ಕೊರೋನಾ ಗೆದ್ದ ಅಮಿತಾಬ್ ಕ್ಷಮೆ ಕೇಳಿದ್ದು ಯಾರಲ್ಲಿ? ದೊಡ್ಡವರ ದೊಡ್ಡತನ

Published : Aug 06, 2020, 09:45 PM ISTUpdated : Aug 06, 2020, 09:47 PM IST
ಕೊರೋನಾ ಗೆದ್ದ ಅಮಿತಾಬ್ ಕ್ಷಮೆ ಕೇಳಿದ್ದು ಯಾರಲ್ಲಿ? ದೊಡ್ಡವರ ದೊಡ್ಡತನ

ಸಾರಾಂಶ

ಕ್ಷಮೆ ಕೇಳಿದ ಕೊರೋನಾ ಗೆದ್ದ ಬಿಗ್ ಬಿ/ ಕವನದ ಸಾಲುಗಳು ಬದಲಾಗಿದ್ದವು/ ಪ್ರಸೂನ್ ಜೋಶಿ ಅವರ ಕ್ಷಮೆಯಾಚಿಸಿದ ಅಮಿತಾಬ್ ಬಚ್ಚನ್

ಮುಂಬೈ(ಆ. 06)   ಕೊರೋನಾ ಗೆದ್ದು ಬಂದ ಅಮಿತಾಬ್ ಬಚ್ಚನ್ ಇದೀಗ ಕ್ಷಮೆ ಕೇಳಿದ್ದಾರೆ. ಅದಕ್ಕೆ ಕಾರಣವೂ ಇದೆ. ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ  ತಂದೆ ಕವಿ ಹರಿವಂಶರಾಯ್ ಬಚ್ಚನ್ ಅವರ ಕವಿತೆ ಸಾಲುಗಳನ್ನು ಶೇರ್ ಮಾಡಿಕೊಂಡಿದ್ದರು.

'ಅಕೆಲ್ ಪನ್ ಕಾ ಬಾಲ್ ಪೆಹಚಾನ್' ಎಂಬ ಕವನದ ಸಾಲುಗಳನ್ನು ಬುಧವಾರ ರಾತ್ರಿ ಬಿಗ್ ಬಿ ಶೇರ್ ಮಾಡಿಕೊಂಡಿದ್ದರು. ಇದು ನಮ್ಮ ತಂದೆ ಹರಿವಂಶರಾಯ್ ಬಚ್ಚನ್ ಸಾಲುಗಳು ಎಂದು ಬರೆದುಕೊಂಡಿದ್ದರು. ಆದರೆ ಗುರುವಾರ ಬೆಳಗ್ಗೆ ಆದ ತಪ್ಪು ತಿದ್ದಿಕೊಂಡು ಕ್ಷಮೆ ಕೇಳಿದ್ದಾರೆ.

ಬಿಗ್‌ ಬಿಯ ಭವ್ಯ ಬಂಗಲೆ 'ಜಲ್ಸಾ'ದ ಪುಟ್ಟ ಝಲಕ್‌

ನಾನು ಕವಿ, ಲೇಖಕ ಪ್ರಸೂನ್ ಜೋಶಿ ಅವರ ಕ್ಷಮೆ ಕೇಳುತ್ತೇನೆ. ನಿನ್ನೆ ಹಂಚಿಕೊಂಡ ಸಾಲುಗಳು ಅವರದ್ದು, ನನ್ನ ತಂದೆಯದ್ದಲ್ಲ ಎಂದು ಬಿಗ್ ಬಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಕವಿ, ಸಾಹಿತಿ, ಗೀತರಚನೆಕಾರರಾಗಿ ಪ್ರಸೂನ್ ಜೋಶಿ ಗುರುತಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಕೊರೋನಾ ಗುಣಮುಖರಾಗಿ ಮನೆಗೆ ತೆರಳಿದ್ದರೆ ಪುತ್ರ ಅಭಿಷೇಕ್ ಬಚ್ಚನ್ ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?