ರಾಮಮಂದಿರ ನಿರ್ಮಿಸಲಿದ್ದಾರೆ ಕಂಗನಾ ರಾಣಾವತ್

Published : Nov 25, 2019, 12:49 PM ISTUpdated : Nov 25, 2019, 04:50 PM IST
ರಾಮಮಂದಿರ ನಿರ್ಮಿಸಲಿದ್ದಾರೆ ಕಂಗನಾ ರಾಣಾವತ್

ಸಾರಾಂಶ

ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವುದರಲ್ಲಿ, ನಿರ್ಮಾಣ ಮಾಡುವುದರಲ್ಲಿ ಫೇಮಸ್ ಆಗಿರುವ ಕಂಗನಾ ರಾಣಾವತ್ ಇದೀಗ ರಾಮಮಂದಿರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಏನಪ್ಪಾ ಇದು ಹೊಸ ಸುದ್ದಿ? ಅಂತೀರಾ? ಇಲ್ಲಿದೆ ನೋಡಿ. 

ಭಾರೀ ಚರ್ಚೆಗೊಳಗಾಗಿದ್ದ, ಅತ್ಯಂತ ಹಳೆಯ ವಿವಾದ ಅಯೋಧ್ಯಾ ರಾಮಮಂದಿರ ತಾರ್ಕಿಕ ಅಂತ್ಯ ಕಂಡಿದೆ. ಅಯೋಧ್ಯೆ ಕಡೆಗೂ ರಾಮನ ಪಾಲಾಗಿದೆ.  ರಾಮಮಂದಿರ ವಿಚಾರವೊಂದನ್ನು ಇಟ್ಟುಕೊಂಡು ಸಿನಿಮಾವೊಂದು ಬರಲಿದೆ ಎನ್ನಲಾಗಿದೆ. 

'ತಲೈವಿ' ಲುಕ್‌ ರಿವೀಲ್; ಕಂಗನಾ ವಿರುದ್ಧ ನೆಟ್ಟಿಗರು ಆಕ್ರೋಶ!

ಎಂದಿಗಿಂತ ಸ್ವಲ್ಪ ವಿಭಿನ್ನ ರೀತಿಯಲ್ಲಿ ಆಲೋಚಿಸುವ, ಐತಿಹಾಸಿಕ ಹಿಟ್ ಚಿತ್ರಗಳನ್ನು ನೀಡುವ ಕಂಗನಾ ರಾಣಾವತ್ 'ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ' ನಿರ್ದೇಶಿಸಿ ಸಕ್ಸಸ್ ಕಂಡಿದ್ದರು. ಈಗ ರಾಮಮಂದಿರ ನಿರ್ದೇಶನಕ್ಕೆ ಮುಂದಾಗಿದ್ದಾರೆ. ರಾಮಜನ್ಮಭೂಮಿ- ಬಾಬ್ರಿ ಮಸೀದಿ ವಿವಾದ ಕೇಸ್ ಇಟ್ಟುಕೊಂಡು ' ಅಪರಾಜಿತ ಅಯೋಧ್ಯಾ' ಎನ್ನುವ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ನವೆಂಬರ್ 25ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

 

ಕಳೆದ ಒಂದು ಶತಕಗಳಿಂದ ರಾಮಮಂದಿರ ಬೂದಿ ಮುಚ್ಚಿದ ಕೆಂಡದಂತಿತ್ತು. ರಾಮನ ಜನ್ಮ, ತ್ಯಾಗಕ್ಕೆ ಸಾಕ್ಷಿಯಾಗಿದ್ದ ಈ ಭೂಮಿ ಬಗ್ಗೆ ಕೇಳುತ್ತಲೇ ಬೆಳೆದವು. ಇದೀಗ ರಾಮಮಂದಿರ ತಾರ್ಕಿಕ ಅಂತ್ಯ ಕಂಡಿದೆ' ಎಂದು ಕಂಗನಾ ಹೇಳಿದ್ದಾರೆ. 

ಪ್ರಪೋಸ್ ರಿಜೆಕ್ಟ್; ಕಂಗನಾ ಅಕ್ಕ ಮೇಲೆ ಆ್ಯಸಿಡ್ ಆಟ್ಯಾಕ್!

ಕೆವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆಯಲಿದ್ದಾರೆ. ಕಂಗನಾ ಈ ಚಿತ್ರದಲ್ಲಿ ನಟಿಸುತ್ತಾರಾ, ಇಲ್ವಾ ಎಂಬುದು ಇನ್ನೂ ಪಕ್ಕಾ ಆಗಿಲ್ಲ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರೈಲಿನಿಂದ ಕಾಲು ಹೊರಗಿಟ್ಟರೆ ಪಕ್ಕದ ಟ್ರೈನ್ ತಾಗುತ್ತಾ? 'ಪೆದ್ದಿ' ಸಿನಿಮಾದಲ್ಲಿ ತೋರಿಸಿದ್ದು ನಿಜವೇ?
'ಜಾನ್ವಿ ಕಪೂರ್' ಬಿಟ್ಟು, ಚಿತ್ರರಂಗದ ಪರ ಬ್ಯಾಟಿಂಗ್ ಮಾಡಿದ ನಿತ್ಯಾ ಮೆನನ್! ಬಾಲಿವುಡ್‌ಗೆ ಕೆನ್ನೆಗೆ ಬಾರಿಸಿದ ನಟಿ