ಆಪ್ತಮಿತ್ರದಂತಹ ಗಟ್ಟಿಯಾದ ಕತೆ 'ಸತ್ಯಂ'ನಲ್ಲಿದೆ: ರಂಜನಿ ರಾಘವನ್

Published : Jan 15, 2024, 09:43 PM IST
ಆಪ್ತಮಿತ್ರದಂತಹ ಗಟ್ಟಿಯಾದ ಕತೆ 'ಸತ್ಯಂ'ನಲ್ಲಿದೆ: ರಂಜನಿ ರಾಘವನ್

ಸಾರಾಂಶ

ಮೂರು ಜನರೇಷನ್‌ನ ಕತೆ. ಭೂತಾರಾಧನೆ ತೋರಿಸಿರುವ ಕತೆ. ಒಂದು ಕುಟುಂಬಕ್ಕೆ ಸಂಬಂಧಿಸಿದ ಕತೆ. ಕೌಟುಂಬಿಕ ಕತೆಗಳು ಮರೆಯಾಗುತ್ತಿರುವ ಕಾಲದಲ್ಲಿ ಈ ಸಿನಿಮಾ ವಿಭಿನ್ನವಾಗಿದೆ. ಆಪ್ತಮಿತ್ರದಂತಹ ಗಟ್ಟಿಯಾದ ಕತೆ ಇದೆ. ಕತೆಯ ಪ್ಯಾಟರ್ನ್ ತುಂಬಾ ವಿಶಿಷ್ಟವಾಗಿದೆ.

ಕಿರುತೆರೆಯಲ್ಲಿ ಪಾರಮ್ಯ ಮೆರೆದಿದ್ದ ಪ್ರತಿಭಾವಂತ ನಟಿ ರಂಜನಿ ರಾಘವನ್ ‘ಸತ್ಯಂ’ ಸಿನಿಮಾದ ಮೂಲಕ ಮತ್ತೆ ಹಿರಿತೆರೆಗೆ ಬರುತ್ತಿದ್ದಾರೆ. ಅಶೋಕ್ ಕಡಬ ನಿರ್ದೇಶಿಸಿರುವ, ಮಹಾಂತೇಶ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಸಂತೋಷ್ ಮತ್ತು ರಂಜನಿ ರಾಘವನ್ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ರಿಲೀಸ್ ಆಗಲಿದ್ದು, ಈ ಸಂದರ್ಭದಲ್ಲಿ ಕತೆಗಾರ್ತಿ, ನಟಿ ರಂಜನಿ ರಾಘವನ್ ಆಡಿದ ಮಾತುಗಳು ಇಲ್ಲಿವೆ:

- ಈ ಸಿನಿಮಾ ಕತೆ ಕೇಳಲು ಹೋಗುವಾಗ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ಆಮೇಲೆ ಈ ಚಿತ್ರದ ಕತೆ ಮತ್ತು ಚಿತ್ರಕತೆಯಲ್ಲಿ ಹಿರಿಯ ನಿರ್ದೇಶಕ ಕೆವಿ ರಾಜು, ಖ್ಯಾತ ಗೀತ ರಚನಕಾರ ಕಿನ್ನಾಳ್ ರಾಜ್ ಪಾತ್ರ ಇದೆ ಅಂತ ತಿಳಿಯಿತು. ಕತೆ ಕೇಳಿದ ಮೇಲೆ ಈ ಒಳ್ಳೆಯ ತಂಡದ ಪ್ರಯತ್ನ ಸಾರ್ಥಕ ಅನ್ನಿಸಿತು. ಕತೆಗಾರ್ತಿಯಾಗಿ ನನಗೆ ಇಷ್ಟವಾದ ಕತೆ ಇದು.

ಯಶ್ ರಾವಣ ಟೆಸ್ಟ್ ಲುಕ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ರಾವಣ ಆಗೋದು ಕನ್ಫರ್ಮ್!

- ಮೂರು ಜನರೇಷನ್‌ನ ಕತೆ. ಭೂತಾರಾಧನೆ ತೋರಿಸಿರುವ ಕತೆ. ಒಂದು ಕುಟುಂಬಕ್ಕೆ ಸಂಬಂಧಿಸಿದ ಕತೆ. ಕೌಟುಂಬಿಕ ಕತೆಗಳು ಮರೆಯಾಗುತ್ತಿರುವ ಕಾಲದಲ್ಲಿ ಈ ಸಿನಿಮಾ ವಿಭಿನ್ನವಾಗಿದೆ. ಆಪ್ತಮಿತ್ರದಂತಹ ಗಟ್ಟಿಯಾದ ಕತೆ ಇದೆ. ಕತೆಯ ಪ್ಯಾಟರ್ನ್ ತುಂಬಾ ವಿಶಿಷ್ಟವಾಗಿದೆ.

- ಈ ಚಿತ್ರದಲ್ಲಿ ನನ್ನದು ಮಲೆನಾಡು ಹುಡುಗಿಯ ಪಾತ್ರ. ಸ್ವಲ್ಪ ಹಠ ಜಾಸ್ತಿ. ನಾನು ನಿಜ ಜೀವನದಲ್ಲಿ ಹಠ ಮಾಡುವವಳಲ್ಲ. ಆದರೆ ಈ ಚಿತ್ರದಲ್ಲಿ ಹಠದ ಹುಡುಗಿಯಾಗಿ ನಟಿಸಿದ್ದು ಖುಷಿ ಕೊಟ್ಟಿತು.

- ಕ್ಲೀಶೆ ಲವ್‌ಸ್ಟೋರಿಗಿಂತ ಇಲ್ಲಿನ ಪ್ರೇಮಕತೆ ವಿಭಿನ್ನವಾಗಿದೆ. ನಾನು ನಾಯಕ ಪಾತ್ರದ ಕ್ಲಾಸ್‌ಮೇಟ್‌ ಆಗಿರುತ್ತೇನೆ. ಮುದ್ದಾದ ಲವ್‌ಸ್ಟೋರಿ ಇದರಲ್ಲಿದೆ.

- ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಅದ್ಭುತ ತಾರಾಗಣವಿದೆ. ಸಂತೋಷ್ ಉತ್ತಮವಾಗಿ ನಟಿಸಿದ್ದಾರೆ. ಸಯ್ಯಾಜಿ ಶಿಂಧೆ, ಸುಮನ್‌ರಂತಹ ಹಿರಿಯ ಕಲಾವಿದರಿದ್ದಾರೆ. ರವಿ ಬಸ್ರೂರು ಸಂಗೀತವಿದೆ.

ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!

- ಹೊಸ ರಿಲೀಸ್ ಆಗುವುದೇ ಒಂದು ಸಂಭ್ರಮ. ಜನ ಹೊಸತಾಗಿ ನಮ್ಮನ್ನು ಎದುರುಗೊಳ್ಳುತ್ತಾರೆ. ಈಗ ಹಳೆಯ ಪಾತ್ರದಿಂದ ಕಳಚಿಕೊಂಡು ಹೊಸ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ. ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಎಕ್ಸೈಟ್‌ಮೆಂಟ್‌ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು