ಸುಶಾಂತ್ ಸಿಂಗ್‌ ಹಾಗೆ ಚಿತ್ರರಂಗ ತೊರೆಯಲು ನಿರ್ಧರಿಸಿದ್ರಂತೆ ಖ್ಯಾತ ನಟಿ ಯಾಮಿ ಗೌತಮ್

By Shruthi KrishnaFirst Published Feb 17, 2023, 2:52 PM IST
Highlights

ಬಾಲಿವುಡ್ ಖ್ಯಾತ ನಟಿ ಯಾಮಿ ಗೌತಮ್ ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಬಾಲಿವುಡ್ ಖ್ಯಾತ ನಟಿಯರಲ್ಲಿ ಯಾಮಿ ಗೌತಮ್ ಕೂಡ ಒಬ್ಬರು. ಕಿರುತೆರೆಯಿಂದ ಬಣ್ಣದ ಲೋಕದ ಪಯಣ ಪ್ರಾಂಭಿಸಿದ ಯಾಮಿ ಬಳಿಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಸಕ್ಸಸ್ ಕಂಡರು. 2008ರಲ್ಲಿ ಪ್ರಸಾರವಾಗುತ್ತಿದ್ದ ಚಾಂದ್ ಕೇ ಪಾರ್ ಚಲೋ ಧಾರಾವಾಹಿ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದರು. ಆದೇ ವರ್ಷ ಉಲ್ಲಾಸ ಉತ್ಸಾಹ ಕನ್ನಡ ಸಿನಿಮಾ ಮೂಲಕ ಬೆಳ್ಳೆ ಪರದೆ ಮೇಲೆ ಮಿಂಚಿದರು. ಪಂಜಾಬಿ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಅನೇಕ ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದಾರೆ ನಟಿ ಯಾಮಿ. 

ಕಿರುತೆರೆಯಲ್ಲಿ ಪ್ರಸಿದ್ಧಗಳಿಸಿದ ನಂತರ ಸಿನಿಮಾರಂಗದಲ್ಲಿ ಸಕ್ರೀಯರಾದ ಯಾಮಿ ಸ್ಟಾರ್ ಆಗಿದ್ದರೂ ಸರಳತೆ ಮೂಲಕವೇ ಹೆಚ್ಚು ಗಮನಸೆಳೆದ ನಟಿ. ಹೆಚ್ಚು ಪ್ರಚಾರ ಬಯಸದ ಯಾಮಿ ತನ್ನ ಪ್ರತಿಭೆ ಮೂಲಕವೇ ಅಭಿಮಾನಿಗಳ ಹೃದಯ ಗೆದಿದ್ದಾರೆ. ಸದ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯಾಮಿ, ಸಿನಿಮಾರಂಗ ತೊರೆಯಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಸಿನಿಮಾರಂಗದಿಂದ ಹೊರಬಂದು ಕೃಷಿ ಮಾಡಬೇಕೆಂದು ಬಯಸಿದ್ದರಂತೆ. ಪಾರ್ಟಿ, ಹಾಗೂ ಈವೆಂಟ್ ಗಳಿಗೆ ಹಾಜರಾಗುವಂತೆ ಹೇಗೆ ಒತ್ತಡ ಹೇರುತ್ತಾರೆ, ಅಗೌರವ ತೋರುತ್ತಾರೆ, ನಿರಂತರ ತೆಗಳುವ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

'ಈ ನಗರ ನಿಮ್ಮನ್ನು ಪರೀಕ್ಷಿಸುತ್ತದೆ ಮತ್ತು ನಿಮ್ಮನ್ನು ಬ್ರೇಕ್ ಮಾಡುತ್ತದೆ. ನನ್ನ ಜೀವನದಲ್ಲೂ ಅಂಥ ಸಮಯ ಬಂದಿತ್ತು. ಹಿಮಾಚಲ ಪ್ರದೇಶದಲ್ಲಿ ನನಗೆ ಸ್ವಲ್ಪ ಭೂಮಿ ಇದೆ, ಮತ್ತು ಈ ಸಿನಿಮಾ ಕೆಲಸ ಮಾಡದಿದ್ದರೆ ನಾನು ಕೃಷಿಯನ್ನು ತೆಗೆದುಕೊಳ್ಳುತ್ತೇನೆ ಎಂದು ನಾನು ಭಾವಿಸಿದ್ದೆ' ಎಂದು ಹೇಳಿದ್ದಾರೆ. 

ಆಯುಷ್ಮಾನ್ ಖುರಾನಾ ಜೊತೆ ನಟಿಸಿದ್ದ ವಿಕ್ಕಿ ಡೋನರ್ ಸಿನಿಮಾದ ಯಶಸ್ಸಿನ ನಂತರ ಯಾಮಿ ಅನೇಕ ಏರಿಳಿತಗಳನ್ನು ಕಂಡರು. ಆ ನಂತರ ಸಿನಿಮಾರಂಗ ತೊರೆಯುವ ನಿರ್ಧಾರ ಮಾಡಿದ್ದೆ ಎಂದು ಹೇಳಿದ್ದಾರೆ. 

The Kashmir Files; ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್

2018-2019ರಲ್ಲಿ ಆಯುಷ್ಮಾನ್ ಖುರಾನಾ ಅವರ ಎದುರು ನಟಿಸಿದ ವಿಕ್ಕಿ ಡೋನರ್ ಚಿತ್ರದ ಯಶಸ್ಸಿನ ನಂತರ ಅನೇಕ ತಗ್ಗುಗಳನ್ನು ಕಂಡ ನಂತರ ತನಗೆ ಅಂತಹ ಆಲೋಚನೆಗಳು ಬಂದವು ಎಂದು ಯಾಮಿ ಹೇಳಿದರು. ಆದಾಗ್ಯೂ, ನಟನ ಸಾವಿನ ನಂತರ ರಿಯಾ ಚಕ್ರವರ್ತಿ ವಿರುದ್ಧದ ಎಫ್‌ಐಆರ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ತಮ್ಮ ಮಗ ಬಾಲಿವುಡ್ ತೊರೆದು ಸಾವಯವ ಕೃಷಿಗೆ ತನ್ನ ಆಪ್ತ ಸ್ನೇಹಿತರೊಬ್ಬರೊಂದಿಗೆ ಸಾಹಸ ಮಾಡಲು ಬಯಸಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಅಂದಹಾಗೆ ನಟ ಸುಶಾಂತ್ ಸಿಂಗ್ ಕೂಡ ಸಿನಿಮಾರಂಗ ಬಿಟ್ಟು ಕೃಷಿ ಮಾಡಲು ಬಯಸಿದ್ದರು ಎಂದು ಅವರ ತಂದೆ ಬಹಿರಂಗ ಪಡಿಸಿದ್ದರು. 

ಯಾಮಿ ತನ್ನ ತಾಯಿ ಬಳಿಯೂ ಹೇಳಿದ್ದರಂತೆ.  'ಈ ಚಿತ್ರ  ವರ್ಕ್ ಆಗದಿದ್ದರೇ ನಾನು ನನ್ನ ತಾಯಿಗೆ ಹೇಳಿದ್ದೆ, ನಾನು ವಾಪಾಸ್ ಬರ್ತೀನಿ ಅಂತ. ನಾನು ನಟನೆ ಮತ್ತು ಪಾತ್ರಗಳಲ್ಲಿ ಸಂತೋಷವಾಗಿದ್ದೇನೆ, ಆದರೆ ಪ್ರಕ್ರಿಯೆಯು ನಿಮ್ಮನ್ನು ಪರೀಕ್ಷಿಸುತ್ತದೆ' ಎಂದು ಹೇಳಿದರು. 

ತನ್ನನ್ನು ತಾನು ಮಾರ್ಕೆಟ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಯಾಮಿ ಬಹಿರಂಗ ಪಡಿಸಿದ್ದಾರೆ. 'ನೀನು ಒಳ್ಳೆಯ ನಟ ಎಂದು ಜನರಿಗೆ ಏಕೆ ಹೇಳಬೇಕು? ಆದರೆ ಬಹಳ ಸಮಯದಿಂದ ನನಗೆ ನೆಟ್‌ವರ್ಕ್ ಮಾಡಿ ಮತ್ತು ಪಾರ್ಟಿಗಳಳ್ಗೆ ಹೇಳಲಾಯಿತು. ಇದು ಕೆಟ್ಟದ್ದಲ್ಲ, ಆದರೆ ನನ್ನಂತವರಿಗೆ ಇಷ್ಟವಾಗುವುದಿಲ್ಲ. ಕೇವಲ ಕೆಲಸವನ್ನು ಪಡೆಯಲು ನಾನು ಯಾಕೆ ಹೋಗಬೇಕು? ನಿಮಗೆ ಇಷ್ಟವಾದರೆ, ಹೋಗಿ. ನಾನು ನಿರ್ಣಯಿಸುತ್ತಿಲ್ಲ' ಎಂದು ಹೇಳಿದರು. 

'ನಾನು ಯಾರನ್ನೂ ಜಡ್ಜ್ ಮಾಡಲ್ಲ. ಅದು ಒತ್ತಡವಾಗಿತ್ತು-ಕೆಲಸ ಮಾಡುವ ಒತ್ತಡವಲ್ಲ' ಅಂತಹ ಪಾರ್ಟಿಗಳು ಮತ್ತು ಸಮಾರಂಭಗಳಲ್ಲಿ ನೆಟ್‌ವರ್ಕಿಂಗ್‌ನ ಪ್ರಯೋಜನಗಳನ್ನು ಒಪ್ಪಿಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ. ಯಾಮಿ ಗೌತಮ್ ಕೊನೆಯದಾಗಿ ದಸ್ವಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಓ ಮೈ ಗಾಡ್ -2 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  
 

click me!