S Janaki: ಭಾರತದ ಗಾನ ಕೋಗಿಲೆ ಎಸ್ ಜಾನಕಿ ವಿಧಿವಶ; ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಕನ್ನಡದ ನಂಟು ಹೊಂದಿದ್ದ ಗಾಯಕಿ ಇನ್ನು ನೆನಪು ಮಾತ್ರ!

Published : Jul 11, 2026, 08:32 PM IST
S Janaki

ಸಾರಾಂಶ

ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಸಂಬಂಧ ಆಪ್ತವಾಗಿತ್ತು.

ಭಾರತದ ಲೆಜೆಂಡ್ ಸಿಂಗರ್, ಹೆಸರಾಂತ ಗಾಯಕಿ ಎಸ್‌ ಜಾನಕಿಯವರು (S Janaki) ಇಂದು (11 ಜುಲೈ 2026) ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಕನ್ನಡದಲ್ಲಿಯೂ ಬಹಳಷ್ಟು ಹಾಡನ್ನು ಹಾಡಿದ್ದ ಎಸ್ ಜಾನಕಿಯವರು ಕರ್ನಾಟಕದಲ್ಲಿ ಮನೆಮಾತಾಗಿದ್ದರು. ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಲ್ಲಿ ಒಂದಾದ ಪದ್ಮಭೂಷಣ ಪಡೆದಿದ್ದಾರೆ ಭಾರತದ ಮೇರು ಗಾಯಕಿ ಎಸ್ ಜಾನಕಿಯವರು.

ಕನ್ನಡದಲ್ಲಿ, ಅದರಲ್ಲೂ ಮುಖ್ಯವಾಗಿ ಕನ್ನಡದ ಮೇರು ನಟರಾದ ಡಾ ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್‌ ನಾಗ್, ಅನಂತ್‌ ನಾಗ್, ಅಂಬರೀಷ್, ಶಿವರಾಜ್‌ಕುಮಾರ್ ಸೇರಿದಂತೆ ಬಹಳಷ್ಟು ನಟನಟಿಯರ ಸಿನಿಮಾಗಳ ಹಾಡುಗಳಿಗೆ ಎಸ್ ಜಾನಕಿಯವರು ಧ್ವನಿ ನೀಡಿದ್ದಾರೆ.

ಅಪ್ರತಿಮ ಗಾಯಕಿ ಎಸ್‌ ಜಾನಕಿ ಅವರಿಗೆ ವಯೋಸಹಜ ಅನಾರೋಗ್ಯವಿತ್ತು. ಜೊತೆಗೆ ಇತ್ತೀಚೆಗೆ ಕಾಲುಜಾರಿ ಬಿದ್ದು ವ್ಹೀಳ್‌ಚೇರ್‌ನಲ್ಲಿ ಓಡಾಡುವಂತಾಗಿತ್ತು. ಇಂದು ಆಸಪತ್ರೆಯಲ್ಲಿ ಹಿರಿಯ ಗಾಯಕಿ ಎಸ್‌ ಜಾನಕಿಯವರು ನಿಧನರಾಗಿದ್ದಾರೆ.

ನಾಲ್ಕುರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ವಿವಿಧ ರಾಜ್ಯ ಪ್ರಶಸ್ತಿಗಳು, ಬಹಳಷ್ಟು ಸಂಘಸಂಸ್ಥೆಗಳ ಪ್ರಶಸ್ತಿಗಳನ್ನು ಪಡೆದಿರುವ ಹಿರಿಯ ಗಾಯಕಿ ಎಸ್ ಜಾನಿಯವರು ಇಂದು ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಈ ಮೂಲಕ ಭಾರತದ ಹೆಮ್ಮೆಯ ಹಿನ್ನೆಲೆ ಗಾಯನದ ಹಿರಿಯ ಗಾಯಕರಲ್ಲಿ ಕೊಂಡಿಯಲ್ಲಿ ಮತ್ತೊಂದು ಸಂಗೀತ ರತ್ನ ನಮ್ಮಿಂದ ದೂರವಾಗಿದೆ.

ದಿವಂಗತ ಮೇರುಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಸಂಯೋಜಕ ಇಳಯರಾಜ ಅವರೊಂದಿಗೆ ಎಸ್ ಜಾನಕಿ ಅವರಿಗೆ ಆತ್ಮೀಯ ಒಡನಾಟವತ್ತು. ಜೊತೆಗೆ ಉಳಿದ ಹಿರಿಯ ಹಾಗೂ ಕಿರಿಯ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು, ನಟನಟಿಯರು ಕಲಾವಿದರು ಸೇರಿದಂತೆ ಚಿತ್ರರಂಗದ ಬಹಳಷ್ಟು ಜನರ ಜೊತೆ ಎಸ್ ಜಾನಕಿಯವರ ಒಡನಾಟ ಇತ್ತು. ಈ ಸಂಗೀತದ ಮುತ್ತು ಇಂದು ನಮ್ಮನ್ನು ಅಗಲಿದ್ದಾರೆ. ಅವರಿಗೆ ಚಿತ್ರರಂಗ ಸೇರಿದಂತೆ ಇಡೀ ದೇಶ ಅಶ್ರುತರ್ಪಣ ನೀಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

S Janaki: ಮಹಾನಟಿ ಸಾವಿತ್ರಿಗೆ ನಾನು ಹಾಡಲ್ಲ ಎಂದಿದ್ದ ಜಾನಕಿಯಮ್ಮ? ಇಲ್ಲಿದೆ ಅಸಲಿ ಕಹಾನಿ
Karuru Stampede Victims: ಕರೂರು ಕಾಲ್ತುಳಿದ ರಹಸ್ಯ ಬಿಚ್ಚಿಟ್ಟ ವಿಜಯ್; 'ಕೊಲೆಗಾರರಿಗೆ ಕ್ಷಮೆಯಿಲ್ಲ' ಎಂದು ಗುಡುಗಿದ ದಳಪತಿ!