ಮಹಾರಾಷ್ಟ್ರ ಸಿಎಂ, ಸಂಸದನಿಗೆ ಬೆದರಿಕೆ ಕರೆ: ಕಂಗನಾ ಅಭಿಮಾನಿ ಅರೆಸ್ಟ್...!

Suvarna News   | Asianet News
Published : Sep 11, 2020, 03:31 PM ISTUpdated : Sep 11, 2020, 03:58 PM IST
ಮಹಾರಾಷ್ಟ್ರ ಸಿಎಂ, ಸಂಸದನಿಗೆ ಬೆದರಿಕೆ ಕರೆ: ಕಂಗನಾ ಅಭಿಮಾನಿ ಅರೆಸ್ಟ್...!

ಸಾರಾಂಶ

ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್‌ಗೆ ಬೆದರಿಕೆ ಕರೆ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಮಾನಿಯನ್ನು ದಕ್ಷಿಣ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.

ಶಿವಸೇನಾ ಮುಖಂಡ ಸಂಜಯ್ ರಾವತ್‌ಗೆ ಬೆದರಿಕೆ ಕರೆಗಳನ್ನು ಮಾಡಿದ್ದಕ್ಕಾಗಿ ಗುರುವಾರ ಸಂಜೆ ಕಂಗನಾ ಫ್ಯಾನ್‌ನ್ನು ಬಂಧಿಸಲಾಗಿದೆ. ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವತ್‌ಗೆ ಬೆದರಿಕೆ ಕರೆ ಮಾಡಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿಮಾನಿಯನ್ನು ದಕ್ಷಿಣ ಕೊಲ್ಕತ್ತಾದಲ್ಲಿ ಬಂಧಿಸಲಾಗಿದೆ.

ವ್ಯಕ್ತಿಯನ್ನು ಪಲಾಶ್ ಬೋಸ್ ಎಂದು ಗುರುತಿಸಲಾಗಿದ್ದು, ಈತ ಟಾಲಿಗುಂಜ್ ನಿವಾಸಿಯಾಗಿದ್ದಾನೆ. ಮುಂಬೈ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಆತನನ್ನು ಇಂದು ಅಲಿಪುರ್ ಕೋರ್ಟ್‌ನಲ್ಲಿ ಹಾಜರುಪಡಿಸಲಿದ್ದಾರೆ ಎಂದು ಕೊಲ್ಕತ್ತಾ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

'ನನ್ನ ಮಗಳು ಸತ್ಯದ ಜೊತೆ', ಮಹಾರಾಷ್ಟ್ರ ಸರ್ಕಾರದ ನಡೆ ಖಂಡಿಸಿದ ಕಂಗನಾ ತಾಯಿ

ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಸಂಬಂಧ ಕಂಗನಾ ರಣಾವತ್ ಹಾಗೂ ಶಿವಸೇನಾ ಮುಖಂಡನ ನಡುವೆ ವಾಕ್ಸಮರ ನಡೆಯುತ್ತಲೇ ಇತ್ತು. ಈ ನಡುವೆ ಶಿವಸೇನಾ ಮುಖಂಡರಿಂದ ಬೆದರಿಕೆ ಬಂದಿರುವುದಾಗಿ ನಟಿ ಹೇಳಿದ್ದರು. ಮುಂಬೈಯನ್ನು ನಟಿ ಪಿಒಕೆಗೆ ಹೋಲಿಸಿದ್ದರು.

ಶಿವಸೇನಾ ಎಂಪಿಗೆ ಕರೆ ಮಾಡಿದ್ದ ವ್ಯಕ್ತಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದ. ರಾವತ್ ಮಾತ್ರವಲ್ಲದೆ, ಅಂಡರ್‌ ವಲ್ರ್ಡ್‌ ಸೇರಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಗೃಹ ಸಚಿವ ಅನಿಲ್ ದೇಶ್‌ಮುಖ್ ಅವರಿಗೂ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪರಿಚಿತನಿಗೆ ಬಿಸ್ಕಿಟ್‌ ನೀಡಲು ಹೋಗಿ ಪೇಚಿಗೆ ಸಿಲುಕಿದ ಸಾರಾ ಅಲಿ ಖಾನ್
ನನ್ನ ಅರ್ಧ ವಯಸ್ಸಿನ ಹುಡುಗರು ಡೇಟಿಂಗ್‌ಗೆ ಕರೀತಿದ್ದಾರೆ.. 50 ಆದ್ರೂ ಮದುವೆಗೆ ರೆಡಿ: ನಟಿ ಅಮೀಶಾ ಪಟೇಲ್