'ಸನಾತನ, ಸರ್ವಾಧಿಕಾರದ ಸರಪಳಿಗಳನ್ನು ಮುರಿಯಬಲ್ಲ ಏಕೈಕ ಅಸ್ತ್ರ ಶಿಕ್ಷಣ' : Actor Kamal Haasan

Published : Aug 04, 2025, 10:50 AM ISTUpdated : Aug 04, 2025, 10:54 AM IST
actor Kamal Haasan

ಸಾರಾಂಶ

Actor Kamal Haasan On Education: ಇತ್ತೀಚೆಗೆ ಕನ್ನಡದ ವಿಷಯವಾಗಿ ವಿವಾದ ಸೃಷ್ಟಿಸಿಕೊಂಡಿದ್ದ ನಟ ಕಮಲ್‌ ಹಾಸನ್‌ ಅವರೀಗ ಸನಾತನ ಹಾಗೂ ಸರ್ವಾಧಿಕಾರದ ಬಗ್ಗೆ ಮಾತನಾಡಿದ್ದಾರೆ. ಈ ಸರಪಳಿ ಮುರಿಯಲು ಶಿಕ್ಷಣದಿಂದ ಸಾಧ್ಯ ಎಂದು ಅವರು ಹೇಳಿದ್ದಾರೆ. 

ಚೆನ್ನೈ: ನಗರದಲ್ಲಿ ನಡೆದ ಆಗರಂ ಫೌಂಡೇಶನ್ ಕಾರ್ಯಕ್ರಮದಲ್ಲಿ ನಟ ಮತ್ತು ಮಕ್ಕಳ್ ನೀದಿ ಮಯ್ಯಂ ಸಂಸ್ಥಾಪಕ ಕಮಲ್ ಹಾಸನ್ ( Kamal Haasan ) ಚೆನ್ನೈನಲ್ಲಿ ನಡೆದ ಮಾತನಾಡುತ್ತ, ಶಿಕ್ಷಣದ ಅಗತ್ಯತೆಯ ಬಗ್ಗೆ ಬಲವಾದ ಹೇಳಿಕೆ ನೀಡಿದರು.

"ಸರ್ವಾಧಿಕಾರ ಮತ್ತು ಸನಾತನ ಸರಪಳಿಗಳನ್ನು ಮುರಿಯಬಲ್ಲ ಏಕೈಕ ಅಸ್ತ್ರ ಶಿಕ್ಷಣ" ಎಂದು ರಾಜ್ಯಸಭಾ ಸಂಸದರು ಭಾನುವಾರ ಹೇಳಿದರು.

ಶಿಕ್ಷಣದ ಮಹತ್ವ ಹೇಳಿದ ಕಮಲ್‌ ಹಾಸನ್!‌

ಕಮಲ್ ಹಾಸನ್ ಮುಂದುವರಿದು, "ಬೇರೆ ಏನನ್ನೂ ಕೈಗೆತ್ತಿಕೊಳ್ಳಬೇಡಿ, ಶಿಕ್ಷಣವನ್ನು ಮಾತ್ರ. ಅದು ಇಲ್ಲದೆ ನಾವು ಗೆಲ್ಲಲು ಸಾಧ್ಯವಿಲ್ಲ, ಬಹುಸಂಖ್ಯಾತರು ನಿಮ್ಮನ್ನು ಸೋಲಿಸಬಹುದು. ಬಹುಸಂಖ್ಯಾತ ಮೂರ್ಖರು (ಮೂಢರು) ನಿಮ್ಮನ್ನು ಸೋಲಿಸುತ್ತಾರೆ; ಜ್ಞಾನ ಮಾತ್ರ ಸೋಲುತ್ತದೆ. ಅದಕ್ಕಾಗಿಯೇ ನಾವು ಅದನ್ನು (ಶಿಕ್ಷಣ) ದೃಢವಾಗಿ ಹಿಡಿದಿಟ್ಟುಕೊಳ್ಳಬೇಕು" ಎಂದು ಹೇಳಿದ್ದಾರೆ.

ಪ್ರೀತಿ ಸಿಗೋದು ಎಲ್ಲಿಂದ?

ಆಗರಂ ಫೌಂಡೇಶನ್ ಕೆಲಸವನ್ನು ಶ್ಲಾಘಿಸಿದ ರಾಜ್ಯಸಭಾ ಸಂಸದರು, "ನಿಜವಾದ ಶಿಕ್ಷಣ ಮತ್ತು ಬೇಷರತ್ತಾದ ಪ್ರೀತಿಯನ್ನು ಪಡೆಯುವುದು ಕಷ್ಟ. ನಮ್ಮ ತಾಯಂದಿರನ್ನು ಹೊರತುಪಡಿಸಿ, ಆಗರಂ ಫೌಂಡೇಶನ್‌ನಂತಹ ಸಂಸ್ಥೆಗಳಿಂದ ಪ್ರೀತಿ ಪಡೆಯಬಹುದು" ಎಂದು ಹೇಳಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ಮುಳ್ಳಿನ ಕಿರೀಟ ಸಿಗುತ್ತೆ!

"ಸಿನಿಮಾದಲ್ಲಿ, ನಮ್ಮ ಅಭಿನಯಕ್ಕಾಗಿ ನಮಗೆ ಕಿರೀಟವನ್ನು ನೀಡಲಾಗುತ್ತದೆ. ಆದರೆ ಸಾಮಾಜಿಕ ಕಾರ್ಯದಲ್ಲಿ, ನಮಗೆ ಮುಳ್ಳಿನ ಕಿರೀಟವನ್ನು ನೀಡಲಾಗುತ್ತದೆ. ಆ ಕಿರೀಟವನ್ನು ಸ್ವೀಕರಿಸಲು ಬಲವಾದ ಹೃದಯ ಬೇಕು. ನಮಗಾಗಿ ಬೇರೆ ಯಾರೂ ಇದನ್ನು ಮಾಡುವುದಿಲ್ಲ, ನಾವೇ ಮಾಡಬೇಕು" ಎಂದು ಅವರು ಹೇಳಿದರು.

ಕಾನೂನು ಬದಲಾಯಿಸಲು ಶಿಕ್ಷಣ ಮುಖ್ಯ!

ಶಿಕ್ಷಣ ಕ್ಷೇತ್ರದಲ್ಲಿನ ಸವಾಲುಗಳನ್ನು ಉದ್ದೇಶಿಸಿ, 2017 ರಿಂದ NEET ಅನುಷ್ಠಾನವು ಅನೇಕ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಹೇಗೆ ಸೀಮಿತಗೊಳಿಸಿದೆ ಎಂಬುದನ್ನು ಅವರು ಹೇಳಿದ್ದಾರೆ. "ಆಗರಂ ಫೌಂಡೇಶನ್ ಕೂಡ, ಅದರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಒಂದು ಹಂತಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಏಕೆಂದರೆ ಕಾನೂನು ಅದನ್ನು ಅನುಮತಿಸುವುದಿಲ್ಲ. ಕಾನೂನನ್ನು ಬದಲಾಯಿಸಲು, ನಮಗೆ ಶಕ್ತಿ ಬೇಕು ಮತ್ತು ಆ ಶಕ್ತಿಯು ಶಿಕ್ಷಣದಿಂದ ಮಾತ್ರ ಬರಬಹುದು ಎಂದು ಅವರು ಹೇಳಿದರು.

ಎನ್‌ಜಿಒಗಳಿಗೆ ಹಣ ಬೇಡ, ಅನುಮತಿ ಬೇಕು!

ಕಮಲ್ ಹಾಸನ್ ಅವರು ಇತ್ತೀಚೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರೊಂದಿಗೆ ನಡೆಸಿದ ಸಂಭಾಷಣೆಯ ಬಗ್ಗೆ ಕೂಡ ಮಾತನಾಡಿದ್ದಾರೆ. "ನಿನ್ನೆ, ನಾನು ಮುಖ್ಯಮಂತ್ರಿಗಳಿಗೆ NGOಗಳು ಹಣ ಕೇಳುತ್ತಿಲ್ಲ. ಅವರು ಕೆಲಸ ಮಾಡಲು ಅನುಮತಿ ಕೇಳುತ್ತಿದ್ದಾರೆ ಎಂದು ಹೇಳಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದರು. ಈ ಉದ್ದೇಶದಲ್ಲಿ ತೊಡಗಿಸಿಕೊಂಡಿರುವುದಕ್ಕೆ ನನಗೆ ಹೆಮ್ಮೆಯಾಗಿದೆ" ಎಂದು ಅವರು ಹೇಳಿದರು.

ಈ ವಿಷಯ ಅರ್ಥ ಆಗಲು 70 ವರ್ಷ ಬೇಕಾಯ್ತು!

ಅವರ ಕೆಲಸದ ಪ್ರಭಾವ ಮುಂದುವರಿದರೂ ಸಹ ನಿಜವಾದ ನಾಯಕರನ್ನು ಹೆಚ್ಚಾಗಿ ಮರೆತುಬಿಡಲಾಗುತ್ತದೆ, ಎಂದು ಹೇಳಿದರು. "ನಾಯಕತ್ವ ಎಂದರೆ ಅಧಿಕಾರದಲ್ಲಿ ಉಳಿಯುವುದಲ್ಲ, ಬದಲಾವಣೆಯನ್ನು ಮಾಡುವುದು, ನಿಮ್ಮ ಹೆಸರು ಅಲೆಗಳೊಂದಿಗೆ ಮರೆಯಾದರೂ ಸಹ. ಇದನ್ನು ಅರ್ಥಮಾಡಿಕೊಳ್ಳಲು ನನಗೆ 70 ವರ್ಷಗಳು ಬೇಕಾಯಿತು” ಎಂದು ಹೇಳಿದ್ದಾರೆ.

ತಮಿಳಿನಿಂದಲೇ ಕನ್ನಡ ಹುಟ್ಟಿದೆ ಎಂದು ಕಮಲ್‌ ಹಾಸನ್‌ ಹೇಳಿಕೆ ನೀಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಆಮೇಲೆ ಅವರು ಇದಕ್ಕೆ ಕ್ಷಮೆ ಕೂಡ ಕೇಳಿರಲಿಲ್ಲ. ಹೀಗಾಗಿ ಕರ್ನಾಟಕದಲ್ಲಿ ಅವರ ಸಿನಿಮಾ ರಿಲೀಸ್‌ಗೆ ವ್ಯಾಪಕ ಆಕ್ರೋಶ ಎದುರಾಯಿತು. ಇನ್ನು “ಥಗ್‌ ಲೈಫ್”‌ ಸಿನಿಮಾವು ಸೋಲು ಕಂಡಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!