ಭಾರಿ ಕುತೂಹಲ ಕೆರಳಿಸಿದ್ದ ಮೋದಿ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಮದ್ಯಮ ವರ್ಗದ ಜನರಿಗೆ 7 ಲಕ್ಷ ರೂಪಾಯಿ ವರೆಗೆ ಆದಾಯ ತೆರಿಗೆ ವಿನಾಯಿತಿ ಘೋಷಣೆ, ಮಹಿಳಯರಿಗೆ ಉಳಿತಾಯ ಯೋಜನೆ, ಹಿರಿಯರ ರೇವಣಿ ಮೊತ್ತ ಹೆಚ್ಚಳ, ಶಿಕ್ಷಣ, ಕೃಷಿ, ರಕ್ಷಣೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಅಳೆದು ತೂಗಿ ಹಣ ಹಂಚಿಕೆ ಮಾಡಲಾಗಿದೆ. ಕರ್ನಾಟಕದ ಬದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ. ಇತ್ತ ಬರಪೀಡಿತ ಪ್ರದೇಶಗಳಿಗೆ ಹೊಸ ಯೋಜನೆ ರೂಪಿಸಲಾಗಿದೆ. ಸರ್ವರಿಗೂ ಸಮಪಾಲು, ಸಮಬಾಳು ಎನ್ನುವಂತೆ ಕೃಷಿಕರು, ಮಹಿಳೆಯರು, ವಿದ್ಯಾರ್ಥಿಗಳು, ಹಿಂದುಳಿದ ಜಾತಿ, ಬುಡಕಟ್ಟು ಜನಾಂಗ ಸೇರಿ ಎಲ್ಲರಿಗೂ ಅನುಕೂಲವಾಗುವಂತೆ ಹಲವು ಘೋಷಣೆ ಮಾಡಿರುವ ನಿರ್ಮಲಾ, ಕೃಷಿ ಸಾಲವನ್ನು ಹೆಚ್ಚಿಸಿದ್ದಾರೆ. ಇದೀಗ ಬಜೆಟ್ ವಿರುದ್ಧ ವಿಪಕ್ಷಗಳು ಮುಗಿ ಬಿದ್ದಿದೆ. ನಿರುದ್ಯೋಗ ಸಮಸ್ಯೆಗೆ, ಬಡನತ ನಿರ್ಮೂಲನ ಮಾಡಲು ಈ ಬಜೆಟ್ನಲ್ಲಿ ಯಾವುದೇ ಪರಿಹಾರ ಸೂತ್ರಗಳಿಲ್ಲ ಎಂದಿದೆ. ಪ್ರಧಾನಿ ತಮ್ಮ ಭಾಷಣದಲ್ಲಿ ಈ ಬಜೆಟ್ ಐತಿಹಾಸಿಕ ಎಂದು ಬಣ್ಣಸಿದ್ದಾರೆ. ಇಂದು ಮಂಡಿಸಿದ ಬಜೆಟ್ನಲ್ಲಿ ಯಾವ ಕ್ಷೇತ್ರಕ್ಕೆ ಯಾವ ಕೊಡುಗೆ ನೀಡಲಾಗಿದೆ. ಹೊಸ ಯೋಜನೆ, ಅತೀ ದೊಡ್ಡ ಘೋಷಣೆ, ಯಾವುದು ದುಬಾರಿ? ಯಾವುದು ಅಗ್ಗ, ಪ್ರತಿಪಕ್ಷಗಳ ಪ್ರತಿಕ್ರಿಯೆ ಸೇರದಂತೆ ಬಜೆಟ್ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

10:40 PM (IST) Feb 01
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ನಿರಾಸದಾಯಕವಾಗಿದೆ. ರಾಜಸ್ಥಾನ ಜನರು ಹಲವು ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದರು. ಆದರೆ ಮೋದಿ ಸರ್ಕಾರ ಎಲ್ಲರಿಗೂ ತಣ್ಣೀರೆರಚಿದೆ ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
09:05 PM (IST) Feb 01
ಬಂಡವಾಳ ಹೂಡಿಕೆ, ಕುಡಿಯುವ ನೀರಿನ ಯೋಜನೆ, ಗ್ರಾಮೀಣ ವಸತಿಗಳ ಹೆಚ್ಚಳ ಸೇರಿದಂತೆ ಹಲವು ಉತ್ತಮ ಅಂಶಗಳನ್ನು ಬಜೆಟ್ ಹೊಂದಿದೆ. ಈ ಬಜೆಟ್ ಉತ್ತಮ ಸಾಮಾಜಿಕ ಪರಿಣಾಮ ಬೀರಲಿದೆ: ಒಡಿಶಾ ಸಿಎಂ ನವೀನ್ ಪಟ್ನಾಯಕ್
08:10 PM (IST) Feb 01
ಕೇಂದ್ರ ಮಂಡಿಸಿದ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಎಲ್ಲಾ ವರ್ಗದಕ್ಕೆ ಕೊಡುಗೆ ಜೊತೆಗೆ ಆರ್ಥಿಕ ಸಬಲೀಕರಣದತ್ತ ಸಾಗಲು ಈ ಬಜೆಟ್ ಅತ್ಯಂತ ಮುಖ್ಯವಾಗಿದೆ. ಈ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ
07:38 PM (IST) Feb 01
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಿದ್ದಾರೆ. 86 ನಿಮಿಷಗಳಲ್ಲಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಮುಗಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ 124 ಬಾರಿ ಮೇಜು ತಟ್ಟಿ ಅಭಿನಂದಿಸಿದ್ದಾರೆ.
06:58 PM (IST) Feb 01
ಟಿಡಿಎಸ್ ಗರಿಷ್ಠ ಮಿತಿಯನ್ನು 3 ಕೋಟಿ ರೂಪಾಯಿ ಹೆಚ್ಚಿಸುವ ನಿರ್ಧಾರವನ್ನು ಬಜೆಟ್ನಲ್ಲಿ ಕೈಗೊಳ್ಳಲಾಗಿದೆ. ಪಿಎಸಿಎಸ್ ಮತ್ತು ಪಿಸಿಆರ್ಡಿಬಿಗಳಿಂದ ನಗದು ಠೇವಣಿ ವಲಯದಲ್ಲಿ ಮಾಡಿದ ಬದಲಾವಣೆಯಿಂದ ಸಕ್ಕರೆ ಸಹಕಾರಿ ಸಂಘಗಳ ಕಾರ್ಖಾನೆಗಳಿಗೆ ಸರಿಸುಮಾರು 10,000 ಕೋಟಿ ರೂಪಾಯಿ ಪರಿಹಾರ ಪಡೆಯಲಿದೆ. ಇದು ಮಹತ್ವದ ನಿರ್ಧಾರ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಣ್ಣಿಸಿದ್ದಾರೆ.
06:43 PM (IST) Feb 01
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡುವ ಯಾವುದೇ ಕ್ರಮ ಇಲ್ಲ. ಹಣದುಬ್ಬ ಹಾಗೂ ಅಸಮಾನತೆ ಹೋಗಲಾಡಿಸಲು ಯಾವುದೇ ಯೋಜನೆಗಳಿಲ್ಲ. ದೇಶದ 1 ಶೇಕಡಾ ಶ್ರೀಮಂತರ ಶೇಕಡಾ 40 ರಷ್ಟು ಸಂಪತ್ತು ಹೊಂದಿದ್ದರೆ, ಶೇಕಡಾ 50 ರಷ್ಟು ಬಡವರು ಶೇಕಡಾ 64ರಷ್ಟು ಜಿಎಸ್ಟಿ ಪಾವತಿಸುತ್ತಿದ್ದಾರೆ. ಶೇಕಡಾ 42 ರಷ್ಟು ಯುವ ಸಮೂಹ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಬಜೆಟ್ ವಿರುದ್ಧ ಹರಿಹಾಯ್ದಿದ್ದಾರೆ.
06:39 PM (IST) Feb 01
ಕೇಂದ್ರ ಬಿಜೆಪಿ ಮಹತ್ವದ ಬಜೆಟ್ ಮಂಡಿಸಿದೆ. ಆರ್ಥಿಕ ಹಿಂಜರಿತ, ಕೋವಿಡ್ ಸಂಕಷ್ಟದಿಂದ ಹೊರಬಂದು ಮೈಕೊಡವಿ ನಿಂತಿರುವ ಭಾರತದ ಅಭಿವೃದ್ಧಿ ವೇಗ ಹೆಚ್ಚಿಸಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ವಿಪಕ್ಷ ನಾಯಕರು ಇದು ಪೊಳ್ಳು ಬಜೆಟ್ ಎಂದು ಟೀಕಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Union Budget 2023: ಕೊಟ್ಟ ಮಾತಿನಂತೆ ನಡೆದುಕೊಂಡ ಮೋದಿ, ಉತ್ತಮ ಬಜೆಟ್ ಎಂದ ಯಡಿಯೂರಪ್ಪ!
06:38 PM (IST) Feb 01
ದೇಶದ ಆರ್ಥಿಕ ಮಂಡಿಸಿರುವ ಬಜೆಟ್ನಲ್ಲಿ ರೈತರಿಗೆ, ಕೃಷಿ ಕಾರ್ಮಿಕರಿಗೆ ದ್ರೋಹ ಮಾಡಲಾಗಿದೆ. ರಸಗೊಬ್ಬರಕ್ಕೆ ನೀಡಲಾಗುತ್ತಿದ್ದ 50 ಸಾವಿರ ಕೋಟಿ ಸಬ್ಸಿಡಿ ಕಡಿಮೆ ಮಾಡಿದ್ದಾರೆ. ಹೀಗಾದರೆ ರೈತರಿಗೆ ನ್ಯಾಯಯುತವಾಗಿ ಬೆಲೆ ಹೇಗೆ ಸಿಗುತ್ತದೆ. ಅತ್ಯಂತ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಮಾಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Union Budget :ರೈತರ ಗೊಬ್ಬರಕ್ಕೆ 50 ಸಾವಿರ ಕೋಟಿ ಸಬ್ಸಿಡಿ ಕಡಿತ: ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ
06:21 PM (IST) Feb 01
ದೇಶದಲ್ಲಿನ ಸಾವಿರಾರು ಕುಶಲಕರ್ಮಿಗಳು ಹಾಗೂ ಕರಕುಶಲತೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶದಲ್ಲಿ ಪಿಎಂ ವಿಕಾಸ್ ಯೋಜನೆ ಜಾರಿ ಮಾಡಲಾಗಿದೆ. ಪಿಎಂ ವಿಕಾಸ್ ಯೋಜನೆಯ ಮೂಲಕ ವಿಶ್ವಕರ್ಮರು ಭಾರತದ ಪ್ರಗತಿಯಲ್ಲಿ ಸೇರಿಕೊಳ್ಳುವುದಲ್ಲದೆ ದೇಶದ ಬೆಳವಣಿಗೆ ಪ್ರಬಲ ಜನಾಂಗವಾಗಲಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.
04:48 PM (IST) Feb 01
2023-24ನೇ ಸಾಲಿನ ಬಜೆಟ್ ನಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಚ್ಚಿನ ಒತ್ತು ನೀಡಿದ್ದಾರೆ. ಮಹಿಳೆಯರಲ್ಲಿ ಉಳಿತಾಯದ ಗುಣವನ್ನು ಉತ್ತೇಜಿಸಲು ಹೆಚ್ಚಿನ ಬಡ್ಡಿದರ ನೀಡುವ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದ್ದಾರೆ.
Union Budget 2023:ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ; ಉಳಿತಾಯ ಉತ್ತೇಜಿಸಲು ಹೊಸ ಯೋಜನೆ ಘೋಷಣೆ
04:32 PM (IST) Feb 01
2022ರ ಬಜೆಟ್ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 80 ಲಕ್ಷ ಮನೆಗಳ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿತ್ತು. ಈ ಮೊತ್ತದಲ್ಲಿ ಶೇ. 66ರಷ್ಟು ಏರಿಕೆಯಾಗಿದೆ. ನಗರ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ ವಾರ್ಷಿಕ ₹ 10,000 ಕೋಟಿ ವಿನಿಯೋಗಿಸುವ ಮೂಲಕ ಎಲ್ಲರಿಗೂ ಕೈಗೆಟುಕುವ ವಸತಿ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿರುವುದಾಗಿ ಹೇಳಿದೆ.
04:19 PM (IST) Feb 01
ಈ ಬಾರಿಯ ಬಜೆಟ್ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬಳಕೆಗೆ ಮತ್ತಷ್ಟು ಉತ್ತೇಜನ ನೀಡಲಿದೆ. ಇಷ್ಟೇ ಅಲ್ಲ ಲಿಥಿಂಯ ಹಾಗೂ ಐಯಾನ್ ಬ್ಯಾಟರಿ ಮೇಲಿನ ಸುಂಕ ಕಡಿತಗೊಳಿಸಿರುವ ಕಾರಣ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. ಇದರ ಜೊತೆಗೆ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ಬಜೆಟ್ನಲ್ಲಿ ನೀಡಿರುವ ಕೊಡುಗೆ ಏನು? ಇಲ್ಲಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
03:41 PM (IST) Feb 01
ಕೇಂದ್ರ ಬಜೆಟ್ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.93 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
03:29 PM (IST) Feb 01
ಸಾಮಾನ್ಯವಾಗಿ ಬಜೆಟ್ ಭಾಷಣದಲ್ಲಿ ತೆರಿಗೆ, ಯಾವ ಕ್ಷೇತ್ರಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಅನ್ನೋ ವಿಚಾರವೇ ಹೆಚ್ಚು ಚರ್ಚೆ ಆಗುತ್ತಿದೆ. ತೆರಿಗೆದಾರರಿಗೆ ದೊಡ್ಡ ರಿಲೀಫ್ ನೀಡಿರುವ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಗರಿಷ್ಠ ಬಾರಿ ಬಳಕೆ ಮಾಡಿರುವ ಪದ 'ಟ್ಯಾಕ್ಸ್'!
03:28 PM (IST) Feb 01
ಕೇಂದ್ರ ಬಜೆಟ್ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದಲ್ಲಿ ಶೇ. 16ರಷ್ಟು ಏರಿಕೆಯಾಗಿದೆ. ನಿರ್ಮಲಾ ಸೀತಾರಾಮನ್, 5.94 ಲಕ್ಷ ಕೋಟಿ ಹಣವನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ. ಕಳೆದ ವರ್ಷದ ಬಜೆಟ್ಗೆ ಹೋಲಿಸಿದರೆ ಈ ಬಾರಿ 69 ಸಾವಿರ ಕೋಟಿ ರೂಪಾಯಿ ಏರಿಕೆಯಾಗಿದೆ.
Defence Budget 2023: ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, ಉಳಿದ ಕ್ಷೇತ್ರಕ್ಕೂ ಇದೆ ಅವರ ಪಾಲು!
03:21 PM (IST) Feb 01
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮೋದಿ ಸರ್ಕಾರ ಈ ಹಿಂದಿನಿಂದಲೂ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದೆ. ಅದರಂತೆ ಈ ಬಾರಿಯ ಬಜೆಟ್ ನಲ್ಲಿ ಕೂಡ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
03:19 PM (IST) Feb 01
ಜನಸಾಮಾನ್ಯರಿಗೆ ಹೊರೆಯಾಗದಂತೆ ಹೊಸ ತೆರಿಗೆಯನ್ನು ವಿಧಿಸದೆ ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು ಹೆಚ್ಚಿಸಿ ಹಿರಿಯ ನಾಗರಿಕರು, ಮಹಿಳೆಯರು, ರೈತರು, ಕಾರ್ಮಿಕರು, ಮಧ್ಯಮ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಸಂತೃಪ್ತಿಪಡಿಸುವ ಕೇಂದ್ರ ಬಜೆಟ್ ಮಂಡನೆಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಸಂತಸ ವ್ಯಕ್ತಪಡಿಸಿದ್ದಾರೆ. ಲೋಕಸಭೆಯಲ್ಲಿ ಪ್ರಸಕ್ತ 2023-24ನೇ ಸಾಲಿನ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸರ್ವಸ್ಪರ್ಶಿ ಹಾಗೂ ಸರ್ವರನ್ನೊಳಗೊಂಡ ಸಮತೋಲನದ ಬಜೆಟ್ ಮಂಡಿಸಿದ್ದಾರೆ. ಇದು ಭವಿಷ್ಯದ ಬಜೆಟ್ ಎಂದು ನಿರಾಣಿ ಬಣ್ಣಿಸಿದ್ದಾರೆ. ಈವರೆಗೂ ಇದ್ದ ರೂ. 5 ಲಕ್ಷವರೆಗಿನ ಆದಾಯ ತೆರಿಗೆ ಮಿತಿಯನ್ನು ರೂ. 7 ಲಕ್ಷದವರೆಗೆ ಹೆಚ್ಚಿಸಿರುವುದು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದು ದೇಶವಾಸಿಗಳ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರು ಇಟ್ಟುಕೊಂಡಿರುವ ಕಳಕಳಿ ಎಂದು ಹೇಳಿದ್ದಾರೆ.
02:40 PM (IST) Feb 01
ಚಿಕ್ಕಮಗಳೂರು: ಬಜೆಟ್ ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ. ಯುವ ಸಮುದಾಯ,ಮೂಲ ಸೌಕರ್ಯ , ಪರಿಸರ ಸ್ನೇಹಿ ಬಜೆಟ್ ಇದು. ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ. ದೂರದೃಷ್ಟಿ,ದೇಶದ ಹಿತದೃಷ್ಟಿಯುಳ್ಳ ಬಜೆಟ್. ಬಡವರ ಸ್ನೇಹಿ ಆಗಿರುವ ಬಜೆಟ್ ,9 ಬಜೆಟ್ ಗಳಂತೆ ಈ ಭಾರೀ ಬಜೆಟ್ ಕೂಡ ದೂರದೃಷ್ಟಿ, ದೇಶದ ಹಿತಕಾಯುವ ನಿಟ್ಟಿನಲ್ಲಿರುವ ಬಜೆಟ್. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಹಣಕಾಸಿನ ಖಾತೆ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಿ.ಟಿ ರವಿ.
.
02:01 PM (IST) Feb 01
ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಕೇದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದ ತೆರಿಗೆದಾರರಿಗೆ ಬಂಪರ್ ಕೊಡುಗೆ ಘೋಷಿಸಿದರೆ, ಆಮದು ಸುಂಕ, ರಫ್ತು ಸುಂಕದಲ್ಲಿ ಕೆಲ ಬದಲಾವಣೆಗಳಾಗಿವೆ. ಇಷ್ಟೇ ಅಲ್ಲ ಸಿಗರೇಟು ತಂಬಾಕು ದುಬಾರಿಯಾಗಿದ್ದರೆ, ಮೊಬೈಲ್ ಫೋನ್, ಸ್ಥಳೀಯ ಮತ್ಸ ಉತ್ಪನ್ನಗಳು ಅಗ್ಗವಾಗಿದೆ. ಬಜೆಟ್ ಬಳಿಕ ಯಾವುದೇ ದುಬಾರಿ? ಯಾವುದು ಅಗ್ಗ ಇಲ್ಲಿದೆ ಸಂಪೂರ್ಣ ವಿವರ.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
01:49 PM (IST) Feb 01
ಎಲ್ಲಾ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ತನ್ನ ರಾಜಧಾನಿಯಲ್ಲಿ ಅಥವಾ ರಾಜ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣದಲ್ಲಿ ಯುನಿಟಿ ಮಾಲ್ಅನ್ನು ಸ್ಥಾಪನೆ ಮಾಡುವುದಾಗಿ ಬಜೆಟ್ ಅಲ್ಲಿ ತಿಳಿಸಿದೆ.
Budget 2023: ಒಂದು ಜಿಲ್ಲೆ, ಒಂದು ಉತ್ಪನ್ನ; ಪ್ರವಾಸೋದ್ಯಮಕ್ಕೆ ಸರ್ಕಾರದ ಚೈತನ್ಯ!
01:31 PM (IST) Feb 01
01:31 PM (IST) Feb 01
01:26 PM (IST) Feb 01
ರಾಜ್ಯಗಳಿಗೆ ಪಂಚಾಯತ್ ಮತ್ತು ಬ್ಲಾಕ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸಂಪನ್ಮೂಲಗಳನ್ನು ಪ್ರವೇಶಿಸಲು ಮೂಲಸೌಕರ್ಯಗಳನ್ನು ಒದಗಿಸಲು ಪ್ರೋತ್ಸಾಹಿಸಲಾಗುವುದು.
ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
01:07 PM (IST) Feb 01
ಅಡುಗೆ ಮನೆಯ ಚಿಮಣಿ ಆಮದು ಸುಂಕ ಏರಿಕೆ
ಚಿಮಣಿ ಆಮದು ಸುಂಕ ಶೇ.7 ರಿಂದ 13ಕ್ಕೆ ಏರಿಕೆ
ಆಯ್ದ ಆಮದು ಸುಂಕದಲ್ಲಿ ಭಾರೀ ಇಳಿಕೆ
ಶೇ.21 ರಿಂದ ಶೇ.13ಕ್ಕೆ ಆಮದು ಸುಂಕ ಇಳಿಕೆ
ಮೊಬೈಲ್ ಬಿಡಿಭಾಗಗಳ ಮೇಲಿನ ಆಮದು ಸುಂಕ ಇಳಿಕೆ
ಜವಳಿ, ವಿದ್ಯುತ್ ವಾಹನಗಳ ಬ್ಯಾಟರಿ
ಮೊಬೈಲ್ ಕ್ಯಾಮರಾ ಲೆನ್ಸ್, ಆಟದ ಸಾಮಾನುಗಳು
ಸೈಕಲ್, ಟಿವಿ ಬಿಡಿಭಾಗಗಳು, ಗ್ಲಿಸರಿನ್, ನೈಸರ್ಗಿಕ ಅನಿಲ್ ಆಮದು ಸುಂಕ ಇಳಿಕೆ
ಮೊಬೈಲ್, ಕ್ಯಾಮರಾ ಲೆನ್ಸ್ ಅಗ್ಗ
01:01 PM (IST) Feb 01
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಒತ್ತು ನೀಡುವಂಥ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ಗೆ ಅಭಿನಂದನೆಗಳು. ಭಾರತ ವಿಶ್ವ ಗುರುವಾಗುವತ್ತ ಗಮನ ಹರಿಸಲು ಮುಂದಿನ 25 ವರ್ಷಗಳ ಆರ್ಥಿಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಈ ಬಜೆಟ್ ಸಹಕಾರಿ ಎಂದ ಸಿ.ಟಿ.ರವಿ
12:59 PM (IST) Feb 01
ಮಧ್ಯಮ ವರ್ಗಕ್ಕೆ ಈ ಬಾರಿಯ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಂದ 7 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೂಡುಗೆ ನೀಡಲಾಗಿದೆ.
12:48 PM (IST) Feb 01
ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಹೇಳಿಕೆ. ಜನಪರ, ರೈತರ ಬಜೆಟ್ ಇದು. ಕೃಷಿಕರಿಗೆ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಕೂಲಿ ಕಾರ್ಮಿಕರಿಗೆ ತಲುಪುವಂಥ ಬಜೆಟ್. ಮೂಲಸೌಕರ್ಯ ಅಭಿವೃದ್ಧಿ ವೆಚ್ಚ 35% ಹೆಚ್ಚಳ ಮಾಡಿದ್ದಾರೆ. ಇದರಿಂದ ಬಂಡವಾಳ ಮತ್ತು ಉದ್ಯೋಗವಕಾಶ ಸೃಷ್ಟಿ. ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ ಅನುದಾನ ಕೊಟ್ಟಿದ್ದಾರೆ. ಪಿಎಂ ಆವಾಜ್ ಯೋಜನೆಗೆ 79 ಸಾವಿರ ಕೋಟಿ ಕೊಟ್ಟಿದ್ದು ಸಂತೋಷ.
ಇದು ಪೀಪಲ್ ಫ್ರೆಂಡ್ಲಿ ಬಜೆಟ್. ಕೃಷಿ, ಕೂಲಿ ಕಾರ್ಮಿಕರು, ಕಟ್ಟ ಕಡೆಯ ವ್ಯಕ್ತಿಗೆ ಅನುಕೂಲ ಆಗಿದೆ. ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. 7.5 ಲಕ್ಷ ಕೋಟಿ ಇದ್ದಿದ್ದನ್ನು, 10 ಲಕ್ಷ ಕೋಟಿಗೆ ಮಾಡಲಾಗಿದೆ. ಸರ್ಕಾರಕ್ಕೆ ಆದಾಯ ಮತ್ತು ಉದ್ಯೋಗ ಸಿಗಲಿದೆ. ಅಪ್ಪರ್ ಭದ್ರಾ ಯೋಜನೆಗ 5,300 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. 79 ಸಾವಿರ ಕೋಟಿ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಹಣ ಬಿಡುಗಡೆಯಾಗಿದೆ. ಏಕಲವ್ಯ ಶಾಲೆ ಮೂಲಕ ಶಿಕ್ಷಕರ ನೇಮಕ, ಶಾಲೆ ತೆರೆಯುವುದು. ಎಸ್ಸಿ, ಎಸ್ಟಿ ಸಮುದಾಯಗಳಿಗೆ ಉತ್ತೇಜನ. ಸ್ಟಾರ್ಟಪ್ ಯೋಜನೆಗೆ ಹೆಚ್ಚು ಉತ್ತೇಜನ.
ನಿರ್ಮಲಾ ಸೀತಾರಾಮನ್ ಮಂಡಿಸಿರೋ ಬಜೆಟ್ ಅನ್ನ ಬಿಜೆಪಿ ಸ್ವಾಗತಿಸಲಿದೆ.
12:34 PM (IST) Feb 01
12 ಲಕ್ಷ ರೂ. ಆದಾಯಕ್ಕಿಂತ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂ. ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ. 7 ಲಕ್ಷದವರೆಗೂ ತೆರಿಗೆ ಮಿತಿ ಇದೆ. ಟ್ಯಾಕ್ಸ್ ಸ್ಲ್ಯಾಬ್ ಈ ರೀತಿ ಇದೆ.
12:30 PM (IST) Feb 01
ರೈಲ್ವೇಸ್ಗೆ ಕೇಂದ್ರ ಸರ್ಕಾರ ಬಜೆಟ್ನಲ್ಲಿ ದಾಖಲೆಯ 2.40 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದೆ. ಇದು 2013-14ರ ಬಜೆಟ್ಗೆ ಹೋಲಿಸಿದರೆ, 9 ಪಟ್ಟು ಅಧಿಕ ಹಣವಾಗಿದೆ.
12:27 PM (IST) Feb 01
*ಎನ್ ಪಿಎಸ್ ಮೇಲಿನ ಹೂಡಿಕೆಗೆ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ತೆರಿಗೆ ಕಡಿತದ ಮಿತಿಯನ್ನು ಶೇ.10ರಿಂದ ಶೇ.14ಕ್ಕೆ
*ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ಪ್ರೋತ್ಸಾಹ ಪಡೆಯುವ ಅವಧಿ 2023ರ ಮಾರ್ಚ್ ತನಕ ವಿಸ್ತರಣೆ
*ಯಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.30 ತೆರಿಗೆ
*ವರ್ಚುವಲ್ ಡಿಜಿಟಲ್ ಆಸ್ತಿಯ ವರ್ಗಾವಣೆ ಮೇಲೆ ಶೇ.1ರಷ್ಟು ಟಿಡಿಎಸ್
12:23 PM (IST) Feb 01
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿ ಘೋಷಿಸಿದ ನಿರ್ಮಲಾ, ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.
12:22 PM (IST) Feb 01
ಅಡುಗೆ ಮನೆಯಲ್ಲಿ ಬಳಸುವ ಚಿಮ್ನಿಗಳಿನ್ನು ಅಗ್ಗವಾಗಲಿದೆ. ಸಿಗರೇಟ್ ಸೇದುವವರು ಮತ್ತಷ್ಟು ಹೆಚ್ಚಿನ ಹಣ ವ್ಯಯಿಸಬೇಕಾಗೋದು ಅನಿವಾರ್ಯ.
12:21 PM (IST) Feb 01
ಪ್ರದಾನಿ ಕಿಸಾನ್ ಯೋಜನೆಯಡಿಯಲ್ಲಿ ಕೃಷಿಕರಿಗೆ 2.2 ಲಕ್ಷ ಕೋಟ ಿರೂ. ಹಣ ವರ್ಗಾಯಿಸಲಾಗುವುದು. ಮೋದಿ ನೇತೃತ್ವದ 2ನೇ ಸರಕಾರದ ಕಡೆಯ ಪೂರ್ಣವಧಿ ಬಜೆಟ್ ಮಂಡಿಸಿದ ನಿರ್ಮಲಾ ಸೀತರಾಮನ್ ಕೃಷಿಕರಿಗೆ ಅನುಕೂಲವಾಗುವಂಥ ಯೋಜನೆಗೆ ಮತ್ತಷ್ಟು ಆದ್ಯತೆ ನೀಡಿದ್ದಾರೆ. ಆ ಮೂಲಕ ಜ್ಞಾನಾಧಾರಿತ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.
12:17 PM (IST) Feb 01
ಹಾವೇರಿ: ಬ್ಯಾಡಗಿ ತಾಲೂಕು ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ. ಮಾದ್ಯಮಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ. ಪ್ರಮುಖ ನೀರಾವರಿ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ಅನುದಾನ ಘೋಷಣೆ ಮಾಡಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಈ ಬಾರಿ ಬಜೆಟ್ ನಲ್ಲಿ 5300 ಕೋಟಿ ಘೋಷಣೆ ಮಾಡಿದ್ದಾರೆ. ಇದನ್ನು ಸ್ವಾಗತಿಸುವೆ. ಬರಗಾಲ ಪೀಡಿತ ಬಿಸಿಲು ಪ್ರದೇಶದ ನಾಡಿಗೆ ನೀರಾವರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಈ ಯೋಜನೆ ಬಹಳ ಪ್ರಮುಖವಾಗಿದೆ. ಇಷ್ಟು ದೊಡ್ಡ ಪ್ರಮಾಣದ ಅನುನಾದ ಘೋಷಣೆ ಮಾಡಿದ್ದು ಸಂತಸದ ಸಂಗತಿ
12:14 PM (IST) Feb 01
ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಜಾರಿ
2 ವರ್ಷದ ಅವಧಿಯ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ
ಠೇವಣಿ ಇಡುವ ಮಹಿಳೆಯರಿಗೆ ಶೇ.7.5ರಷ್ಟು ಬಡ್ಡಿ ಯೋಜನೆ
12:13 PM (IST) Feb 01
ಸಣ್ಣ ಕೈಗಾರಿಕೆ ಸಾಲ ಸೌಲಭ್ಯ ಗ್ಯಾರಂಟಿ ಯೋಜನೆ
ಸಣ್ಣ ಕೈಗಾರಿಕೆಗಳಿಗೆ 9 ಸಾವಿರ ಕೋಟಿ ರೂ.ವರೆಗೂ ಸಾಲ ಸೌಲಭ್ಯ
ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ದರ ಶೇ.1ರಷ್ಟು ಇಳಿಕೆ
ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ 9 ಸಾವಿರ ಕೋಟಿ ಸಾಲ
12:11 PM (IST) Feb 01
ಹಳೆ ವಾಹನಗಳ ಬದಲಾವಣೆಗೆ ಹೊಸ ನೀತಿ ಜಾರಿ
ವಾಯುಮಾಲಿನ್ಯ ಉಂಟು ಮಾಡುವ ವಾಹನಗಳ ಬದಲಾವಣೆ
2022ರ ಗುಜರಿ ನೀತಿಯಂತೆ ಸರ್ಕಾರಿ ವಾಹನಗಳ ಬದಲಾವಣೆ
ಮಾಲಿನ್ಯಕಾರಿ ವಾಹನಗಳ ಬದಲಾವಣೆಗೆ ಅನುದಾನ
ಸರ್ಕಾರಿ ಹೊಸ ವಾಹನ ಖರೀದಿಗೆ ಕೇಂದ್ರದಿಂದ ಅನುದಾನ
12:11 PM (IST) Feb 01
ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ 4-0 ಘೋಷಣೆ
3 ವರ್ಷದಲ್ಲಿ ಲಕ್ಷಾಂತರ ಯುವಕರಿಗೆ ಕೌಶಲ್ಯಾಧಾರಿತ ಉದ್ಯೋಗ
ಯೋಜನೆಯಡಿ ಹೊಸ ಕೋರ್ಸ್ಗಳ ಪರಿಚಯ
ಐಒಪಿ, 3-ಡಿ ಪ್ರಿಂಟಿಂಗ್, ಡ್ರೋಣ್ ಕೋರ್ಸ್ಗಳಿಗೆ ಆದ್ಯತೆ
ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಜತೆ ಒಪ್ಪಂದ
ಸ್ಕಿಲ್ ಇಂಡಿಯಾ ಯೋಜನೆ ಮೂಲಕ ಉದ್ಯೋಗ ಸೃಷ್ಟಿ
30 ಅಂತಾರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
12:10 PM (IST) Feb 01
ರಸ್ತೆ, ಮೂಲಭೂತ ಸೌಕರ್ಯ, ಇಂಟರ್ನೆಟ್ ಸಂಪರ್ಕ ಕಲ್ಪಿಸಲು ಕ್ರಮ
47 ಲಕ್ಷ ಯುವಕರಿಗೆ ಕಲಿಕಾ ವೇತನ ನೀಡಲು ಕ್ರಮ
ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್
ಪ್ರವಾಸಿಗರಿಗೆಂದೇ ಹೊಸ ಆ್ಯಪ್
ಪ್ರವಾಸದ ಮಾಹಿತಿ ನೀಡುವ ಹೊಸ ಆ್ಯಪ್
‘ದೇಖೋ ಅಪ್ನಾ ದೇಶ್’ ಹೆಸರಿನ ಹೊಸ ಯೋಜನೆ ಘೋಷಣೆ
ದೇಶಿ ಮತ್ತು ವಿದೇಶಿ ಪ್ರವಾಸಿಗರನ್ನು ಸೆಳೆಯಲು ಒತ್ತು
12:08 PM (IST) Feb 01
ದೇಶದಲ್ಲಿ ಹೊಸದಾಗಿ 50 ಏರ್ಪೋರ್ಟ್ಗಳ ಅಭಿವೃದ್ಧಿಗೆ ಅನುಮೋದನೆ ಮತ್ತು ಅನುದಾನ.
ಮ್ಯಾನ್ ಹೋಲ್ಗಳಲ್ಲಿ ಮಾನವರು ಇಳಿಯದಂತೆ ಯಂತ್ರಗಳ ಬಳಕೆಗೆ ಹೆಚ್ಚಿನ ಅನುದಾನ
ಸರ್ಕಾರಿ ನೌಕರರ ಕೌಶಲಾಭಿವೃದ್ಧಿಗೆ ಕ್ರಮ
7 ಸಾವಿರ ಕೋಟಿ ಅನುದಾನದಲ್ಲಿ ಇ-ಕೋರ್ಟ್ಗಳ ಸ್ಥಾಪನೆ
ಇಡೀ ದೇಶಾದ್ಯಂತ 30 ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ
2030 ರ ವೇಳೆಗೆ 5 MMT ಹಸಿರು ಹೈಡ್ರೋಜನ್ ಉತ್ಪಾದನೆ
ಈ ಗುರಿಯನ್ನು ಸಾಧಿಸಲು 35,000 ಕೋಟಿ ರೂ.ಗಳನ್ನು ನಿಗದಿ
ಭಾರತವು 2070ರ ವೇಳೆಗೆ ಕಾರ್ಬನ್ ಫ್ರೀ ಆಗಲಿದೆ
ಮಾಲಿನ್ಯ ಹೆಚ್ಚಿಸುವ ವಾಹನಗಳು ಗುಜರಿಗೆ ಸೇರಲಿವೆ
ದೇಶದಲ್ಲಿ ಹಸಿರು ಪರಿಸರ ಅಭಿವೃದ್ಧಿಗೆ ಹೆಚ್ವಿನ ಆಧ್ಯತೆ