬಗ್ಗೆ ಭಾವುಕ ಸಾಲು ಹಂಚಿಕೊಂಡ ನಟ ಮಹೇಶ್ ಬಾಬು

ಸಾರಾಂಶ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಅವರ ಬಗ್ಗೆ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ. 

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅಪ್ಪನ ಅಗಲಿಕೆಯ ನೋವಿನನಿಂದ ಇನ್ನೂ ಹೊರಬಂದಿಲ್ಲ. ಒಂದೂವರಿ ತಿಂಗಳ ಅಂತರದಲ್ಲಿ ಮಹೇಶ್ ಬಾಬು ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡರು. ನವೆಂಬರ್ 15ರಂದು ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಇಹಲೋಕ ತ್ಯಜಿಸಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಕೃಷ್ಣ ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಅಮ್ಮನ ಅಗಲಿಕೆಯ ನೋವು ಇನ್ನೂ ಹಸಿಯಾಗಿರುವಾಗಲೇ ತಂದೆ ಕೂಡ ದೂರ ಆಗಿರುವುದರಿಂದ ಮಹೇಶ್ ಬಾಬು ಕುಸಿದು ಹೋಗಿದ್ದಾರೆ. ಮಹೇಶ್ ಬಾಬು ಇಡೀ ಕುಟುಂಬ ದುಃಖದಲ್ಲಿದೆ. ಈ ನಡುವೆ ಮಹೇಶ್ ಬಾಬು ತಂದೆಯ ಬಗ್ಗೆ ಭಾವುಕ ಸಾಲು ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದು ವೈರಲ್ ಆಗಿದೆ.

'ನೀವು ಬದುಕನ್ನು ಸಂಭ್ರಮಿಸಿದ್ದೀರಿ. ನೀವು ಹೋದ ಮೇಲು ಅದನ್ನು ಇನ್ನಷ್ಟು ಸಂಭ್ರಮಿಸಲಾಗುತ್ತೆ. ಅದೇ ನಿಮ್ಮ ಗ್ರೇಟ್‌ನೆಸ್. ನೀವು ನಿರ್ಭೀತಿಯಾಗಿ ನಿಮ್ಮ ಜೀವನ ನಡೆಸಿದ್ದೀರಿ. ಧೈರ್ಯ ಮತ್ತು ಚುರುಕುತನವು ನಿಮ್ಮ ಸ್ವಭಾವವಾಗಿತ್ತು. ನನ್ನ ಸ್ಫೂರ್ತಿ, ನನ್ನ ಧೈರ್ಯ ನೀವು. ವಿಚಿತ್ರವೆಂದರೆ, ನಾನು ಹಿಂದೆಂದೂ ಅನುಭವಿಸದ ಈ ಶಕ್ತಿಯನ್ನು ಈಗ ನನ್ನಲ್ಲಿ ಅನುಭವಿಸುತ್ತಿದ್ದೀನಿ. ಈಗ ನಾನು ನಿರ್ಭೀತನಾಗಿದ್ದೇನೆ. ನಿಮ್ಮ ಬೆಳಕು ನನ್ನಲ್ಲಿ ಶಾಶ್ವತವಾಗಿ ಬೆಳಗುತ್ತದೆ. ನಾನು ನಿಮ್ಮ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ. ನಾನು ನಿಮ್ಮನ್ನು ಮತ್ತಷ್ಟು ಹೆಮ್ಮೆ ಪಡಿಸುತ್ತೇನೆ. ಲವ್ ಯೂ ನಾನಾ. ನನ್ನ ಸೂಪರ್ ಸ್ಟಾರ್' ಎಂದು ಬರೆದುಕೊಂಡಿದ್ದಾರೆ. ಮಹೇಶ್ ಬಾಬು ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಮಹೇಶ್ ಬಾಬು ಅವರಿಗೆ ಧೈರ್ಯ ತುಂಬುತ್ತಿದ್ದಾರೆ. 

Krishna Death; ದುಃಖದಲ್ಲಿರುವ ಮಹೇಶ್ ಬಾಬುನ ತಬ್ಬಿ ಧೈರ್ಯ ತುಂಬಿದ ರಾಮ್, ಅಲ್ಲು, ಚಿರು ಮತ್ತು Jr.NTR

ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಹೈದರಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.  ಕೃಷ್ಣ ನಿಧನಕ್ಕೆ ಇಡೀ ಟಾಲಿವುಡ್ ಕಂಬನಿ ಮಿಡಿಯಿತು. ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದರು. ಅಲ್ಲು ಅರ್ಜುನ್, ಪ್ರಭಾಸ್, ಚಿರಂಜೀವಿ, ಪವನ್ ಕಲ್ಯಾಣ್,ಜೂ.ಎನ್ ಟಿ ಆರ್ ಸೇರಿದಂತೆ ಅನೇಕರು ಕೃಷ್ಣ ಅವರ ಅಂತಿಮ ದರ್ಶನ ಪಡೆದು ಮಹೇಶ್ ಬಾಬು  ಅವರಿಗೆ ಸಾಂತ್ವನ ಹೇಳಿದರು.

ಕೃಷ್ಣ ಅವರು 1960ರಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಕೃಷ್ಣ, ಮೂಲ ಹೆಸರು ಘಟ್ಟಮನೇನಿ ಶಿವ ರಾಮ ಕೃಷ್ಣ ಮೂರ್ತಿ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ ಅವರು ಟಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ್ದರು. ಅವರು ಯಶಸ್ವಿ ನಿರ್ದೇಶಕ ಮತ್ತು ನಿರ್ಮಾಪಕರೂ ಆಗಿದ್ದರು. ಅವರಿಗೆ 2009 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿನಿಮಾರಂಗದ ಜೊತೆಗೆ ಕೃಷ್ಣ ಅವರು ರಾಜಕೀಯದಲ್ಲೂ ಸಕ್ರೀಯರಾಗಿದ್ದರು.  ಹಿರಿಯ ನಟ ಕೃಷ್ಣ ಅವರು 6 ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅವರು 'ಕುಲ ಗೋತ್ರಲು' , 'ಪರವು ಪ್ರತಿಷ್ಠಾ' ಮತ್ತು 'ಪದಂಡಿ ಮುಂದುಕು' ಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ಮಾಡುವ ಮೂಲಕ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 

ಹ್ಯಾಂಡ್‌ಸಮ್ ಹಂಕ್ ಮಹೇಶ್ ಬಾಬು ವಿಗ್ ರಹಸ್ಯ ಬಿಚ್ಚಿಟ್ಟ ಮೇಕಪ್ ಮ್ಯಾನ್

ಶ್ರೀ ಕೃಷ್ಣ ಅವರು ನಟ ಮಹೇಶ್ ಬಾಬು ಅವರ ತಂದೆ ಮತ್ತು ಟಿಡಿಪಿ ನಾಯಕ ಜಯ್ ಗಲ್ಲಾ ಅವರ ಮಾವ. ಅವರ ಪತ್ನಿ ಮತ್ತು ಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಿಧನರಾದರು. ಅವರ ಹಿರಿಯ ಮಗ ರಮೇಶ್ ಬಾಬು ಜನವರಿಯಲ್ಲಿ ಮೃತಪಟ್ಟಿದ್ದರು. ಅವರ ಎರಡನೇ ಪತ್ನಿಯಾಗಿದ್ದ ನಟಿ ವಿಜಯ ನಿರ್ಮಲಾ ಅವರು ಸಹ 2019 ರಲ್ಲಿ ಕೊನೆಯುಸಿರೆಳೆದಿದ್ದರು. ಈ ವರ್ಷ ಮಹೇಶ್ ಬಾಬು ಕುಟುಂಬಕ್ಕೆ ತುಂಬಾ ಕಷ್ಟದ ಸಮಯವಾಗಿದೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?