ದುರ್ಗಾಷ್ಟಮಿ ಪ್ರಸಾದದಲ್ಲಿ ಈರುಳ್ಳಿ ಖಾದ್ಯ: ಕಂಗನಾಳನ್ನು ಹಿಂದೂ ವಿರೋಧಿ ಎಂದ ನೆಟ್ಟಿಗರು

By Suvarna NewsFirst Published Apr 21, 2021, 11:58 AM IST
Highlights

ದುರ್ಗಾಷ್ಟಮಿಗೆ ಈರುಳ್ಳಿ ಖಾದ್ಯ: ಫೋಟೋ ಟ್ವೀಟಿಸಿ ಕಂಗನಾ ವಿವಾದ!

ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ಅವರು ದುರ್ಗಾಷ್ಟಮಿ ಪ್ರಯುಕ್ತ ಈರುಳ್ಳಿಯ ಫೋಟೋ ಹಾಕುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ.

ಉತ್ತರ ಭಾರತದಲ್ಲಿ ಈಗ ಚೈತ್ರ ನವರಾತ್ರಿ ಆಚರಿಸಲಾಗುತ್ತಿದೆ. ಈ ವೇಳೆ ಮಂಗಳವಾರ ನಡೆದ ದುರ್ಗಾಷ್ಟಮಿ ಪ್ರಯುಕ್ತ ಉಪವಾಸವಿದ್ದರೆ ನಿಮ್ಮ ಮನೆಯಲ್ಲಿನ ಪ್ರಸಾದವು ಈ ರೀತಿ ಗೋಚರಿಸುತ್ತದೆ ಎಂಬ ಟ್ಯಾಗ್‌ಲೈನ್‌ನಲ್ಲಿ ಪೂರಿ, ಉಪ್ಪಿಟ್ಟು, ಮೊಸರು ಹಾಗೂ ಕತ್ತರಿಸಿದ ಈರುಳ್ಳಿಯ ಫೋಟೋವನ್ನು ನಟಿ ಕಂಗನಾ ಟ್ವೀಟ್‌ ಮಾಡಿದ್ದಾರೆ.

ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?

ದಕ್ಕೆ ಹಲವು ಟ್ವೀಟಿಗರು ವ್ಯಂಗ್ಯ ಮತ್ತು ಹಾಸ್ಯವಾಗಿ ಪ್ರತಿಕ್ರಿಯಿಸಿದ್ದರೆ, ಮತ್ತಷ್ಟುಜನ ಕಂಗನಾ ವಿರುದ್ಧ ಕಿಡಿಕಾರಿದ್ದಾರೆ. ‘9 ದಿನಗಳ ಹಬ್ಬದ ವೇಳೆ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಕ್ಕೆ ನಿಷೇಧವಿದೆ.

Imagine to be fasting on ashtami when parsadam in your house looks like this .... अष्टमी की हार्दिक शुभकामनाएँ🥰🙏 pic.twitter.com/pRYp6KRDNX

— Kangana Ranaut (@KanganaTeam)

9 ದಿನಗಳ ನವರಾತ್ರಿಯಂದು 9 ಶಕ್ತಿ ದೇವತೆಗಳಿಗೆ ಜನರು ದಿನವಿಡೀ ಉಪವಾಸವಿದ್ದು, ಪೂಜಾ ಪುನಸ್ಕಾರಗಳನ್ನು ಮಾಡುತ್ತಾರೆ’ ಎಂದು ಕಿರಿಕಾರಿದ್ದಾರೆ. ಈ ಸಲ ಚೈತ್ರ ನವರಾತ್ರಿ ಏ.13ರಂದು ಆರಂಭವಾಗಿದ್ದು ಏ.21ರ ರಾಮನವಮಿ ಆಚರಣೆಯೊಂದಿಗೆ ಮುಕ್ತಾಯವಾಗಲಿದೆ.

click me!