ರಾಣಾ ದಗ್ಗುಬಾಟಿ ವಿರುದ್ಧ ದೂರು ದಾಖಲು; ಆಸ್ತಿಗಾಗಿ ಜೀವ ಬೆದರಿಕೆ ಹಾಕಿದ್ದು ನಿಜವೇ?

By Vaishnavi ChandrashekarFirst Published Feb 11, 2023, 10:29 AM IST
Highlights

ನಟ ರಾಣಾ ಮತ್ತು ತಂದೆ ಸರೇಶ್ ವಿರುದ್ಧ ದೂರು ದಾಖಲು ಮಾಡಿದ ಪ್ರಮೋದ್ ಕುಮಾರ್. ಹೈದರಾಬಾದ್‌ನಲ್ಲಿರುವ ಫಿಲ್ಮ್‌ ನಗರದಲ್ಲಿ ಆಸ್ತಿ ಜಗಳ....

ಟಾಲಿವುಡ್ ಸೂಪರ್ ಸ್ಟಾರ್‌ ಹಾಗೂ ಟಾಲ್‌ ಸ್ಟಾರ್ ರಾಣಾ ದಗ್ಗುಬಾಟಿ ಹಾಗೂ ತಂದೆ ಸುರೇಶ್ ಬಾಬು ವಿರುದ್ಧ ದೂರು ದಾಖಲಾಗಿದೆ. ಹೈದರಾಬಾದ್‌ನ ಫಿಲ್ಮ್ ನಗರದಲ್ಲಿರುವ ಜಾಗವೊಂದಕ್ಕೆ ರಾಣಾ ಆಸೆ ಪಟ್ಟಿದ್ದು ಮಾಲೀಕರಿಗೆ ಜೀವನ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಪೊಲೀಸರು ದೂರು ಸ್ವೀಕರಿಸದ ಕಾರಣ ಕೋರ್ಟ್‌ ಸಹಾಯ ಪಡೆದು ದೂರು ನೀಡಲಾಗಿದೆ. ಈ ಘಟನೆ ಬಗ್ಗೆ ಸಂಪೂರ್ಣ ವಿವರಲ್ಲ ಇಲ್ಲವಾದರೂ ದೂರು ದಾಖಲಾಗಿರುವುದು ಸತ್ಯ ಎನ್ನಲಾಗಿದೆ. 

ಹೌದು! ತೆಲುಗು ನಟ ರಾಣಾ ದಗ್ಗುಬಾಟಿ ಮತ್ತು ಅವರ ತಂದೆ ದಗ್ಗುಬಾಟಿ ಸುರೇಶ್ ಬಾಬು ವಿರುದ್ಧ ಜಾಗವೊಂದರ ವಿಚಾರಕ್ಕೆ ಜಗಳ ಸೃಷ್ಠಿಯಾಗಿದೆ. ಕೋರ್ಟ್‌ನಿಂದ ಬಂದಿರುವ ಆರ್ಡ್‌ ಪ್ರಕಾರ ದಗ್ಗುಬಾಟಿ ಕುಟುಂಬದ ವಿರುದ್ಧ ದೂರು ದಾಖಲಿಸಲಾಗಿದೆ. ಪ್ರಮೋದ್ ಕುಮಾರ್ ಎನ್ನುವ ವ್ಯಕ್ತಿ ರಾಣಾ ದಗ್ಗುಬಾಟಿ ಮತ್ತು ಕೆಲವರ ವಿರುದ್ಧ ದುರು ನೀಡಿದ್ದರು ಆದರೆ ಈ ಕೇಸ್‌ನ ಪೊಲೀಸರು ಸ್ವೀಕರಿಸಿರಲಿಲ್ಲ.ಹೀಗಾಗಿ ಕೋರ್ಟ್‌ ಮೆಟ್ಟಿಲೇರಿ ನೋಟಿಸ್‌ ತಂದು ದೂರು ನೀಡಿದ್ದರು. ರಾಣಾ ಜೊತೆಗಿರುವ ರೈಡರ್‌ಗಳು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಆಸ್ತಿ ಇರುವುದು ಹೈದರಾಬಾದ್‌ನ ಜನಪ್ರಿಯ ಫಿಲ್ಮ್‌ ನಗರದಲ್ಲಿ. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ರಾಣಾ ದಗ್ಗುಬಾಟಿ ಮತ್ತು ಮಿಹೀಕಾ ಬಜಾಜ್ ದಂಪತಿಗಳು!

ಈ ದೂರಿನ ಬಗ್ಗೆ ರಾಣಾ ಅಥವಾ ಸುರೇಶ್ ಪ್ರತಿಕ್ರಿಯೆ ನೀಡಿಲ್ಲ. 

ನಟನೆ ಜೊತೆ ನಿರ್ಮಾಣ ಮಾಡುತ್ತಿರುವ ರಾಣಾ ತಂದೆ ಹಾದಿಯಲ್ಲಿ ನಡೆಯುತ್ತಿದ್ದಾರೆ. ಸುರೇಶ್ ಬಾಬು ಸಿನಿಮಾ ನಿರ್ಮಾಣ ಮಾಡುತ್ತಾರೆ, ಸ್ಟುಡಿಯೋ ಹೊಂದಿದ್ದಾರೆ ಹಾಗೂ ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡುತ್ತಾರೆ. ರಾಣಾ ಸುರೇಶ್ ಪ್ರೋಡಕ್ಷನ್‌ ನಡೆಸುತ್ತಿದ್ದಾರೆ. ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಆಂಧ್ರಪ್ರದೇಶ ರಾಜ್ಯ ನಾಗಿರೆಡ್ಡಿ ಚಕ್ರವಾಣಿ ರಾಷ್ಟ್ರೀಯ ಪ್ರಶಸ್ತಿಯನ್ನು 2012ರಲ್ಲಿ ಪಡೆದರು. ಖ್ಯಾತ ನಿರ್ಮಾಪಕ ಡಿ ರಾಮನಾಯ್ಡು ಅವರ ಹಿರಿಯ ಪುತ್ರನಾಗಿರುವ ಸುರೇಶ್‌ ಲಕ್ಷ್ಮಿ ಎಂಬುವವರನ್ನು ಮದುವೆ ಮಾಡಿಕೊಂಡರು. ರಾಣಾ, ಮಾಳವಿಕಾ ಮತ್ತು ಅಭಿರಾಮ್‌ ಹೆಸರಿನ ಮಕ್ಕಳಿದ್ದಾರೆ. ಸುರೇಶ್‌ ಕಿರಿಯ ಸಹೋದರನೇ ನಟ ವೆಂಕಟೇಶ್.

ಈ ಹಿಂದೆಯೂ ಗರಂ:

ಕೆಲವು ದಿನಗಳ ಹಿಂದೆ ವಿಮಾನ ನಿಲ್ದಾನದಲ್ಲಿ ರಾಣಾ ಬ್ಯಾಗ್‌ ಕಾಣೆಯಾಗಿತ್ತು ಎಂದು ಟ್ವಿಟ್ ಮಾಡಿದ್ದರು. ಇತ್ತೀಚೆಗೆ ‘ಇಂಡಿಗೋ’  ವಿಮಾನದಲ್ಲಿ ಪ್ರಯಾಣ ಮಾಡಿದ ರಾಣಾಗೆ ಕೆಟ್ಟ ಅನುಭವ ಆಗಿದೆ. ಪ್ರಯಾಣಿಸುವಾಗ ರಾಣಾ ದಗ್ಗುಬಾಟಿ ಅವರ ಲಗೇಜ್​ ಮಾಯವಾಗಿದೆ. ಈವರೆಗೂ ಅದು ಪತ್ತೆ ಆಗಿಲ್ಲ. ಇದರಿಂದ ಕೋಪಕೊಂಡ ಅವರು ನೇರವಾಗಿ ಟ್ವೀಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ತನ್ನ ಟ್ವೀಟ್ ಅನ್ನು ಇಂಡಿಗೋ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಇಂಡಿಗೋ ಕಂಪನಿಗೆ ಮುಜುಗರ ಆಗಿದ್ದು ಕ್ಷಮೆ ಕೇಳಿದೆ. 

Puneeth Rajkumar ರಾಣಾ ದಗ್ಗುಬಾಟಿ ಆಫೀಸ್‌ನಲ್ಲಿ ಅಪ್ಪು ಪುತ್ಥಳಿ!

ರಾಣಾ ದಗ್ಗುಬಾಟಿ ಟ್ವೀಟ್ ವೈರಲ್ ಆಗುತ್ತಿದ್ದಂತೆ ಇಂಡಿಗೋ ಏರ್‌ಲೈನ್ ಈ ವಿಷಯದ ಬಗ್ಗೆ ಕ್ಷಮೆಯಾಚಿಸಿದೆ.  'ಅನಾನುಕಾಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಿಮ್ಮ ಲಗೇಜ್ ಅನ್ನು ಆದಷ್ಟು ಬೇಗ ನಿಮಗೆ ತಲುಪಿಸಲು ನಮ್ಮ ತಂಡ ಸಕ್ರಿಯವಾಗಿದೆ ಕಾರ್ಯನಿರ್ವಹಿಸುತ್ತಿದೆ' ಎಂದು ಪ್ರತಿಕ್ರಿಯೆ ನೀಡಿದರು. ಇಂಡಿಯೋ ಪ್ರತಿಕ್ರಿಯೆ ಬಳಿಕ ರಾಣಾ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. ಆದರೆ ರಾಣಾ ಟ್ವೀಟ್ ಆಗಲೇ ವೈರಲ್ ಆಗಿತ್ತು. ಕೆಲವರು ರಾಣಾ ಪರ ಬ್ಯಾಟ್ ಬಿಸಿದರು. ಇನ್ನೂ ಕೆಲವರು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಇಂಡಿಯೋ ತಕ್ಷಣ ಪ್ರತಿಕ್ರಿಯೆ ನೀಡಿದೆ ಜನ ಸಾಮಾನ್ಯರ ಕಥೆ ಏನು ಪ್ರಶ್ನೆ ಮಾಡಿದ್ದಾರೆ. 

click me!