ಮಾಜಿ ಪ್ರಿಯತಮನಿಂದ ಚಿತ್ರಹಿಂಸೆ, ಹಲ್ಲೆ; ಫೋಟೋ ಶೇರ್ ಮಾಡಿ ಭಯಾನಕ ಘಟನೆ ಬಿಚ್ಚಟ್ಟ ನಟಿ ಅನಿಕಾ

By Shruthi KrishnaFirst Published Mar 6, 2023, 5:52 PM IST
Highlights

ಮಾಜಿ ಪ್ರಿಯತಮ ಚಿತ್ರಹಿಂಸೆ ಮಾಡಿ ತುಳಿದು ಥಳಿಸಿದ ಫೋಟೋ ಶೇರ್ ಮಾಡಿ ನಟಿ ಅನಿಕಾ ಭಯಾನಕ ಘಟನೆ ಬಗ್ಗೆ ಬಹಿರಂಗ ಪಡಿಸಿದ್ದಾರೆ.

ತಮಿಳು ನಟಿ ಅನಿಕಾ ವಿಜಯ್ ವಿಕ್ರಮನ್ ಅವರನ್ನು ಮಾಜಿ ಪ್ರಿಯಕರ ಚಿತ್ರಹಿಂಸೆ ನೀಡಿ, ಹಲ್ಲೆ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರಿಯತಮ ನೀಡುತ್ತಿದ್ದ ಚಿತ್ರಹಿಂಸೆಯ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಅನಿಕಾ ಫೋಟೋಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಮಾಜಿ ಪ್ರಿಯತಮ ನಟಿ ಅನಿಕರನ್ನು ಅತ್ಯಂತ ಕ್ರೂರವಾಗಿ ಥಳಿಸಿದ್ದಾನೆ ಎಂದು ಆರೋಪ ಮಾಡಿ ಫೋಟೋ ಸಮೇತಾ ಬಿಚ್ಚಿಟ್ಟಿದ್ದಾರೆ. ನಟಿ ಅನಿಕಾ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಭೀಕರವಾಗಿರುವ ಫೋಟೋಗಳು ನೋಡಿ ಅಭಿಮಾನಿಗಳು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಇದಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ. 

ಫೋಟೋಗಳನ್ನು ಶೇರ್ ಮಾಡಿ ನಟಿ ಅನಿಕಾ ಈ ಕ್ರೂರ ಕೃತ್ಯದಿಂದ ಆದಷ್ಟು ಬೇಗ ಹೊರಬಂದು ತನ್ನ ಬದುಕನ್ನು ಮರಳಿ ಪಡೆದುಕೊಳ್ಳುತ್ತೇನೆ, ನಟನಾ ವೃತ್ತಿಗೆ ವಾಪಾಸ್ ಆಗುವುದಾಗಿ ಹೇಳಿದ್ದಾರೆ. ಅನಿಕಾ ಪೋಸ್ಟ್ ಮಾಡಿರುವ ಫೋಟೋಗಳಲ್ಲಿ ಆಕೆಯ ಮುಖದ ಮೇಲೆ ಮಾರಣಾಂತಿಕ ಗಾಯಗಳಾಗಿವೆ. ಕಣ್ಣಿನ ಸುತ್ತಾ ರಕ್ತ ಹೆಪ್ಪುಗಟ್ಟಿದೆ. ಮುಖ, ಎದೆ, ಕೈ ಮೇಲೂ ಗಾಯಗಳಾಗಿವೆ. 

Latest Videos

ಈ ಕ್ರೂರ ಘಟನೆ ಬಳಿಕ ನಟಿ ಅನಿಕಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ಆದರೆ ಮಾಜಿ ಪ್ರಿಯಕರ ತಲೆಮರಿಸಿಕೊಂಡಿದ್ದು, ತನಗೆ ಮತ್ತು ಕುಟುಂಬಕ್ಕೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾನೆ, ಮಾನವೀಯತೆಗಿಂತ ಹಣ ದೊಡ್ಡದು ಎಂದು ಕೆಲವರು ತನಗೆ ಕಲಿಸಿದ್ದಾರೆ ಎನ್ನುತ್ತಿದ್ದಾನೆ ಎಂದು  ನಟಿ ಆರೋಪಿಸಿದ್ದಾರೆ. 

ಅನಿಕಾ ಶೇರ್ ಮಾಡಿರುವ ದೀರ್ಘ ಪೋಸ್ಟ್ 

'ನಾನು ಅನೂಪ್ ಪಿಳ್ಳೈ ಎಂಬ ವ್ಯಕ್ತಿಯನ್ನು ಬಹಳ ದಿನಗಳಿಂದ ಪ್ರೀತಿಸುತ್ತಿದ್ದೆ. ಕಳೆದ ಕೆಲವು ವರ್ಷಗಳಿಂದ ಆತ ನನಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿದ್ದ. ಅವನಂತ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ಇಷ್ಟೆಲ್ಲಾ ನೋವುಂಟು ಮಾಡಿದರೂ ಬೆದರಿಕೆ ಹಾಕುತ್ತಿದ್ದಾನೆ. ಅವನು ನನಗೆ ಈ ರೀತಿ ಮಾಡುತ್ತಾನೆ ಎಂದು ನಾನು ಕನಸು ಕಂಡಿರಲಿಲ್ಲ. ನನಗೆ ಎರಡನೇ ಬಾರಿ ಥಳಿಸಿದಾಗ ನಾನು ಬೆಂಗಳೂರು ಪೊಲೀಸರಿಗೆ ದೂರು ನೀಡಿದೆ. ಮೊದಲ ಬಾರಿಗೆ ಹಲ್ಲೆ ಮಾಡಿದಾಗ ನಾನು ಚೆನ್ನೈನಲ್ಲಿದ್ದೆ. ಆ ನಂತರ ಅವರು ನನ್ನ ಕಾಲಿಗೆ ಬಿದ್ದು ಅತ್ತು ಬೇಡಿಕೊಂಡ. ಆಗ ಅವನನ್ನು ನಂಬಿ ನಾನು ಮೂರ್ಖನಾಗಿದ್ದೆ. ಎರಡನೇ ಬಾರಿಗೆ ಕ್ರೂರವಾಗಿ ಚಿತ್ರಹಿಂಸೆ ನೀಡಲಾಯಿತು. ಈ ಘಟನೆಯ ಬಗ್ಗೆ ದೂರು ನೀಡಿ ಪೊಲೀಸರನ್ನು ಸಂಪರ್ಕಿಸಿದರೆ ಪೊಲೀಸರು ನನಗೆ ಅವನನ್ನು ಬಿಟ್ಟು ಹೋಗು ಎನ್ನುತ್ತಾರೆ. ಹಾಗಾಗಿಯೇ ಅವನು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಯಾಕೆಂದರೆ ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ' ಎಂದು ಬೆಂಗಳೂರು ಪೊಲೀಸರ ವಿರುದ್ದವೂ ಬೇಸರ ಹೊರಹಾಕಿದ್ದಾರೆ. 

ಬ್ಲಾಕ್‌ಮೇಲ್ ಮಾಡ್ತಿದ್ದಾಳೆ, ತಿಂಗಳಿಗೆ 10 ಲಕ್ಷ ಕೊಡ್ತೀನಿ; ಪತ್ನಿ ವಿರುದ್ಧ ನವಾಜುದ್ದೀನ್ ಸಿದ್ದಿಕಿ ಕಿಡಿ

ಟಕಳೆದ ಕೆಲವು ವರ್ಷಗಳಿಂದ ನಾನು ಹಲವು ಬಾರಿ ಮೋಸ ಹೋಗಿದ್ದೇನೆ. ನಾನು ಅದನ್ನು ಅರ್ಥಮಾಡಿಕೊಂಡಿದ್ದರಿಂದ ನಾನು ಅವನನ್ನು ಬಿಡಲು ನಿರ್ಧರಿಸಿದೆ. ಆದರೆ ಅವನು ನನ್ನನ್ನು ಬಿಡಲು ಸಿದ್ಧನಿರಲಿಲ್ಲ. ನಾವು ಮೊದಲು ಸ್ನೇಹಿತರಾಗಿದ್ದೆವು ಎಂಬುದರಲ್ಲಿ ಸಂದೇಹವಿಲ್ಲ. ಆದರೆ ನಂತರ ಅವರು ನನ್ನ ಫೋನ್ ಅನ್ನು ಮುರಿದುಹಾಕಿದ. ಆದ್ದರಿಂದ ನಾನು ಚಿತ್ರೀಕರಣಕ್ಕೆ ಹೋಗಲು ಸಹ ಸಾಧ್ಯವಾಗಲಿಲ್ಲ. ನನ್ನ ಫೋನ್ ನಾಶಮಾಡುವ ಮೊದಲು ನನ್ನ WhatsApp ಲ್ಯಾಪ್‌ಟಾಪ್‌ಗೆ ಸಂಪರ್ಕಗೊಂಡಿತ್ತು. ಆಗ ಅವನು ನನಗೆ ತಿಳಿಯದಂತೆ ನನ್ನ ಎಲ್ಲಾ ವಾಟ್ಸಾಪ್ ಸಂದೇಶಗಳನ್ನು ಗಮನಿಸುತ್ತಿದ್ದ' ಎಂದು ಹೇಳಿದ್ದಾರೆ. 

ಹೈದರಾಬಾದ್‌ಗೆ ತೆರಳುವ ಎರಡು ದಿನಗಳ ಮೊದಲು ಮತ್ತೊಮ್ಮೆ ದಾಳಿ ಮಾಡಿದ. ಅವನು ನನ್ನ ಫೋನ್ ಲಾಕ್ ಮಾಡಿ ನನ್ನ ಮುಖಕ್ಕೆ ಹೊಡೆದನು. ಇದು ನಿಜವಾಗಿಯೂ ನನಗೆ ಆಘಾತವನ್ನುಂಟು ಮಾಡಿದೆ. ನಾನು ಫೋನ್ ಕೊಡುವಂತೆ ಕೇಳಿದೆ. ನನಗಿಂತ ನಾಲ್ಕು ಪಟ್ಟು ಗಾತ್ರದ ವ್ಯಕ್ತಿ ನನ್ನ ಮೇಲೆ ಎಗರಿ ನನಗೆ ಸರಿಯಾಗಿ ಥಳಿಸಿದ. ನಾನು ನನ್ನ ಬಾಯಿ ಮುಚ್ಚಿಕೊಂಡೆ. ನಾನು ಪ್ರಜ್ಞೆ ಕಳೆದುಕೊಂಡೆ. ಇದು ನನ್ನ ಕೊನೆಯ ರಾತ್ರಿ ಎಂದು ನಾನು ಭಾವಿಸಿದ್ದೆ. ಪ್ರಜ್ಞೆ ಬಂದ ತಕ್ಷಣ ಅಲ್ಲಿಂದ ಎದ್ದು ತಪ್ಪಿಸಿಕೊಳ್ಳಲು ಯತ್ನಿಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೇಗೋ ಅವನಿಂದ ತಪ್ಪಿಸಿಕೊಂಡು ಬಾತ್ ರೂಂನಲ್ಲಿ ಬೆಳಗಿನ ತನಕ ಮಲಗಿದೆ' ಎಂದು ವಿವರಿಸಿದ್ದಾರೆ.

'ಏನಾಯಿತು ಎಂಬುದರ ಬಗ್ಗೆ ನನ್ನ ಕುಟುಂಬ ಮತ್ತು ಪೊಲೀಸರಿಗೆ ತಿಳಿಸಲು ನನಗೆ ಸಮಯ ಹಿಡಿಯಿತು. ಈ ಆಘಾತದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀನಿ. ಆದರೆ ನಾನು ಅವನನ್ನು ಸುಮ್ಮನೆ ಬಿಡಲಾರೆ. ಆದರೆ ನನ್ನ ಕುಟುಂಬ ಮತ್ತು ನನಗೆ ಏನು ಮಾಡಬೇಕೆಂದು ತಿಳಿದಿಲ್ಲ' ಎಂದು ದೀರ್ಘವಾದ ಪೋಸ್ಟ್ ಹಾಕಿದ್ದಾರೆ. 

click me!