Bigg Boss 15: ಸಾಯುತ್ತೀನಿ ಎಂದು ಚಾಕುವಿನಿಂದ ಕೈ ಕೊಯ್ದುಕೊಳ್ಳಲು ಯತ್ನಿಸಿದ ಅಫ್ಸಾನಾ?

Suvarna News   | Asianet News
Published : Nov 13, 2021, 03:09 PM IST
Bigg Boss 15: ಸಾಯುತ್ತೀನಿ ಎಂದು ಚಾಕುವಿನಿಂದ ಕೈ ಕೊಯ್ದುಕೊಳ್ಳಲು ಯತ್ನಿಸಿದ ಅಫ್ಸಾನಾ?

ಸಾರಾಂಶ

ಮೊದಲ ಬಾರಿ ಬಿಗ್ ಬಾಸ್ ಮನೆಯಲ್ಲಿ ಮಿತಿ ಮೀರಿದ ಮಾತುಕತೆ ಹಾಗೂ ಜಗಳ ನಡೆಯುತ್ತಿದೆ. ಹೊರ ಬರುವಂತೆ ಆದೇಶ ನೀಡಿದ್ದರೂ ಕೇಳದಂತಾಗಿದ್ದಾರೆ ಸ್ಪರ್ಧಿಗಳು....

ಹಿಂದಿ ಬಿಗ್ ಬಾಸ್ ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತದೆ. ಸೀಸನ್ 1ರಿಂದ 10ರ ವರೆಗೂ ಭಾಗವಹಿಸಿದ ಸ್ಪರ್ಧಿಗಳು ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡರು ಆದರೆ ಸೀಸನ್ 11 ರಿಂದ ಪ್ರತಿಯೊಬ್ಬರು ಲೈಮ್‌ ಲೈಟ್‌ನಲ್ಲಿರಬೇಕು ಎಂದು ಸದಾ ಜಗಳ, ಲವ್, ಕಿಸ್, ಅಫೇರ್‌ನಲ್ಲಿ ಮುಳುಗಿ ಹೋದರು. ಬಿಬಿ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಮೌನಿಗಳಾಗಿ ಅವಕಾಶ ವಂಚಿತರಾದರು.

ಸುಮಾರು ಒಂದು ತಿಂಗಳಿನಿಂದ ಪ್ರಸಾರವಾಗುತ್ತಿರುವ ಸೀಸನ್ 15 ಸ್ಪರ್ಧಿಗಳ ಮನಸ್ಥಿತಿ ಮಾತ್ರವಲ್ಲದೆ ವೀಕ್ಷಕರಿಗೆ ಹಿಂಸೆ ಆಗುತ್ತಿದೆ. ವೀಕೆಂಡ್‌ನಲ್ಲಿ ಸಲ್ಮಾನ್ ಖಾನ್ ಎಷ್ಟೇ ಬುದ್ಧಿ ಮಾತು ಹೇಳಿದರೂ ಕೇಳದೆ ಮಿತಿ ಮೀರಿದ ಮಾತುಗಳಿಂದ ಚಿಕ್ಕ ಮಕ್ಕಳು ಶೋ ನೋಡದಂತೆ ಮಾಡಿದ್ದಾರೆ. 

ಕೆಲವು ದಿನಗಳಿಂದ ಅಫ್ಸಾನಾ ಕೂಡ ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದಾರೆ. ವೈಲ್ಡ್‌ ಕಾರ್ಡ್‌ ಸ್ಪರ್ಧಿ ರಾಜೀವ್ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಆರೋಪ ಮಾಡಿದ್ದಾರೆ. ರಾಜೀವ್‌ರನ್ನು ವಾಶಿಂಗ್ ರೂಮ್‌ವರೆಗೂ ಹಿಂಬಾಲಿಸಿಕೊಂಡು ಮಾತನಾಡಿದ್ದಾರೆ.  ಅಫ್ಸಾನಾ ಮಾಡುತ್ತಿರುವುದು ತಪ್ಪು ಎಂದು ಜಯ್ ಭಾನುಶಾಲಿ ಮತ್ತು ಪ್ರತೀಕ್ ಸೆಹಜಪಾಲ್ ಹೇಳಿದರೂ ಕೇಳದೆ ಅಸಭ್ಯವಾಗಿ ಹಾಗೂ ಅಶ್ಲೀಲ ಮಾತುಗಳನ್ನಾಡಿದ್ದಾರೆ. 

ಮಗನ ವಿಭಿನ್ನ ಫೋಟೋಶೂಟ್‌ಗಳನ್ನು ಹಂಚಿಕೊಂಡ ನಟಿ ನಯನಾ ಪುಟ್ಟಸ್ವಾಮಿ!

ಅಫ್ಸಾನಾ ರಾಜೀವ್‌ ಮಾತ್ರವಲ್ಲದೆ ಪ್ರತಿಯೊಂದಕ್ಕೂ ಶಮಿತಾ ಶೆಟ್ಟಿ ಕಾರಣ ಎಂದು ಹೇಳುತ್ತಿದ್ದಾರೆ. ಅಫ್ಸಾನಾಗೆ ಹುಚ್ಚು ಹಿಡಿದಿದೆ ಆಕೆ ಫೇಕ್ ಆಗಿ ವರ್ತಿಸುತ್ತಿದ್ದಾಳೆ ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ ಅದಕ್ಕೂ ಅಫ್ಸಾನಾ ಜಗಳ ಆಡಿದ್ದಾರೆ. ಇವರಿಬ್ಬರ ನಡುವೆ ಮಾತು ಮಿತಿ ಮೀರಿದಾಗ ಅಫ್ಸಾನ ಚಾಕುವಿನಿಂದ ಕೈ ಕೂಯ್ದುಕೊಳ್ಳಲು ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ. ಬಿಬಿ ನೀಡಿರುವ ನೀರಿನ ಬಾಟಲಿ, ಕುರ್ಚಿ ಹಾಗೂ ಇನ್ನಿತರ ಪ್ರಾರ್ಪಟಿಗಳನ್ನು ಕೂಡ ಎಸೆದಿದ್ದಾರೆ. ಇದರಿಂದ ಮನೆಯಲ್ಲಿರುವ ಇತರ ಸ್ಪರ್ಧಿಗಳು ಹೆದರಿಕೊಂಡಿದ್ದಾರೆ.

Urfi Javed; ಬೋಲ್ಡ್ ಪೋಟೋ ಹಾಕಿ ಫೆವರೇಟ್ ಜಾಗ ಕೇಳಿದ ಬೆಡಗಿ

ಬಿಗ್ ಬಾಸ್ ಮನೆಯಲ್ಲಿ ನಾನಿರಬೇಕು ಇಲ್ಲದಿದ್ದರೆ ಶಮಿತಾ ಇರಬೇಕು. ನಾನು ಮನೆಯಿಂದ ಹೋದರೆ ನನ್ನ ಜೊತೆ ರಾಜೀವ್ ಕೂಡ ಬರಬೇಕು ಎಂದು ಅಫ್ಸಾನಾ ಬಿಗ್ ಬಾಸ್‌ಗೆ ಧಮ್ಕಿ ಹಾಕಿದ್ದಾರೆ. ಸ್ವತಃ ಬಿಗ್ ಬಾಸ್ ವೈದ್ಯರನ್ನು ಕರೆಸಿ ಅಫ್ಸಾನಾರನ್ನು ಮನೆಯಿಂದ ಹೊರ ಬರುವಂತೆ ಹೇಳಿದ್ದಾರೆ ಆದರೆ ಯಾವುದಕ್ಕೂ ತಲೆ ಕೊಡದೆ ವರ್ತಿಸುತ್ತಿರುವುದು ನಿಜಕ್ಕೂ ಎಲ್ಲರಿಗೂ ಶಾಕ್ ತಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?