ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್​! ಚಿನ್ನಾಭರಣ ವ್ಯಾಪಾರಿಗೆ 1.3 ಕೋಟಿ ರೂ. ಟೋಪಿ

Published : Sep 30, 2024, 08:55 PM IST
ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್​! ಚಿನ್ನಾಭರಣ ವ್ಯಾಪಾರಿಗೆ 1.3 ಕೋಟಿ ರೂ. ಟೋಪಿ

ಸಾರಾಂಶ

ನೋಟಿನಲ್ಲಿ ಗಾಂಧೀಜಿ ಬದಲು ಅನುಪಮ್ ಖೇರ್​ ಪ್ರಿಂಟ್​ ಮಾಡಿ ಚಿನ್ನಾಭರಣ ವ್ಯಾಪಾರಿಗೆ 1.3 ಕೋಟಿ ರೂ. ಟೋಪಿ ಹಾಕಲಾಗಿದೆ. ಏನಿದು ಘಟನೆ?  

ತಮಗೆ ಕೊಟ್ಟಿರುವ ನೋಟನ್ನು ಸರಿಯಾಗಿ ಪರೀಕ್ಷೆ  ಮಾಡದೆ ಚಿನ್ನಾಭರಣ ವ್ಯಾಪಾರಿಯೊಬ್ಬ 1.3 ಕೋಟಿ ರೂಪಾಯಿಗಳ ಮೋಸ ಹೋಗಿರುವ ಘಟನೆ ಗುಜರಾತಿನ ಅಹಮ್ಮದಾಬಾದ್​ನಲ್ಲಿ ನಡೆದಿದೆ. ನೋಟುಗಳ ಮೇಲೆ ಗಾಂಧಿ ಚಿತ್ರದ ಬದಲು ಬಾಲಿವುಡ್​ ನಟ ಅನುಪಮ್​ ಖೇರ್​ ಚಿತ್ರವಿದ್ದರೂ ಅದನ್ನು ವ್ಯಾಪಾರಿ ನೋಡದೇ ಮೋಸ ಹೋಗಿದ್ದಾರೆ. 500 ರೂಪಾಯಿ ಮುಖಬೆಲೆಯ  1.3 ಕೋಟಿ ಮೌಲ್ಯದ ನಕಲಿ ನೋಟುಗಳನ್ನು ನೀಡಿ ವಂಚಕರು ಪರಾರಿಯಾಗಿದ್ದಾರೆ! ಹೀಗೆ ಮೋಸ ಹೋದ ವ್ಯಾಪಾರಿಯ ಹೆಸರು  ಮಾಣಿಕ್ ಚೌಕ್‌ನ ಮೆಹುಲ್ ಠಕ್ಕರ್.   ಸ್ವತಃ ನಟ ಅನುಪಮ್‌ ಖೇರ್‌ ಅವರೇ ತಮ್ಮ ಟ್ವಿಟರ್‌ ಖಾತೆಯಲ್ಲಿ ತಮ್ಮ ಭಾವಚಿತ್ರವಿರುವ ನಕಲಿ ನೋಟುಗಳ ಸುದ್ದಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ಮಾಣಿಕ್​ ಅವರು,  ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ತಮಗೆ ಹೀಗೆ ಮೋಸ ಮಾಡಿದವರು ಯಾರು ಎನ್ನುವುದು ಅವರಿಗೆ ತಿಳಿದಿಲ್ಲ! 

ಅಷ್ಟಕ್ಕೂ ಆಗಿದ್ದೇನೆಂದರೆ, ವಂಚನರು ಮಾಣಿಕ್ ಅವರ ಬಳಿ ಬಂದು ಸುಮಾರು ಎರಡು ಕೆ.ಜಿ. ಬಂಗಾರದ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ತಮ್ಮ ಬಳಿ 1.3 ಕೋಟಿ ರೂಪಾಯಿ ನಗದು ಇದೆ ಎಂದು ಹೇಳಿ ಬ್ಯಾಗ್​ ಕೊಟ್ಟರು. ಆದರೆ ಮೇಲ್ಭಾಗದಲ್ಲಿ ಅಸಲಿ ನೋಟುಗಳು ಇದ್ದವು. ಅಷ್ಟನ್ನೇ ಮಾಣಿಕ್​ ನೋಡಿದ್ದಾರೆ. ಒಳಗಡೆ ಖೋಟಾ ನೋಟ್​ ಇರಬಹುದು ಎನ್ನುವ ಸಂಶಯವೂ ಅವರಿಗೆ ಬರಲಿಲ್ಲ! ಅವರಿಂದ ಚಿನ್ನ ಪಡೆದು, ದುಡ್ಡು ಕೊಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಹಣ ಸರಿಯಾಗಿ ಇದೆಯೇ ಇಲ್ಲವೇ ಎಂದು  ಯಂತ್ರದ ಸಹಾಯದಿಂದ ಎಣಿಸಲು ಹೋದಾಗ ಗಾಂಧಿ ಬದಲು ಅನುಪಮ್​  ಖೇರ್​ ಇರುವುದು ತಿಳಿದಿದೆ.  ಕೂಡಲೇ ದೂರು ದಾಖಲು ಮಾಡಿದ್ದಾರೆ. 

ದೇವಲೋಕದ ಅಪ್ಸರೆ ನನ್ನನ್ನು ಬಿಟ್ಟು ಮುದುಕನನ್ನು ಮದ್ವೆಯಾದ್ಲು! ರಾಮ್‌ ಗೋಪಾಲ್‌ ವರ್ಮಾ ಮಾತು ಮತ್ತೆ ಮುನ್ನೆಲೆಗೆ

  15 ವರ್ಷಗಳಿಂದ ಲಕ್ಷ್ಮಿ ಜ್ಯುವೆಲರ್ಸ್‌ನಲ್ಲಿ ವ್ಯವಹಾರ ನಡೆಸುತ್ತಿರುವ ಮಾಣಿಕ್​ ಅವರು ಈಗ ಎರಡೂವರೆ ಕೆ.ಜಿ. ಚಿನ್ನಾಭರಣ ಕಳೆದುಕೊಂಡಿದ್ದಾರೆ. ಈ ಘಟನೆ ಇದೇ  24 ರಂದು ನಡೆದಿದೆ. ಖರೀದಿದಾರರು ತಮಗೆ ತುರ್ತಾಗಿ ಚಿನ್ನದ ಅಗತ್ಯವಿದೆ ಎಂದು  ಠಕ್ಕರ್‌ಗೆ ತಿಳಿಸಿದ್ದಾರೆ. ಆದರೆ RTGS (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್) ನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅವರು ನಗದು ರೂಪದಲ್ಲಿ ಭದ್ರತಾ ಠೇವಣಿ ನೀಡುವುದಾಗಿ ಹೇಳಿದ್ದು,  ಉಳಿದ ಮೊತ್ತವನ್ನು ನಂತರ ವರ್ಗಾಯಿಸುವಾಗಿ ತಿಳಿಸಿದ್ದಾರೆ.  ನವರಂಗಪುರ ಪ್ರದೇಶದ ಅಂಗಡಿಯಾ ಎಂಬ ಸಂಸ್ಥೆಯಲ್ಲಿ ಚಿನ್ನವನ್ನು ವಿನಿಮಯ ಮಾಡಿಕೊಳ್ಳುವುದಾಗಿ ಖದೀಮರು ಹೇಳಿದ್ದರು. ಅದನ್ನು ಠಕ್ಕರ್​ ನಂಬಿದ್ದರು.  ಚಿನ್ನವನ್ನು ತಲುಪಿಸಲು ಠಕ್ಕರ್ ತಮ್ಮ ಉದ್ಯೋಗಿಯೊಬ್ಬರನ್ನು ಕಳುಹಿಸಿದರು, ಅಲ್ಲಿ ಮೂವರು ವ್ಯಕ್ತಿಗಳು ಇದ್ದರು, ಅವರಲ್ಲಿ ಒಬ್ಬರು ಕರೆನ್ಸಿ ಎಣಿಕೆ ಯಂತ್ರವನ್ನು ಬಳಸುತ್ತಿದ್ದರು.

ಚಿನ್ನವನ್ನು ಹಸ್ತಾಂತರಿಸಿದ ನಂತರ, ಠಕ್ಕರ್ ಅವರ ಉದ್ಯೋಗಿ ರೂ 1.3 ಕೋಟಿ ಭದ್ರತಾ ಠೇವಣಿಯನ್ನು ಪರಿಶೀಲಿಸಿದಾಗ ನೋಟುಗಳು ನಕಲಿ ಎಂದು ಗೊತ್ತಾಗಿದೆ.  ಮಹಾತ್ಮಾ ಗಾಂಧಿಯವರ ಚಿತ್ರದ ಬದಲಿಗೆ, ನೋಟುಗಳಲ್ಲಿ ನಟ ಅನುಪಮ್ ಖೇರ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬದಲಿಗೆ "ಸ್ಟಾರ್ ಬ್ಯಾಂಕ್ ಆಫ್ ಇಂಡಿಯಾ" ಎಂಬ ಸ್ಟಾಂಪ್ ಒಳಗೊಂಡಿರುವುದನ್ನು ನೋಡಿದ್ದಾರೆ! ಮೋಸ ಹೋಗಿರುವ ಕುರಿತು ಗೊತ್ತಾದಾಗ ಅಂಗಡಿಯಾ ಸಂಸ್ಥೆಗೆ ಹೋಗಿ ವಿಚಾರಿಸೋಣ ಎಂದರೆ ಅದು ಕೂಡ ನಕಲಿ ಎಂದು ತಿಳಿದುಬಂದಿತು! ತಮ್ಮನ್ನು ಸಂಪರ್ಕಿಸಿದ ವ್ಯಕ್ತಿಗೆ ಕರೆ ಮಾಡಿದಾಗ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಮತ್ತು ವಂಚಕರನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ.  "500 ರೂ ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ???? ಏನು ಬೇಕಾದರೂ ಆಗಬಹುದು ಎಂದು ಅನುಪಮ್​ ಖೇರ್​ ಹೇಳಿದ್ದಾರೆ. 

ಡ್ರೆಸ್​ ಸರಿಮಾಡಿಕೊಳ್ಳೊಷ್ಟ್ರಲ್ಲಿ ಆಗಬಾರದ್ದು ಆಗೋಯ್ತು! ಎಲ್ಲಾ ಆದ್ಮೇಲೆ ಇನ್ನೇನು ಮಾಡೋದು ಕೇಳ್ತಿದ್ದಾರೆ ಟ್ರೋಲಿಗರು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!