ನಾನು ಊಟ ಮಾಡೋ ತನಕ ಹೆಂಡ್ತಿ ಎಚ್ಚರ ಇರಬೇಕಾಗಿಲ್ಲ ಎಂದ ಅರ್ಜುನ್..! ಮಲೈಕಾ ಲಕ್ಕಿ

Suvarna News   | Asianet News
Published : Jun 01, 2021, 10:17 AM IST
ನಾನು ಊಟ ಮಾಡೋ ತನಕ ಹೆಂಡ್ತಿ ಎಚ್ಚರ ಇರಬೇಕಾಗಿಲ್ಲ ಎಂದ ಅರ್ಜುನ್..! ಮಲೈಕಾ ಲಕ್ಕಿ

ಸಾರಾಂಶ

ನನ್ನ ಪತ್ನಿ ನನ್ನ ಊಟ ಆಗೋ ತನಕ ಎಚ್ಚರವಾಗಿರಬೇಕಾಗಿಲ್ಲ ಎಂದು ಅರ್ಜುನ್ ಕಪೂರ್ ಲಿಂಗ ಸಮಾನತೆ ಬಗ್ಗೆ ಮಲೈಕಾ ಬಾಯ್‌ಫ್ರೆಂಡ್ ಮಾತು

ಪುರುಷ ಮತ್ತು ಮಹಿಳೆಯ ನಡುವಿನ ಪ್ರತಿಯೊಂದು ಸಂಬಂಧವೂ ಪ್ರಣಯದಿಂದ ಕೂಡಿಲ್ಲ ಎಂದು ನಟ ಅರ್ಜುನ್ ಕಪೂರ್ ಹೇಳುತ್ತಾರೆ. ಅವರ ಇತ್ತೀಚಿನ ಚಿತ್ರ "ಸಂದೀಪ್ ಔರ್ ಪಿಂಕಿ ಫಾರಾರ್" ಪ್ರೀತಿಯಿಲ್ಲದ ವಾಸ್ತವ ಜಗತ್ತನ್ನು ಚಿತ್ರಿಸಲು ಪ್ರಯತ್ನಿಸುತ್ತದೆ. ದಿಬಾಕರ್ ಬ್ಯಾನರ್ಜಿ ನಿರ್ದೇಶನದ ಈ ಚಿತ್ರವು ಪ್ರಣಯಕ್ಕಿಂತ ಹೆಚ್ಚಿನ ವಿಚಾರಗಳಿಗೆ ಗೌರವವನ್ನು ನೀಡುತ್ತದೆ ಎಂದು ಅರ್ಜುನ್ ಹೇಳಿದ್ದಾರೆ

ಕಲಾವಿದರಾಗಿ ನಾವು ಯಾವಾಗಲೂ ಡಿಫರೆಂಟಾಗಿ ಏನಾದರೂ ಮಾಡಬೇಕೆಂದು ಬಯಸುತ್ತೇವೆ. ಈ ಸಿನಿಮಾ ನಿಜಕ್ಕೂ ವಾಸ್ತವತೆಯ ಆಧಾರದಲ್ಲಿ ಬರೆದದ್ದು. ಸಿನಿಮಾ ಲವ್ ಸ್ಟೋರಿಯಾದಾಗ ಬಹಳಷ್ಟು ವಿಚಾರಗಳು ಮಿಕ್ಸ್ ಆಗುತ್ತವೆ. ಪ್ರೀತಿ, ಪ್ರಣಯ ಬೆಳವಣಿಗೆಯನ್ನು ವಿವರಿಸುವುದಕ್ಕೇ ಫೋಕಸ್ ನೀಡಬೇಕಾಗುತ್ತದೆ ಎಂದಿದ್ದಾರೆ.

ಮೊದಲ ಮದುವೆಯಲ್ಲಿ ಮಗನಿರೋ ಮಹಿಳೆಯ ಜೊತೆ ಡೇಟಿಂಗ್: ಮಲೈಕಾ ಪಾಸ್ಟ್ ಬಗ್ಗೆ ಅರ್ಜುನ್ ಮಾತು..

ಮಹಿಳೆಯರು ಮತ್ತು ಪುರುಷರಿಗೆ ಭಿನ್ನ ರೀತಿಯಲ್ಲಿ ಅವರ ಭಾವನೆ, ಸಂಬಂಧದಲ್ಲಿ ಉಳಿಯಲು ಬಿಡಬೇಕು. ಆದರೆ ಗೌರವ ಸಮಾನಾಗಿರಬೇಕು. ಬಹಳಷ್ಟು ಸಲ ಪ್ರೀತಿಯಲ್ಲಿದ್ದಾಗ ಗೌರವಿಸುವುದು ಮರೆತುಹೋಗುತ್ತದೆ ಎಂದಿದ್ದಾರೆ.

ಮೇ 20 ರಂದು ಡಿಜಿಟಲ್ ಮೂಲಕ ಬಿಡುಗಡೆಯಾದ ಈ ಸಿನಿಮಾ ಲಿಂಗಅಸಮಾನತೆ ಮತ್ತು ವರ್ಗದ ವಿಷಯಗಳನ್ನು ಪರಿಶೋಧಿಸುತ್ತದೆ. ಬ್ಯಾನರ್ಜಿ ಮತ್ತು ವರುಣ್ ಗ್ರೋವರ್ ಕಥೆ ಬರೆದಿದ್ದಾರೆ. ದೇಶಾದ್ಯಂತದ ಜನರಿಗೆ ಹೋಲಿಸಿದರೆ ಮುಂಬೈನಲ್ಲಿ ಒಬ್ಬರು ಪಾಟ್ರಿಯಾರ್ಕಿ ಸಮಸ್ಯೆ ಎದುರಿಸಬೇಕಾಗಿಲ್ಲ ಎಂದು ಅರ್ಜುನ್ ಹೇಳಿದ್ದಾರೆ.

ಇದು ಉಪ್ಪಿನಕಾಯಿಯನ್ನು ಬಡಿಸಲು ಮಹಿಳೆಗೆ ಕೇಳುವಷ್ಟು ಸರಳವಾಗಿದೆ. ನಾನು ಅದನ್ನು ಎಂದಿಗೂ ಮಾಡಬೇಕಾಗಿಲ್ಲ, ನನ್ನ ತಂಗಿ ಮನೆಯಲ್ಲಿ ಅದನ್ನು ಮಾಡಬೇಕಾಗಿಲ್ಲ, ಅಥವಾ ನಾನು ತಿನ್ನುವುದನ್ನು ಮುಗಿಸುವವರೆಗೂ ನನ್ನ ಸಂಗಾತಿ ಎಚ್ಚರವಾಗಿ ಕುಳಿತುಕೊಳ್ಳಬೇಕೆಂದು ನಾನು ಎಂದಿಗೂ ನಿರೀಕ್ಷಿಸುವುದಿಲ್ಲ ಅಥವಾ ಅವಳು ಏನನ್ನಾದರೂ ಸರಿಯಾಗಿ ಮಾಡಿದರೆ, ಅದಕ್ಕೆ ನಾನು ಮನ್ನಣೆ ಪಡೆಯುತ್ತೇನೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!