ಅಸ್ಸಾಂ, ಬಿಹಾರ್‌ ನೆರೆ ಪರಿಹಾರಕ್ಕೆ ಅಕ್ಷಯ್ ಕುಮಾರ್ ತಲಾ 1 ಕೋಟಿ ನೆರವು

Suvarna News   | Asianet News
Published : Aug 14, 2020, 03:32 PM ISTUpdated : Aug 14, 2020, 03:44 PM IST
ಅಸ್ಸಾಂ, ಬಿಹಾರ್‌ ನೆರೆ ಪರಿಹಾರಕ್ಕೆ ಅಕ್ಷಯ್ ಕುಮಾರ್ ತಲಾ 1 ಕೋಟಿ ನೆರವು

ಸಾರಾಂಶ

ದೇಶದಲ್ಲಿ ಯಾವುದೇ ರಾಜ್ಯ, ಯಾವುದೇ ಸ್ಥಳದಲ್ಲಿ ಏನೇ ಕಷ್ಟ ಬಂದಾಗ ತಕ್ಷಣ ಸ್ಪಂದಿಸುವುದು ಬಾಲಿವುಡ್ ನಟ ಅಕ್ಷಯ್ ಕುಮಾರ್. ಇದೀಗ ಪ್ರವಾಹದಿಂದ ತತ್ತರಿಸಿದ ಬಿಹಾರ ಹಾಗೂ ಅಸ್ಸಾಂಗೆ ತಲಾ ಒಂದು ಕೋಟಿ  ನೆರವು ನೀಡಿದ್ದಾರೆ.

ದೇಶದಲ್ಲಿ ಯಾವುದೇ ರಾಜ್ಯ, ಯಾವುದೇ ಸ್ಥಳದಲ್ಲಿ ಏನೇ ಕಷ್ಟ ಬಂದಾಗ ತಕ್ಷಣ ಸ್ಪಂದಿಸುವುದು ಬಾಲಿವುಡ್ ನಟ ಅಕ್ಷಯ್ ಕುಮಾರ್. ಇದೀಗ ಪ್ರವಾಹದಿಂದ ತತ್ತರಿಸಿದ ಬಿಹಾರ ಹಾಗೂ ಅಸ್ಸಾಂಗೆ ತಲಾ ಒಂದು ಕೋಟಿ  ನೆರವು ನೀಡಿದ್ದಾರೆ.

ಬಿಹಾರ ಹಾಗೂ ಅಸ್ಸಾಂನ ಸಿಎಂ ಪರಿಹಾರ ನಿಧಿಗೆ ನಟ ಅಕ್ಷಯ್ ತಲಾ 1 ಕೋಟಿ ರೂಪಾಯಿ ನೆರವು ನೀಡಿ ಮಾದರಿಯಾಗಿದ್ದಾರೆ. ಬಿಹಾರ ಹಾಗೂ ಅಸ್ಸಾಂನ ಸಿಎಂಗಳ ಜೊತೆ ಮಾತನಾಡಿದ ಅಕ್ಷಯ್ ಕುಮಾರ್ ಪ್ರಕೃತಿ ವಿಕೋಪದಿಂದ ತತ್ತರಿಸಿದ ರಾಜ್ಯಗಳಿಗೆ ನೆರವು ನೀಡುವುದಾಗಿ ಹೇಳಿದ್ದಾರೆ.

ಭಾರತೀಯನೆಂದು ಸಾಬೀತುಪಡಿಸಲು ಹೀಗ್ಮಾಡ್ತಾರಂತೆ ಅಕ್ಷಯ್ ಕುಮಾರ್!

ಕೊರೋನಾ ಭಾರತಕ್ಕೆ ಕಾಲಿಟ್ಟಾಗ ಅಕ್ಷಯ್ ಪಿಎಂ ಪರಿಹಾರ ನಿಧಿಗೆ 25 ಕೋಟಿ, ಮುಂಬೈ ಪೊಲೀಸ್ ಫೌಂಡೇಷನ್‌ಗೆ 2 ಕೋಟಿ ಹಾಗೂ ಮಾಸ್ಕ್, ಸ್ಯಾನಿಟೈಸರ್‌ನಂತಹ ಅಗತ್ಯ ವಸ್ತುಗಳಿಗಾಗಿ ಬೃಹತ್ ಮುಂಬೈ ಮಹಾನಗರಪಾಲಿಕೆಗೆ 3 ಕೋಟಿ ಎಊಪಾಯಿ ನೆರವು ನೀಡಿದ್ದರು.

ಕಳೆದ ವರ್ಷ ಮೇನಲ್ಲಿ ಒಡಿಶಾದಲ್ಲಿ ಸೈಕ್ಲೋನ್ ಫನಿಯಿಂದ ಜನರು ತತ್ತರಿಸಿದಾಗ 1 ಕೋಟಿ ರೂಪಾಯಿ ನೆರವು ನೀಡಿದ್ದರು. ನಟ ಅಕ್ಷಯ್ ಇತ್ತೀಚೆಷ್ಟೇ ಬೆಲ್ ಬಾಟಂ ಸಿನಿಮಾ ಶೂಟಿಂಗ್ ಭಾಗವಾಗಿ ಯುಕೆಗೆ ತೆರಳಿದ್ದಾರೆ. ಜೊತೆಗೆ ಪತ್ನಿ ಟ್ವಿಂಕಲ್ ಖನ್ನಾ, ಮಗ ಆರವ್, ಮಗಳು ನಿತಾರಾ ಇದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?