Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಕಾಂಗ್ರೆಸ್‌ನ ಲೋಕಲ್‌ ಗ್ಯಾರಂಟಿ, ಮೋದಿ ಗ್ಯಾರಂಟಿ ನಡುವೆ ಪೈಪೋಟಿ..!

ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ನುಡಿದಂತೆ ನಡೆದಿದ್ದೇವೆ ಮತ ಕೊಡಿ ಎಂದರೆ, ಬಿಜೆಪಿಯು ದೇಶದ ರಕ್ಷಣೆಗೆ, ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ, ಅವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದೆ.
 

Competition Between Local Guarantee of Congress and Narendra Modi Guarantee grg
Author
First Published Apr 14, 2024, 12:14 PM IST

ಸುಭಾಶ್ಚಂದ್ರ ವಾಗ್ಗೆ/ತಾರಾನಾಥ್ 

ಉಡುಪಿ/ಚಿಕ್ಕಮಗಳೂರು(ಏ.14):  ಉಡುಪಿ-ಚಿಕ್ಕಮಗಳೂರಿನಲ್ಲೀಗಗ್ಯಾರಂಟಿಗಳ ನಡುವೆ ಸ್ಪರ್ಧೆ. ಕಾಂಗ್ರೆಸ್ ಪಕ್ಷ ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಿರುವ ಪಂಚ ಗ್ಯಾರಂಟಿಗಳನ್ನು ಜನರ ಮುಂದಿಟ್ಟು, ನುಡಿದಂತೆ ನಡೆದಿದ್ದೇವೆ ಮತ ಕೊಡಿ ಎಂದರೆ, ಬಿಜೆಪಿಯು ದೇಶದ ರಕ್ಷಣೆಗೆ, ಅಭಿವೃದ್ಧಿಗೆ ಮೋದಿಯೇ ಗ್ಯಾರಂಟಿ, ಅವರನ್ನು ಮತ್ತೆ ಪ್ರಧಾನಿ ಮಾಡಲು ಮತ ಹಾಕಿ ಎನ್ನುತ್ತಿದೆ. ಕಾಂಗ್ರೆಸ್ ಪಕ್ಷ ಮಾಜಿ ಸಚಿವ, ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡಿದ್ದರೆ, ಬಿಜೆಪಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಿದೆ.

ಶಾಸಕರಾಗಿದ್ದಾಗ ಸದನಶೂರ ಎಂದೇ ಪ್ರಸಿದ್ದರಾಗಿದ್ದ ಹೆಗ್ಡೆ ಅವರಿಗೆ ಹಿಂದೆ ವಿಧಾನಸಭೆಗೆ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ಅನುಭವ, ಸ್ವಂತ ವರ್ಚಸ್ಸು ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನ ಗಳೂರಿನಲ್ಲಿ ಬಿಜೆಪಿ ಎಲ್ಲ 4 ಶಾಸಕರು ನೋಡು ಕಾಂಗ್ರೆಸ್ ಗೆದ್ದಿರುವುದು ಅವರಿಗೆ ಪ್ಲಸ್ ಆಗಲಿದೆ. ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ಸಿನ ಜೊತೆಗೆ, ನೆನಪಿಸುತ್ತಾ ಮತ ಕೇಳುತ್ತಿದ್ದಾರೆ. ದೆಹಲಿಯ ನಾಯಕ ನಿಗಲ್ಲ, ಕ್ಷೇತ್ರದಲ್ಲಿ ಗ್ಯಾರಂಟಿ ಕೆಲಸ ಮಾಡುವ ತನಗೆ ಮತ ನೀಡಿ ಎಂದು ಬಿಜೆಪಿಗೆ ಟಕ್ಕ‌ರ್ ಕೊಡುತ್ತಿದ್ದಾರೆ. ಗ್ರಾ.ಪಂ, ತಾ.ಪಂ, ಜಿ.ಪಂ.ನಿಂದ ವಿಧಾನ ಪರಿಷತ್ತಿನವರೆಗೆ ಹಂತಹಂತವಾಗಿ ಶ್ರೀನಿವಾಸ ಪೂಜಾರಿ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಕ್ಷೇತ್ರ ಬದಲಾಯಿಸಿದಾಗ, ಅನಿರೀಕ್ಷಿತವಾಗಿ ಕೋಟ ಅವರಿಗೆ ಟಿಕಟ್ ಒಲಿದಿದೆ. ಹಿಂದುತ್ವ ಮತ್ತು ಅಭಿವೃದ್ಧಿ ತನ್ನ ಅಜೆಂಡಾ, ಅದಕ್ಕಾಗಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಮತ ನೀಡಿ, ಮೋದಿ ಗೆದ್ದರೆ ಅಭಿವೃದ್ಧಿ ಗ್ಯಾರಂಟಿ ಎನ್ನುತ್ತಾ ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೌಂಟ‌ರ್ ಕೊಡುತ್ತಿದ್ದಾರೆ.

ಹಿಂದುತ್ವ ಉಳಿವಿಗಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ

ಕ್ಷೇತ್ರದ ರಾಜಕೀಯ ಇತಿಹಾಸ:

ಹೊಸದಾಗಿ ರೂಪುಗೊಂಡಿರುವ ಅರ್ಥ ಕರಾವಳಿ, ಇನ್ನರ್ಧ ಅರೆ ಮಲೆನಾಡು-ಬಯಲುಸೀಮೆ ಹೊಂದಿ ರುವ ಕ್ಷೇತ್ರ ಇದು. ಅದಕ್ಕೆ ಮೊದಲು ಉಡುಪಿ ಮತ್ತು ಚಿಕ್ಕದುಗಳೂರುದ್ರಕ್ಕೆ ಕಲೋಕಸಭಾಕ್ಷೇತ್ರಗಳಾಗಿದ್ದವು ಈ ಹೊಸ ಕ್ಷೇತ್ರದಲ್ಲಿ ಈವರೆಗೆ ನಡೆವಿರುವ 4 ಲೋಕಸಭಾ ಚುನಾವಣೆಯಲ್ಲಿ3 ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್ ಗೆದ್ದಿದೆ. ಕಳೆದ ಲೋಕಸಭಾ ಚುನಾವಣೆ ವೇಳೆಗೆ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ ಪ್ರಸ್ತುತ ಚಿಕ್ಕಮಗಳೂರಿನ 4 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದ್ದರೆ, ಉಡುಪಿಯ 4 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರಿನಲ್ಲಿ ಬಿಜೆಪಿ ಶೇ.62.46 ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ.32.09 ಮತ ಗಳಿಸಿತ್ತು. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ.47.50 ಮತ ಗಳಿಸಿದ್ದರೆ, ಕಾಂಗ್ರೆಸ್ ಶೇ.42.12 ಮತ ಗಳಿಸಿದ್ದು, ಬಲವರ್ಧನೆ ಮಾಡಿಕೊಂಡಿದೆ. ಇದು ಕಾಂಗ್ರೆಸ್ ಗೆ ಭರವಸೆ ಮೂಡಿಸಿದೆ.

ಹಳಿ ಸ್ಪರ್ಧಿಗಳ ಹೊಸ ಸ್ಪರ್ಧೆ: ಜಯಪ್ರಕಾಶ್ ಹೆಗ್ಡೆ

ಮತ್ತು ಕೋಟ ಶ್ರೀನಿವಾಸ ಪೂಜಾರಿ ಮುಖಾಮುಖಿ ಯಾಗುತ್ತಿರುವುದು ಇದೇ ಮೊದಲೇನಲ್ಲ, 2004 ಮತ್ತು 2009ರವಿ.ಚುನಾವಣೆಯಲ್ಲಿ ಹೆಗ್ಡೆ ಸ್ವತಂತ್ರವಾಗಿ ಗೆದ್ದಿದ್ದರೆ, ಕೋಟಬಿಜೆಪಿ ಅಭ್ಯರ್ಥಿಯಾಗಿ ಸೋತಿದ್ದರು. 2015ರಲ್ಲಿ ಪರಿಷತ್‌ ಚುನಾವಣೆಯಲ್ಲಿ ಕೋಟ ಬಿಜೆಪಿ ಯಿಂದ ಸ್ಪರ್ಧಿಸಿ ಗೆದ್ದರೆ, ಜಯಪ್ರಕಾಶ ಹೆಗ್ಡೆ ಅವರು ಕಾಂಗ್ರೆಸ್ ನಿಂದ ಬಂಡಾಯವಾಗಿ ಸ್ಪರ್ಧಿಸಿದ್ದರು.

ಉಡುಪಿಯಲ್ಲಿ ಜಿಲ್ಲವರ ಸಂಖ್ಯೆ ಹೆಚ್ಚಿದೆ. ಬಂಟರು, ಮೊಗವೀರರು ನಂತರದಲ್ಲಿದ್ದಾರೆ. ಆದ್ದರಿಂದಲೇ ಬಿಜೆಪಿ ಬಿಲ್ಲವ ಅಭ್ಯರ್ಥಿಯನ್ನು, ಕಾಂಗ್ರೆಸ್ ಬಂಟ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚಿಕ್ಕಮಗಳೂರಿನಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಉಭಯ ಜಿಲ್ಲೆಗಳಲ್ಲಿ ಪಜಾ-ಪ.ಪಂ.. ಹಿಂದು ಳಿದ ವರ್ಗಗಳೇ ನಿರ್ಣಾಯಕರು, ಅದರೆ ಯಾರ ಬೆಂಬಲ ಯಾರಿಗೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ.

ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿ

1993ರಲ್ಲಿ ಕೋಡುತಟ್ಟು ಗ್ರಾಪಂ ಸದಸ್ಯನಾಗಿ ರಾಜಕೀಯಕ್ಕೆ ಪ್ರದೇಶ, ನಂತರ ತಾ.ಪಂ, ಜಿಪಂ ಸದಸ್ಯರಾಗಿ, 2008ರಲ್ಲಿ ಗಳ ಪ್ರತಿನಿಧಿಯಾಗಿ ಆಯ್ಕೆಯಾದವರು. ಮುಜರಾಯಿ ಸಚಿವರಾಗಿ, ಹಿಂದುಳಿದ ವರ್ಗಗಳ ಮತ್ತು ಸಮಾಜಕಲ್ಯಾಣ ಸಚಿವರಾಗಿ ಕೆಲಸ ಮಾಡಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿದ್ದರು. ಪ್ರಸ್ತುತ ವಿಧಾನಪರಿಷತ್‌ನಲ್ಲಿ ವಿಪಕ್ಷ ನಾಯಕ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.

ಬಂಡಾಯವೆದ್ದಿರುವ ಕೆ.ಎಸ್. ಈಶ್ವರಪ್ಪ ನಮ್ಮ ಕಟ್ಟಾಳು; ಅರೆರೇ.. ನಳೀನ್ ಕುಮಾರ್ ಕಟೀಲ್ ಮಾತಿನ ಮರ್ಮವೇನು?

ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಅಭ್ಯರ್ಥಿ

ಕುಂದಾಪುರ ತಾಲೂಕಿನವರಾದ ಜಯಪ್ರಕಾಶ್ ಹೆಗ್ಡೆ, 30 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. 1994 ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಜನತಾ ಪಕ್ಷದಿಂದ ಗದ್ದು ಸಚಿವರಾಗಿದ್ದವರು ನಂತರ 2 ಬಾರಿ ಸ್ವತಂತ್ರವಾಗಿ ಸ್ಪರ್ಧಿಸಿ ಗದ್ದವರು. 2012ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಿ 20 ತಿಂಗಳು ಸಂಸದರಾಗಿದ್ದರು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ

ಕೇತ್ರದ ಮತದಾರರ ವಿವರ

ಪುರುಷರು 7.64,246
ಮಹಿಳೆಯರು 8.11,981
ಇತರರು 37
ಒಟ್ಟು 15,76,264

2019ರ ಫಲಿತಾಂಶ:

ಶೋಭಾ ಕರಂದ್ಲಾಜೆ(ಬಿಜೆಪಿ) 7,18,919, ಪ್ರಮೋದ್‌ ಮಧ್ವರಾಜ್‌(ಜೆಡಿಎಸ್‌)3,69,317

Follow Us:
Download App:
  • android
  • ios