ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನಗೆ ತೀವ್ರ ಹೃದಯಾಘಾತ: ಹಾರ್ಟ್‌ ಬ್ಲಾಕ್‌ ಹಿನ್ನೆಲೆ ಹೃದಯಕ್ಕೆ ಸ್ಟೆಂಟ್‌

By BK AshwinFirst Published Jan 28, 2023, 7:29 AM IST
Highlights

ತಡ ರಾತ್ರಿ ಆಂಬ್ಯುಲೆನ್ಸ್‌ ಮೂಲಕ ನಾರಾಯಣ ಹೃದಯಾಲಯಕ್ಕೆ ತೆಲುಗು ಚಿತ್ರನಟ ನಂದಮುರಿ ತಾರಕರತ್ನ ಅವರನ್ನು ಕರೆತರಲಾಗಿದ್ದು, ಐಸಿಯುಗೆ ಶಿಫ್ಟ್‌ ಮಾಡಲಾಗಿದೆ. 

ಬೆಂಗಳೂರು (ಜನವರಿ 28, 2023): ತೀವ್ರ ಹೃದಯಘಾತಕ್ಕೆ ಒಳಗಾಗಿದ್ದ ತೆಲುಗು ಚಿತ್ರನಟ ನಂದಮೂರಿ ತಾರಕ ರತ್ನ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ತಡರಾತ್ರಿ ಆಂಧ್ರದ ಕುಪ್ಪಂನ ಪಿಇಎಸ್ ವೈದ್ಯಕೀಯ ಕಾಲೇಜಿನಿಂದ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳದುಬಂದಿದೆ. ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಯುವ ಗಲಮ್ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಪ್ಪಂಗೆ ತೆರಳಿದ್ದ ವೇಳೆ ನಂದಮುರಿ ತಾರಕ ರತ್ನ ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಈ ಹಿನ್ನೆಲೆ ತಡ ರಾತ್ರಿ ಆಂಬ್ಯುಲೆನ್ಸ್‌ ಮೂಲಕ ನಾರಾಯಣ ಹೃದಯಾಲಯಕ್ಕೆ ತೆಲುಗು ಚಿತ್ರನಟ ನಂದಮೂರಿ ತಾರಕರತ್ನ ಅವರನ್ನು ಕರೆತರಲಾಗಿದ್ದು, ಐಸಿಯುಗೆ ಶಿಫ್ಟ್‌ ಮಾಡಲಾಗಿದೆ. 
 
ನಂತರ, ನಟ ನಂದಮೂರಿ ತಾರಕ ರತ್ನಗೆ ನಾರಾಯಣ ಹೃದಯಾಲಯ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಇನ್ನು, ಜನವರಿ 28, 2023 (ಶನಿವಾರ) ಕೆಲ ಹೊತ್ತಲ್ಲೇ ನಾರಾಯಣ ಹೃದಯಾಲಯ ಆಸ್ಪತ್ರೆ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಿದ್ದಾರೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: Nandamuri Taraka Ratna; ಕುಸಿದು ಬಿದ್ದ ನಟ ತಾರಕ ರತ್ನ ತೀವ್ರ ಅಸ್ವಸ್ಥ; ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ

Reyy Enni Bad Newslu Raa Eeroju

తారక రత్నకు కార్డియాక్ అరెస్ట్... కుప్పంలోని ఓ ప్రైవేట్ ఆస్పత్రిలో కొనసాగుతున్న అత్యవసర చికిత్స..

Get Well Soon pic.twitter.com/xP0Jrxnq4V

— Vishnu Bekaar (@TheVishnuBekaar)

ಮಾಜಿ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಶುಕ್ರವಾರ ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದು, ಅವರ ಜೊತೆ ಹಲವು ರಾಜಕೀಯ ಮುಖಂಡರು ಭಾಗಿಯಾಗಿದ್ದರು. ನಟ ಕಮ್ ರಾಜಕಾರಣಿ ತಾರಕ ರತ್ನ ಕೂಡ ಪಾದಯಾತ್ರೆಯ ಭಾಗವಾಗಿದ್ದರು. ಇನ್ನು, ನಾರಾ ಲೋಕೇಶ್ ಪಾದಯಾತ್ರೆ ಆರಂಭಿಸುವ ಮುನ್ನ ಲಕ್ಷ್ಮೀಪುರಂ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸ್ವಲ್ಪ ದೂರ ನಡೆದ ನಂತರ ಲೋಕೇಶ್ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದರು. ತಾರಕ ರತ್ನ ಕೂಡ ಲೋಕೇಶ್ ಜೊತೆಗೆ ಮಸೀದಿಯೊಳಗೆ ಹೋದರು. ಮಸೀದಿಯಿಂದ ಹೊರಬರುವಾಗ ಕಾರ್ಯಕರ್ತರು ಒಮ್ಮೆಗೆ ನುಗ್ಗಿದರು. ನೂಕುನುಗ್ಗಲಿನಲ್ಲಿ ನಟ ಮೂರ್ಛೆ ತಪ್ಪಿ ಕೆಳಗೆ ಬಿದ್ದರು. ತಕ್ಷಣ ಅವರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಬೆಂಗಳೂರಿಗೆ ಶಿಫ್ಟ್‌ ಆಗುವ ಮುನ್ನ, ನಂದಮೂರಿ ಬಾಲಕೃಷ್ಣ, ಆಂಧ್ರದ ಕುಪ್ಪಂನ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. "ಅವರ ಎಲ್ಲಾ ನಿಯತಾಂಕಗಳು ಸರಿಯಾಗಿವೆ, ಅವರು ಪ್ರಥಮ ಚಿಕಿತ್ಸೆ ನೀಡಿದ್ದಾರೆ ಮತ್ತು ಅವರಿಗೆ ಸಾಧ್ಯವಾದಷ್ಟು ಕಾಳಜಿ ವಹಿಸಿದ್ದಾರೆ. ಚಿಂತೆ ಮಾಡಲು ಏನೂ ಇಲ್ಲ. ವೈದ್ಯರು ಕೂಡ ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅವರಿಗೆ ಹೃದಯಾಘಾತವಾಗಿತ್ತು ಮತ್ತು ಅವರ ಹಾರ್ಟ್‌ ಬ್ಲಾಕ್‌ ಆಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಉಲ್ಲೇಖಿಸಿದಂತೆ ಬಾಲಕೃಷ್ಣ, ನಂದಮೂರಿ ತಾರಕ ರತ್ನ ಅವರ ಆರೋಗ್ಯದ ಅಪ್‌ಡೇಟ್‌ ಅನ್ನು ಹಂಚಿಕೊಂಡಿದ್ದಾರೆ.

ವೈದ್ಯರು ಅವರ ನಾಡಿಮಿಡಿತವನ್ನು ಮರಳಿ ತರಲು ಯಶಸ್ವಿಯಾದರೂ, ಅವರು ಇನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತಾರಕ ರತ್ನ ಅವರಿಗೆ ಆಂಜಿಯೋಗ್ರಾಮ್ ಮಾಡಿ ಹೃದಯಕ್ಕೆ ಸ್ಟೆಂಟ್ ಹಾಕಲಾಗಿದೆ ಎಂದು ವರದಿಯಾಗಿದೆ. ತಾರಕ ರತ್ನ ಅವರ ಆರೋಗ್ಯ ವಿಚಾರಿಸಲು ಅವರ ಚಿಕ್ಕಪ್ಪ ಹಾಗೂ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ತಡರಾತ್ರಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಶಿಫ್ಟ್‌ ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

39 ವರ್ಷ ವಯಸ್ಸಿನ ನಟ ತಾರಕ ರತ್ನ ಅವರು ಟಿಡಿಪಿ ಸಂಸ್ಥಾಪಕ, ದಿಗ್ಗಜ ನಟ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ.ರಾಮರಾವ್ ಅವರ ಮೊಮ್ಮಗ. ಜೂನಿಯರ್ ಎನ್ ಟಿ ಆರ್, ಕಲ್ಯಾಣ್ ರಾಮ್ ಮತ್ತು ಲೋಕೇಶ್ ಅವರ ಸೋದರಸಂಬಂಧಿ. 2002 ರ ತೆಲುಗು ಚಲನಚಿತ್ರ ಒಕಾಟೊ ನಂಬರ್ ಕುರ್ರಾಡುದಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ತಾರಕ್, ಭದ್ರಿ ರಾಮುಡು, ಮನಮಂತ ಮತ್ತು ರಾಜಾ ಚೆಯ್ಯಿ ವೇಷದಂತಹ ಚಲನಚಿತ್ರಗಳಲ್ಲಿನ ಕೆಲಸಕ್ಕಾಗಿ ಜನಪ್ರಿಯರಾಗಿದ್ದಾರೆ.

ಅವರು ಇತ್ತೀಚೆಗೆ ಡಿಸ್ನಿ+ ಹಾಟ್‌ಸ್ಟಾರ್‌ನ ತೆಲುಗು ವೆಬ್ ಸರಣಿ 9 ಅವರ್ಸ್‌ನಲ್ಲಿ ಕಾಣಿಸಿಕೊಂಡರು.

click me!