ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ

Published : Mar 14, 2024, 04:47 PM ISTUpdated : Mar 14, 2024, 04:50 PM IST
ಸ್ಕೂಲಿನಲ್ಲಿ ತುಂಬಾ ಕುಳ್ಳಗಿದ್ದೆ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ; ನಟ ವಿಜಯ್ ಸೇತುಪತಿ

ಸಾರಾಂಶ

ಸಿನಿಮಾಗೆ ಬಂದ ಬಳಿಕ ನಾನು ಕ್ಯಾಮೆರಾ ಮುಂದೆ ನಟನೆಯನ್ನೇನೋ ಮಾಡುತ್ತಿದ್ದೆ. ಆದರೆ, ಶೂಟಿಂಗ್‌ಗೆ ಬಂದಾಗ ಯಾರೇ ಹೊಸಬರು ಎದುರಾದರೆ ಮಾತನ್ನೇ ಆಡುತ್ತಿರಲಿಲ್ಲ. ನನಗೆ ಹೊಸಬರೊಂದಿಗೆ ಮಾತನಾಡಲು ಈಗಲೂ ಸಂಕೋಚವಿದೆ. 

ಪ್ಯಾನ್ ಇಂಡಿಯಾ ನಟ ವಿಜಯ್ ಸೇತುಪತಿ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟ ವಿಜಯ್ ಸೇತುಪತಿ 'ನಾನು ಚಿಕ್ಕವನಾಗಿದ್ದಾಗ ಸ್ಕೂಲಿನಲ್ಲಿ ಎಲ್ಲರಿಗಿಂತ ಕುಳ್ಳಗಿದ್ದೆ. ನಾನು ಅದೆಷ್ಟು ಸಂಕೋಚದ ಸ್ವಭಾವದವನಾಗಿದ್ದೆ ಎಂದರೆ, ನಾನು ಸ್ಕೂಲಿನ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ. ನಾನು ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ, ಬೆರೆಯುತ್ತಿರಲಿಲ್ಲ. ನನ್ನ ಹೈಟು ಕಡಿಮೆ ಇದೆ ಎನ್ನುವ ಕಾರಣಕ್ಕೆ ನಾನು ತುಂಬಾ ಮುಜುಗರ ಅನುಭವಿಸುತ್ತಿದ್ದೆ. 

ನನಗೆ ಕೇವಲ ಹೈಟ್ ಸಮಸ್ಯೆ ಮಾತ್ರ ಇರಲಿಲ್ಲ. ನನಗೆ ಭಾಷೆಯ ಸಮಸ್ಯೆ ಕೂಡ ಕಾಡುತ್ತಿತ್ತು. ಸ್ಟಡೀಸ್ ಮುಗಿದ ಮೇಲೆ ನಾನು ಅಕೌಂಟಂಟ್ ಕೆಲಸ ಕೂಡ ಮಾಡಿದ್ದೆ. ಪ್ರತಿದಿನವೂ ಹೊಸ ಹೊಸ ಬಯೊಡಾಟಾ ಮಾಡಿಕೊಂಡು ಹೋಗುತ್ತಿದ್ದೆ. ನನಗೆ ಕೆಲಸ ಸಿಗದಿರುವುದು 'ಸಿವಿ'ಯಿಂದ ಎಂದುಕೊಂಡಿದ್ದ ನಾನು ಪ್ರತಿ ಸಂದರ್ಶನಕ್ಕೆ ಹೋಗುವಾಗಲೂ ಹೊಸ ಸಿವಿಯನ್ನು ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಯಾವುದೂ ಕೆಲಸ ಮಾಡುತ್ತಿರಲಿಲ್ಲ. ಏಕೆಂದರೆ, ನನಗೆ ಚೆನ್ನಾಗಿ ಮಾತನಾಡಲು ಬರುತ್ತಿರಲಿಲ್ಲ. 

ಪುನೀತ್ ರಾಜ್‌ಕುಮಾರ್ 'ಜಾಕಿ' ಫೈಟ್‌ ಬಗ್ಗೆ ವಿವಾದ; ರವಿ ವರ್ಮ ವಿರುದ್ಧ ಪೊಲೀಸ್ ಕಂಪ್ಲೇಂಟ್

ಸಿನಿಮಾಗೆ ಬಂದ ಬಳಿಕ ನಾನು ಕ್ಯಾಮೆರಾ ಮುಂದೆ ನಟನೆಯನ್ನೇನೋ ಮಾಡುತ್ತಿದ್ದೆ. ಆದರೆ, ಶೂಟಿಂಗ್‌ಗೆ ಬಂದಾಗ ಯಾರೇ ಹೊಸಬರು ಎದುರಾದರೆ ಮಾತನ್ನೇ ಆಡುತ್ತಿರಲಿಲ್ಲ. ನನಗೆ ಹೊಸಬರೊಂದಿಗೆ ಮಾತನಾಡಲು ಈಗಲೂ ಸಂಕೋಚವಿದೆ. ಕ್ಯಾಮೆರಾ ಮುಂದೆ ಅದೇಕೋ ಗೊತ್ತಿಲ್ಲ, ನನಗೆ ಯಾವುದೇ ಭಯ, ಸಂಕೋಚ ಕಾಡುವುದಿಲ್ಲ. ಫಸ್ಟ್ ಆಫ್ ಆಲ್, ನಾನು ಕ್ಯಾಮೆರಾ ಮುಂದೆ ಬಂದಾಗ ನಾನೆ ಆಗಿರುವುದಿಲ್ಲ' ಎಂದಿದ್ದಾರೆ ನಟ ವಿಜಯ್ ಸೇತುಪತಿ. 

ಏರ್‌ಪೋರ್ಟಲ್ಲಿ ವೃದ್ಧರ ನೋಡಿದ್ರೆ ಶಂಕರ್‌ ಬ್ಯಾಗ್ ಕಿತ್ಕೊತಿದ್ದ: ಅರುಂಧತಿ ನಾಗ್

ನಾವೇನೇ ಮಾಡಲಿ, ಎಲ್ಲಿಗೇ ಹೋಗಲಿ, ನಮ್ಮ ತಪ್ಪುಗಳನ್ನು ಅರಿತುಕೊಂಡು ಸರಿಪಡಿಸಿಕೊಳ್ಳುತ್ತ ಹೋಗಬೇಕು. ಅದು ಯಾವುದೇ ಕ್ಷೇತ್ರವಿರಲಿ, ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಲೇ ಇದ್ದರೆ ನಮಗೆ ಯಶಸ್ಸು ಖಂಡಿತ ಸಿಗುವುದಿಲ್ಲ. ನಮ್ಮನ್ನು ನಾವು ಅರಿತುಕೊಂಡರೆ ಸಾಕು, ಮಿಕ್ಕಿದ್ದು ಎಲ್ಲವೂ ಸಮಯ ಬಂದಾಗ ಸಿಗುತ್ತದೆ' ಎಂದಿದ್ದಾರೆ ಇಂದು ಅಮೋಘ ಯಶಸ್ಸು ಪಡೆದಿರುವ ನಟ ವಿಜಯ್ ಸೇತುಪತಿ.

ಸಿಟಿಯಿಂದ ಹೊರಗೆ ಹೋಗಿ ಪಾನೀಪುರಿ ಮಾರುತ್ತೇನೆ ಅಂದ್ರು ರಶ್ಮಿಕಾ; ಫುಲ್ ಶಾಕ್ ಆಗಿದಾರೆ ಫ್ಯಾನ್ಸ್! 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!