ಮುಂಬೈನಲ್ಲಿ 75 ಕೋಟಿ ಬೆಲೆಯ ಐಶಾರಾಮಿ ಮನೆ ಖರೀದಿಸಿದ ನಟ ಜಾನ್ ಅಬ್ರಹಾಂ, ನೋಂದಣಿ ಮೊತ್ತವೇ ಕೋಟಿಗಟ್ಟಲೆ!

Published : Jan 01, 2024, 07:09 PM ISTUpdated : Jan 01, 2024, 07:12 PM IST
ಮುಂಬೈನಲ್ಲಿ  75 ಕೋಟಿ ಬೆಲೆಯ ಐಶಾರಾಮಿ ಮನೆ ಖರೀದಿಸಿದ ನಟ ಜಾನ್ ಅಬ್ರಹಾಂ, ನೋಂದಣಿ ಮೊತ್ತವೇ ಕೋಟಿಗಟ್ಟಲೆ!

ಸಾರಾಂಶ

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ ದುಬಾರಿ ಮೊತ್ತದ ಬಂಗಲೆಯನ್ನು ಖರೀದಿಸಿದ್ದಾರೆ. ನೋಂದಣಿಗೆ ಬರೋಬ್ಬರಿ ರೂ 4.24 ಕೋಟಿ ಪಾವತಿಸಿದ್ದಾರೆ.

ಬಾಲಿವುಡ್ ನಟ ಜಾನ್ ಅಬ್ರಹಾಂ ಅವರು ಮುಂಬೈನ ಖಾರ್ ನೆರೆಹೊರೆಯಲ್ಲಿ ದುಬಾರಿ ಮೊತ್ತದ ಬಂಗಲೆಯನ್ನು ಖರೀದಿಸಿದ್ದಾರೆ.  ಬರೋಬ್ಬರಿ 70.83 ಕೋಟಿ ರೂ ಪಾವತಿಸಿದ್ದು, ಇದರಲ್ಲಿ 5,416 ಚದರ ಅಡಿ ಬಂಗಲೆ ಸೇರಿ ಒಟ್ಟು 7,722 ಚದರ ಅಡಿ ಭೂಮಿ ಹೊಂದಿದೆ ಎಂದು IndexTap.com ಬಂಗಲೆಗಾಗಿ ಆಸ್ತಿ ನೋಂದಣಿ ದಾಖಲೆಗಳಿಂದ ತಿಳಿದುಬಂದಿದೆ.  ಈ ಬಂಗಲೆಯು ಮುಂಬೈನ ಅತ್ಯಂತ ಜನನಿಬಿಡ ಶಾಪಿಂಗ್ ಮಾರ್ಗಗಳಲ್ಲಿ ಒಂದಾದ ಖಾರ್‌ನ ಲಿಂಕಿಂಗ್ ರಸ್ತೆಯಲ್ಲಿದೆ ಮತ್ತು ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಇದರ ಅಕ್ಕಪಕ್ಕದಲ್ಲಿದೆ.

ಅಬ್ರಹಾಂ ಅವರು ಡಿಸೆಂಬರ್ 27, 2023 ರಂದು ರೂ 4.24 ಕೋಟಿ ನೋಂದಣಿಗೆ ಪಾವತಿಸಿದ ನಂತರ ಬಂಗಲೆ ಒಪ್ಪಂದವನ್ನು ನೋಂದಾಯಿಸಿದ್ದಾರೆ. ಹೀಗಾಗಿ ಒಟ್ಟು 75 ಕೋಟಿ ಖರ್ಚು ಮಾಡಿದ್ದಾರೆ. ಸ್ಥಳಾವಕಾಶದ ಕೊರತೆಯಿಂದಾಗಿ, ಮುಂಬೈನಲ್ಲಿರುವ ಆಧುನಿಕ ಬಾಲಿವುಡ್ ತಾರೆಯರು ಪ್ರಾಥಮಿಕವಾಗಿ ಬಹುಮಹಡಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ.

2024ಕ್ಕೆ ನಾನು ಅಮ್ಮ, ಬೇಬಿ ಬಂಪ್‌ ಫೋಟೋ ಹಾಕಿ ಸಿಹಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಕೂಡ ಮುಂಬೈನಲ್ಲಿ ಕೆಲವು ಬಂಗಲೆಗಳನ್ನು ಹೊಂದಿದ್ದಾರೆ. ಬಚ್ಚನ್ ಅವರು ಇತ್ತೀಚೆಗೆ ತಮ್ಮ ಮಗಳು ಶ್ವೇತಾ ನಂದಾ ಅವರಿಗೆ ಮುಂಬೈ ಬಂಗಲೆ ಪ್ರತೀಕ್ಷಾವನ್ನು ನೀಡಿದಾಗ ಸುದ್ದಿ ಮಾಡಿದರು. ಈ ಆಸ್ತಿಯು ಮುಂಬೈನ ಜುಹುದಲ್ಲಿ 890.47 ಚದರ ಮೀ ಮತ್ತು 674 ಚದರ ಮೀ ಗಾತ್ರದ ಎರಡು ಪ್ಲಾಟ್‌ಗಳಲ್ಲಿ ನೆಲೆಗೊಂಡಿದೆ. 

ನವೆಂಬರ್ 8 ರಂದು, ಆಸ್ತಿಯನ್ನು ಉಡುಗೊರೆ ರೀತಿಯಲ್ಲಿ ಕೊಟ್ಟಿರುವ ಪತ್ರಕ್ಕೆ ಸಹಿ ಮಾಡಲಾಗಿದೆ. ಗಿಫ್ಟ್ ಡೀಡ್ ದಾಖಲೆಗಳಲ್ಲಿ ವಹಿವಾಟಿಗೆ 50.65 ಲಕ್ಷ ರೂಪಾಯಿ ಸ್ಟ್ಯಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂದು ಸೂಚಿಸಲಾಗಿದೆ.

ಬರೋಬ್ಬರಿ 5259 ಕೋಟಿ ರೂ ಸಂಪತ್ತು ಇರೋ ಬಾಲಿವುಡ್‌ನ ಶ್ರೀಮಂತ ಮನೆತನ, ಬಚ್ಚನ್‌, ಶಾರುಖ್‌, ಕಪೂರ್‌ ಕುಟುಂಬವಲ್ಲ!

ಅಬ್ರಹಾಂ ಬಂಗಲೆಯನ್ನು ಖರೀದಿಸಿದ ವಸತಿ ಪ್ರದೇಶದಲ್ಲಿ ಪ್ರತಿ ಚದರ ಅಡಿಗೆ 40,000 ರಿಂದ 90,000 ರೂ. ಪ್ರಾಪರ್ಟಿ ಗ್ರೇಡ್ ಮತ್ತು ಪ್ರದೇಶವನ್ನು ಆಧರಿಸಿ ದರವನ್ನು ನಿಗದಿಪಡಿಸಲಾಗಿದೆ ಎಂದು ಸ್ಥಳೀಯ ದಲ್ಲಾಳಿಗಳು ಹೇಳಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!