ಡಿ-ಅಡಿಕ್ಷನ್ ಸೆಂಟರ್‌ಗೆ ಆರ್ಯನ್ ? ಶಾರೂಖ್ ಖಾನ್‌ಗೆ ಕೇಂದ್ರ ಸಚಿವರ ಕಿವಿಮಾತು

Suvarna News   | Asianet News
Published : Oct 25, 2021, 10:47 AM ISTUpdated : Oct 25, 2021, 07:05 PM IST
ಡಿ-ಅಡಿಕ್ಷನ್ ಸೆಂಟರ್‌ಗೆ ಆರ್ಯನ್ ? ಶಾರೂಖ್ ಖಾನ್‌ಗೆ ಕೇಂದ್ರ ಸಚಿವರ ಕಿವಿಮಾತು

ಸಾರಾಂಶ

ಶಾರೂಖ್ ಮಗ ಜೈಲಿನಲ್ಲಿ, ಕಿಂಗ್ ಖಾನ್‌ಗೆ ಕೇಂದ್ರ ಸಚಿವರ ಕಿವಿ ಮಾತೇನು ? ಬಾಲಿವುಡ್ ನಟನಿಗೆ ಸಲಹೆ ಕೊಟ್ಟಿದ್ಯಾಕೆ ಸಚಿವರು ?

ಸಮಾಜಿಕ ನ್ಯಾಯ ಹಾಗೂ ಸಬಲೀಕರಣದ ಕೇಂದ್ರದ ರಾಜ್ಯ ಸಚಿವ ರಾಮದಾಸ್ ಅಥವಾಲೆ ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್‌ಗೆ (Shah Rukh Khan) ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಮುಂಬೈ - ಗೋವಾಗೆ ಸಾಗುತ್ತಿದ್ದ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ(Drugs Party) ಮೇಲೆ ಅ.25ರಂದು ದಾಳಿ ಮಾಡಿದ್ದ ಎನ್‌ಸಿಬಿ (NCB)ಆರ್ಯನ್ ಖಾನ್ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಜನರನ್ನು ಬಂಧಿಸಿತ್ತು.

ಈ ಸಂಬಂಧ ಸಚಿವರು ಶಾರೂಖ್ ಖಾನ್‌ಗೆ ಕಿವಿಮಾತು ಹೇಳಿದ್ದು ಮಗನನ್ನು ಪುನರ್ವಸತಿ ಕೇಂದ್ರಕ್ಕೆ (Rehabilitation centre) ದಾಖಲಿಸುವಂತೆ ಹೇಳಿದ್ದಾರೆ.

ವಾಂಖೇಡೆಯಿಂದ ಭಾರಿ ಹಣಕ್ಕೆ ಬೇಡಿಕೆ: ಶಾರುಖ್‌ ಪುತ್ರನ ಕೇಸ್‌ ಮುಚ್ಚಲು 25 ಕೋಟಿ ಡೀಲ್‌?

ಚಿಕ್ಕ ವಯಸ್ಸಿನಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಆರ್ಯನ್‌ ಖಾನ್‌ಗೆ ಭವಿಷ್ಯವಿದೆ. ಸಚಿವಾಲಯದ ಸಹಯೋಗದಲ್ಲಿರುವ ಡಿ-ಅಡಿಕ್ಷನ್ ಪುನರ್ವಸತಿ ಕೇಂದ್ರಕ್ಕೆ ಆರ್ಯನ್‌ನನ್ನು ಸೇರಿಸಲು ನಾನು ಶಾರೂಖ್ ಖಾನ್‌ಗೆ ಸೂಚಿಸುತ್ತೇನೆ. 

ಆರ್ಯನ್ ಖಾನ್‌ನನ್ನು ಜೈಲಿನಲ್ಲಿಡುವ ಬದಲು ಒಂದು ಅಥವಾ ಎರಡು ತಿಂಗಳು ಪುನರ್ವಸತಿ ಕೇಂದ್ರದಲ್ಲಿಡಲಿ. ದೇಶಾದ್ಯಂತ ಅತಂಹ ಹಲವು ಸೆಂಟರ್‌ಗಳಿವೆ. ಅವನು ಡ್ರಗ್ಸ್ ಅಡಿಕ್ಷನ್‌ನಿಂದ ಗುಣಮುಖನಾಗಿ ಹೊರಬರುತ್ತಾನೆ ಎಂದಿದ್ದಾರೆ.

ಆರೋಪಿಗಳನ್ನು ಜೈಲಿಗೆ ಕಳುಹಿಸದಂತೆ ಹೊಸ ಕಾನೂನು ರೂಪಿಸಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಕ್ರೂಸ್ ಡ್ರಗ್ಸ್ ಪ್ರಕರಣದ ತನಿಖೆಗಾಗಿ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ಅವರು ಶ್ಲಾಘಿಸಿದ್ದಾರೆ ಕೋರ್ಟ್ ಕನಿಷ್ಠ ಐದರಿಂದ ಆರು ಬಾರಿ ಜಾಮೀನು ಅರ್ಜಿಯನ್ನು ಸ್ವೀಕರಿಸಿದೆ ಆದರೆ ತಿರಸ್ಕರಿಸಲಾಗಿದೆ. ಎನ್‌ಸಿಬಿಗೆ ಸಂಪೂರ್ಣ ಅನುಮೋದನೆ ಇದೆ ಎಂದು ಇದು ತೋರಿಸುತ್ತದೆ. ಆತನ ಬಂಧನ ಕಾನೂನುಬಾಹಿರ ಎಂದು ಹೇಳುವುದು ತಪ್ಪು ಅವರು ಹೇಳಿದ್ದಾರೆ.

ಫ್ಯಾಮಿಲಿ ಗರ್ಲ್ ಸಮಂತಾ ರುತ್ ಪ್ರಭು ಗಂಗಾ ತೀರಕ್ಕೆ ಹೋಗಿದ್ದೇಕೆ..?

ಗೋವಾಕ್ಕೆ ಹೋಗುತ್ತಿದ್ದ ಕ್ರೂಸ್ ಹಡಗಿನಲ್ಲಿ ಸಮೀರ್ ವಾಂಖೇಡೆ ನೇತೃತ್ವದ ತಂಡ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದಾಗ ದಾಳಿ ಮಾಡಿ ಅಕ್ಟೋಬರ್ 3 ರಂದು ಆರ್ಯನ್ ಖಾನ್ ಮತ್ತು ಇತರರನ್ನು ಬಂಧಿಸಿತು. ಈ ಪ್ರಕರಣದಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ 20 ಮಂದಿಯನ್ನು ಬಂಧಿಸಲಾಗಿದೆ.

ಮಾಲ್ಡೀವ್ಸ್ ಮತ್ತು ದುಬೈನಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳಿಂದ ಎನ್‌ಸಿಬಿ ಅಧಿಕಾರಿಯು ಹಣ ವಸೂಲಿ ಮಾಡಿದ ವಾಂಖೇಡೆ ವಿರುದ್ಧದ ಆರೋಪಗಳ ಬಗ್ಗೆ ಸಚಿವ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಟೀಕಿಸಿದ್ದಾರೆ. ಮಲಿಕ್ ಅವರು ಸಮೀರ್ ವಾಂಖೆಡೆ ಅವರ ಚಾರಿತ್ರ್ಯ ಹತ್ಯೆಗೆ ಯತ್ನಿಸುತ್ತಿದ್ದಾರೆ. ಯಾರೂ ಸುಳ್ಳು ಆರೋಪ ಮಾಡದಂತೆ ನವಾಬ್ ಮಲಿಕ್ ಅವರನ್ನು ವಿನಂತಿಸುತ್ತೇನೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?