ಖ್ಯಾತ ನಿರ್ಮಾಪಕ ಎಸ್‌.ಕೆ. ಕೃಷ್ಣಕಾಂತ್ ಇನ್ನಿಲ್ಲ

Suvarna News   | Asianet News
Published : Oct 02, 2020, 12:06 PM IST
ಖ್ಯಾತ ನಿರ್ಮಾಪಕ ಎಸ್‌.ಕೆ. ಕೃಷ್ಣಕಾಂತ್ ಇನ್ನಿಲ್ಲ

ಸಾರಾಂಶ

ಹೃದಯಾಘಾತದಿಂದ ಕಾಲಿವುಡ್ ನಿರ್ಮಾಪಕ ಕೃಷ್ಣಕಾಂತ್ (52) ಕೊನೆ ಉಸಿರೆಳೆದಿದ್ದಾರೆ. 

ತಮಿಳು ಚಿತ್ರರಂಗದ ಹೆಸರಾಂತ ನಿರ್ಮಾಪಕ ಎಸ್‌ಕೆ ಕೃಷ್ಣಕಾಂತ್ ಬುಧವಾರ (ಸೆಪ್ಟೆಂಬರ್ 30) ಹೃದಯಾಘಾತದಿಂದ ನಿಧನರಾಗಿದ್ದಾರೆ.  52 ವರ್ಷ ಕೃಷ್ಣಕಾಂತ್ ಕೆಲ ದಿನಗಳಿಂದ ಎದೆ ನೋವಿನಿಂದ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತಮ್ಮ ನಿವಾಸಕ್ಕೆ ಹಿಂದಿರುಗಿದ್ದರು. 

ಹೃದಯಾಘಾತದಿಂದ ಕನ್ನಡ ಕಿರುತೆರೆ ನಟ ನಿಧನ 

ಆದರೆ, ಚೆನ್ನೈನ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ. ನಿರ್ದೇಶಕ ಸುಬ್ರಹ್ಮಣಿಯಂ ಶಿವಾ ಟ್ಟಿಟರ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. 'ತಿರುಡಾ ತಿರುಡಿ' ಸಿನಿಮಾ ನಿರ್ಮಾಪಕರು ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದಿದ್ದಾರೆ. ಕೃಷ್ಣಕಾಂತ್ ಕಾರ್ಯವನ್ನು ಹಿರಿಯ ಪುತ್ರ ಅಕ್ಟೋಬರ್‌ 1ರಂದು ನೆರವೇರಿಸಿದ್ದಾರೆ.

ಧನುಶ್ 'ತಿರುಡಾ-ತಿರುಡಿ', ಸಿಂಬಾ 'ಮನ್ಮಥನ್' ವಿಕ್ರಮ್ 'ಕಿಂಗ್' ಸಿನಿಮಾಗಳುನ್ನು ಕೃಷ್ಣಕಾಂತ್ ನಿರ್ಮಾಣ ಮಾಡಿದ್ದಾರೆ. ಪತ್ನಿ ಲಕ್ಷ್ಮಿ ಹಾಗೂ  ಇಬ್ಬರು ಪುತ್ರರು ಚಂದ್ರಕಾಂತ್ ಮತ್ತು ಉದಯಕಾಂತ್‌ರನ್ನು ಅಗಲಿರುವ ಕೃಷ್ಣಕಾಂತ್ ಆತ್ಮಕ್ಕೆ ಶಾಂತಿ ಸಿಗಲಿ ಎಂದ ಪ್ರಾರ್ಥಿಸೋಣ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?