'ತಲೈವಿ' ಕ್ಲೈಮ್ಯಾಕ್ಸ್‌ಗೆ ಸಂಕಷ್ಟ; ಕ್ಷಣ ಕ್ಷಣದ ಅಪ್ಡೇಟ್ ಕೊಟ್ಟ ಕಂಗನಾ!

Suvarna News   | Asianet News
Published : Oct 13, 2020, 12:50 PM IST
'ತಲೈವಿ' ಕ್ಲೈಮ್ಯಾಕ್ಸ್‌ಗೆ ಸಂಕಷ್ಟ; ಕ್ಷಣ ಕ್ಷಣದ ಅಪ್ಡೇಟ್ ಕೊಟ್ಟ ಕಂಗನಾ!

ಸಾರಾಂಶ

ವಾದ ವಿವಾದಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕಂಗನಾ ಚಿತ್ರೀಕರಣಕ್ಕೆ ಮರಳಿದ್ದಾರೆ. ಚಿತ್ರೀಕರಣ ಮಾಡುತ್ತಿರುವ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಕ್ಷಣಕ್ಷಣದ ಅಪ್ಡೇಟ್ ನೀಡುತ್ತಿದ್ದಾರೆ.

ಬಾಲಿವುಡ್‌ ಬೋಲ್ಡ್‌ ಲೇಡಿ ಕಂಗನಾ ರಣಾವತ್ ತಮಿಳುನಾಡು ಐರನ್ ಲೇಡಿ ಜಯಲಲಿತಾ ಬಯೋಪಿಕ್‌ ಚಿತ್ರೀಕರಣವನ್ನು ಸುಮಾರು 7 ತಿಂಗಳ ನಂತರ ಪ್ರಾರಂಭಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬ್ಲಾಕ್‌ ಆಂಡ್ ವೈಟ್ ಲುಕ್ ಹಾಗೂ ನಿರ್ದೇಶಕರ ಜೊತೆಗಿರುವ ರೆಟ್ರೋ ಲುಕ್ ಫೋಟೋ ವೈರಲ್ ಆಗುತ್ತಿದೆ.

ಬಾಲಿವುಡ್ ನಟಿ ಕಂಗನಾಗೆ ಮತ್ತೊಂದು ಸಂಕಷ್ಟ : ದಾಖಲಾಯ್ತು FIR

ಚಿತ್ರೀಕರಣ ಪ್ರಾರಂಭ:
'ಜಯ ಮಾ ಅವರ ಆಶೀರ್ವಾದದಿಂದ ತಲೈವಿ- ರೆವಲ್ಯೂಷನ್ ಲೀಡರ್‌ ಚಿತ್ರದ ಒಂದು ಶೂಟಿಂಗ್ ಶೆಡ್ಯೂಲ್ ಮುಗಿದಿದೆ. ಕೊರೋನಾದಿಂದ ಚಿತ್ರೀಕರಣದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ ಆ್ಯಕ್ಷನ್‌ ಹಾಗೂ  ಕಟ್‌ ಮುಂಚೆ ನಡೆಯುವುದು ಯಾವುದೂ ಬದಲಾಗಿಲ್ಲ. ಥ್ಯಾಂಕ್ಯೂ  ಟೀಂ' ಎಂದು ಬರೆದುಕೊಂಡಿದ್ದರು.

 

ಇನ್ನು ಕೆಲವು ದಿನಗಳ ಹಿಂದೆ ನಿರ್ದೇಶಕ ವಿಜಯ್ ಎಎಲ್‌ ಜೊತೆ ಸನ್ನಿವೇಶವೊಂದನ್ನು ಚರ್ಚಿಸುತ್ತಿರುವ ಫೋಟೋ ಹಂಚಿಕೊಂಡಿದ್ದರು. ಗುಂಗರು ಕೂದಲು, ರೆಟ್ರೋ ಲುಕ್‌ ಸೀರೆಯಲ್ಲಿ ಕಂಗನಾಳನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ' ಗುಡ್ ಮಾರ್ನಿಂಗ್ ಫ್ರೆಂಡ್ಸ್. ಬೆಳ್ಳಂ ಬೆಳಗ್ಗೆ ನಮ್ಮ ಟ್ಯಾಲೆಂಟೆಂಡ್ ನಿರ್ದೇಶಕ ವಿಜಯ್ ಜೀ ಜೊತೆ. ನಮ್ಮ ಶೂಟಿಂಗ್ ಸೆಟ್ ಅದ್ಭುತವಾಗಿತ್ತು'ಎಂದು ಟ್ಟೀಟ್ ಮಾಡಿದ್ದರು.

ಸೌದೆ ಒಲೆ ಉರಿಸಿ ಜೋಳದ ರೊಟ್ಟಿ ಮಾಡ್ತಾರೆ ಕಂಗನಾ ಅಮ್ಮ..! 

ಕ್ಲೈಮ್ಯಾಕ್ಸ್‌ಗೆ ಸಂಕಷ್ಟ:
ತಲೈವಿ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಸುಮಾರು 350 ಜನರು ಇರಬೇಕಾಗುತ್ತದೆ. ಆದರೆ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಸಾಮಾಜಿಕ ಅಂತರ ಕಾರಣ. ಸದ್ಯಕ್ಕೆ ಅಷ್ಟು ಜನರನ್ನು ಸೇರಿಲಾಗುವುದಿಲ್ಲ. ಚಿತ್ರೀಕರಣ ಮಾಡುವುದು ಅಸಾಧ್ಯವಾಗಿದೆ. ಮುಂಬರುವ ದಿನಗಳಲ್ಲಿ ಚಿತ್ರೀಕರಣದ ಬಗ್ಗೆ ಚರ್ಚಿಸ ಬೇಕು' ಎಂದು ಹೇಳಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!