ಡಿಜಿಎಂಒಗಳ ಮಾತುಕತೆ ನಂತರ, ಸಾಂಬಾದಲ್ಲಿ ಪಾಕಿಸ್ತಾನದ ಡ್ರೋನ್ ಅನ್ನು ಭಾರತ ಹೊಡೆದುರುಳಿಸಿದೆ.
ಪೂರ್ತಿ ಓದಿ- FB
- TW
- Linkdin
Follow Us
Operation Sindoor Live: ಸಾಂಬಾದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ
)
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಇಂದು ಸೋಮವಾರ ಕದನ ವಿರಾಮದ ಭವಿಷ್ಯದ ಕುರಿತು ಮಾತುಕತೆ ನಿಗದಿಯಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಹಾಟ್ಲೈನ್ ಮೂಲಕ ಈ ಸಭೆ ನಡೆಯಲಿದೆ. ಇದೀಗ ನಡೆಯಲಿರುವ ಮಾತುಕತೆಯಲ್ಲಿ ಕದನವಿರಾಮದ ಮರು ಜಾರಿ, ಸದ್ಯದ ಪರಿಸ್ಥಿತಿ ಮತ್ತು ಗಡಿಯಲ್ಲಿನ ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ. ಶನಿವಾರವಷ್ಟೇ ಕನದ ವಿರಾಮ ಪ್ರಸ್ತಾಪ ದೊಂದಿಗೆ ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದರು. ಇದರ ಬೆನ್ನಲ್ಲೇ ಸಂಜೆ 5 ಗಂಟೆಯಿಂದ ಸಮರ ವಿರಾಮ ಜಾರಿಯಾಗಿತ್ತು.
ಸಾಂಬಾದಲ್ಲಿ ಪಾಕ್ ಡ್ರೋನ್ ಹೊಡೆದುರುಳಿಸಿದ ಭಾರತ
ಮತ್ತೆ ಐಪಿಎಲ್-2025 ಪಂದ್ಯಗಳು ಆರಂಭ: ಹೊಸ ವೇಳಾಪಟ್ಟಿ ಇಲ್ಲಿದೆ
ಐಪಿಎಲ್ 2025, ಮೇ 17 ರಿಂದ ಮತ್ತೆ ಶುರುವಾಗಲಿದೆ. ಆರು ಕಡೆಗಳಲ್ಲಿ ಉಳಿದ ಪಂದ್ಯಗಳು ನಡೆಯಲಿವೆ.
ಪೂರ್ತಿ ಓದಿಪಾಕ್ನ ಡ್ರೋನ್, ಕ್ಷಿಪಣಿ ಭಾರತದ ಮುಂದೆ ಒಣಹುಲ್ಲಿನಂತೆ ಚದುರಿಹೋದವು; ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು
ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 'ಆಪರೇಷನ್ ಸಿಂದೂರ'ದ ಬಗ್ಗೆ ಮಾಹಿತಿ ನೀಡಿದ ಅವರು, ಭಾರತ ಪಾಕ್ ನಲ್ಲಿ ಉಗ್ರರ ನೆಲೆಗಳನ್ನ ಹೇಗೆ ಧ್ವಂಸ ಮಾಡಿತು ಮತ್ತು ಜಗತ್ತಿಗೆ ಭಾರತದ ಶಕ್ತಿಯನ್ನ ತೋರಿಸಿಕೊಟ್ಟಿತು ಎಂಬುದನ್ನ ವಿವರಿಸಿದರು.
ಪೂರ್ತಿ ಓದಿಆಪರೇಷನ್ ಸಿಂದೂರ: ಪಾಕಿಸ್ತಾನದ ಸೇನಾ ನೆಲೆಗಳಿಗೆ ಭಾರತದಿಂದ ಭಾರೀ ಹಾನಿ, ವಿಡಿಯೋ ಬಿಡುಗಡೆ
ಆಪರೇಷನ್ ಸಿಂದೂರದಲ್ಲಿ ಭಾರತವು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಹಾನಿ ಮಾಡಿದೆ. ಬಿಡುಗಡೆಯಾದ ವಿಡಿಯೋಗಳು ಈ ಕಾರ್ಯಾಚರಣೆಯ ವ್ಯಾಪ್ತಿ ಮತ್ತು ಪರಿಣಾಮವನ್ನು ತೋರಿಸುತ್ತವೆ. ಈ ಕಾರ್ಯಾಚರಣೆಯು ಭಾರತದ ರಕ್ಷಣಾ ಸಾಮರ್ಥ್ಯ ಮತ್ತು ಭಯೋತ್ಪಾದನೆ ವಿರೋಧಿ ನಿಲುವನ್ನು ಪ್ರದರ್ಶಿಸುತ್ತದೆ.
ಪೂರ್ತಿ ಓದಿಕಾಲ್ ಗರ್ಲ್ ಹೆಸರಿನಲ್ಲಿ ಯುವಕನಿಗೆ ₹1.39 ಲಕ್ಷ ವಂಚನೆ; ಪೊಲೀಸರ ಮುಂದೆಯೇ ಕಾಲಿಂಗ್, ಮೆಸೇಜಿಂಗ್!
ಎಸ್ಕಾರ್ಟ್ ಸೇವೆಗಾಗಿ ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದ ಯುವಕನಿಗೆ ₹1.39 ಲಕ್ಷ ವಂಚನೆಯಾಗಿದೆ. 'ಕಾಲ್ ಗರ್ಲ್' ಹೆಸರಿನಲ್ಲಿ ಅಪರಿಚಿತರಿಂದ ಹಂತ ಹಂತವಾಗಿ ಹಣ ಪಾವತಿಸುವಂತೆ ಒತ್ತಾಯಿಸಿ ವಂಚಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ತಿ ಓದಿಪತ್ರಿಕಾಗೋಷ್ಠಿ ವೇಳೆ ವಿರಾಟ್ ಕೊಹ್ಲಿ ನನ್ನ ಫೇವರೆಟ್ ಎಂದ ಡಿಜಿಎಂಒ ಲೆ.ಜ. ರಾಜೀವ್ ಘಾಯ್
ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯ ಕುರಿತು ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ವಿವರಿಸಿದರು. ಪಾಕಿಸ್ತಾನದ ದಾಳಿಗೆ ಪ್ರತಿದಾಳಿ ಕುರಿತು ಕ್ರಿಕೆಟ್ ಉದಾಹರಣೆ ನೀಡಿ, ಭಾರತದ ಗಡಿ ದಾಟುವುದು ಕಷ್ಟ ಎಂಬ ಸಂದೇಶ ರವಾನಿಸಿದರು. ಈ ವೇಳೆ ಕೊಹ್ಲಿ ಎಲ್ಲರಂತೆ ನನ್ನ ಪೇವರೆಟ್ ಎಂದರು.
ಪೂರ್ತಿ ಓದಿಯಾವುದೇ ಪರಮಾಣು ಬೆದರಿಕೆಯನ್ನು ಭಾರತ ಸಹಿಸಲ್ಲ: ಪ್ರಧಾನಿ ನರೇಂದ್ರ ಮೋದಿ
PM Narendra Modi And Operation Sindoor: ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಾಚರಣೆ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಆಪರೇಷನ್ ಸಿಂದೂರ ಕುರಿತು ಪ್ರಧಾನಿಗಳು ಹೇಳಿದ್ದೇನು ಎಂಬುದರ ಮಾಹಿತಿ ಇಲ್ಲಿದೆ.
ಪೂರ್ತಿ ಓದಿನಾವು ಪರಮಾಣು ಯುದ್ಧ ನಿಲ್ಲಿಸಿದ್ದೇವೆ: ಡೊನಾಲ್ಡ್ ಟ್ರಂಪ್ ಅಚ್ಚರಿ ಹೇಳಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಸಂಘರ್ಷವನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ. ಉಪರಾಷ್ಟ್ರಪತಿ ಜೆಡಿ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪೂರ್ತಿ ಓದಿಕಿರಾನಾ ಬೆಟ್ಟದ ಮೇಲೆ ಭಾರತದ ದಾಳಿ ತಳ್ಳಿ ಹಾಕಿದ ಸೇನೆ, ಆ ಬೆಟ್ಟ ಪಾಕಿಸ್ತಾನಕ್ಕೆ ಅಷ್ಟು ಮುಖ್ಯ ಏಕೆ?
ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿದೆ ಎಂಬ ವದಂತಿಗಳನ್ನು ಭಾರತ ತಳ್ಳಿಹಾಕಿದೆ. ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಯಾವುದೇ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಿರಾನಾ ಬೆಟ್ಟ ಪಾಕಿಸ್ತಾನದ ಪರಮಾಣು ಶಸ್ತ್ರಾಗಾರದ ಒಂದು ಭಾಗವನ್ನು ಹೊಂದಿದೆ ಎಂದು ಹೇಳಲಾಗುತ್ತದೆ.
ಪೂರ್ತಿ ಓದಿಉಗ್ರ ತಹಾವುರ್ ರಾಣಾ, ಛೋಟಾ ರಾಜನ್ ಇರೋ ತಿಹಾರ್ ಜೈಲಿನ ಭದ್ರತೆ ಹೆಚ್ಚಳ
ಆಪರೇಷನ್ ಸಿಂದೂರ್ ನಂತರ, ದೆಹಲಿಯ ತಿಹಾರ್ ಜೈಲಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಪಾಯಕಾರಿ ಕೈದಿಗಳ ಮೇಲೆ ನಿಗಾ ಇಡಲಾಗುತ್ತಿದೆ.
ಪೂರ್ತಿ ಓದಿಭಾರತದ ಕ್ಷಿಪಣಿ ಹೊಡೆತಕ್ಕೆ ಪಾಕ್ ಏರ್ಬೇಸ್ನಲ್ಲಿ ಕೆರೆಯಂಥ ಹೊಂಡ : ಸೇನೆಯಿಂದ ವೀಡಿಯೋ ರಿಲೀಸ್
ಭಾರತದ ಕ್ಷಿಪಣಿ ದಾಳಿಯ ನಂತರ ಪಾಕಿಸ್ತಾನದ ನೂರ್ ಖಾನ್ ಏರ್ಬೇಸ್ ಹಾಗೂ ರಹೀಮ್ ಯಾರ್ ಖಾನ್ ಏರ್ಬೇಸ್ನ ಪ್ರಸ್ತುತ ಹೇಗಾಗಿವ ನೋಡಿ, ಭಾರತೀಯ ಭದ್ರತಾ ಪಡೆ ಬಿಡುಗಡೆ ಮಾಡಿದ ವೀಡಿಯೋ ಇಲ್ಲಿದೆ.
ಪೂರ್ತಿ ಓದಿಸ್ಥಗಿತಗೊಂಡಿದ್ದ 32 ಏರ್ಪೋರ್ಟ್ ರೀ ಓಪನ್, ಆದ್ರೆ ಪ್ರಯಾಣಿಕರು ಈ ನಿಯಮ ಪಾಲಿಸಲೇಬೇಕು
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕಡಿಮೆಯಾದ ನಂತರ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳನ್ನು ಪುನಃ ತೆರೆಯಲಾಗಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ಏರ್ಲೈನ್ಗಳೊಂದಿಗೆ ಪರಿಶೀಲಿಸಬೇಕು.
ಪೂರ್ತಿ ಓದಿಅಣ್ವಸ್ತ್ರ ಹೊಂದಿರುವ ರಾಷ್ಟ್ರದ ಮೇಲೆ ದಾಳಿ ಮಾಡಿದ ಮೊದಲ ದೇಶ ಭಾರತ
ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನದ ಮೇಲೆ ಭಾರತ ದಾಳಿ ಮಾಡಿ, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರತ್ಯುತ್ತರ ನೀಡಿದೆ. ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಾದ ನೂರ್ ಖಾನ್ ಮತ್ತು ರಾವಲ್ಪಿಂಡಿಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತು. ಕದನವಿರಾಮ ಘೋಷಣೆಯಾದ ನಂತರವೂ ಪಾಕಿಸ್ತಾನದಿಂದ ಭಾರತದ ಮೇಲೆ ದಾಳಿ ಮುಂದುವರೆದಿದೆ.
ಪೂರ್ತಿ ಓದಿಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು
ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ.
ಪೂರ್ತಿ ಓದಿಪಾಕಿಗಳ ಮೇಲೆ ಪ್ರಕೃತಿಗೂ ಮುನಿಸು! ಉಗ್ರರ ನೆಲೆ ಛಿದ್ರಗೊಳ್ತಿದ್ದಂತೆಯೇ ಹಲವೆಡೆ ಭೂಕಂಪ...
ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿತು. ಅದೇ ಸಮಯದಲ್ಲಿ ಪಾಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಪಾಪಿಗಳಿಗೆ ಪ್ರಕೃತಿಯೇ ನೀಡುತ್ತಿದೆ ಶಾಪ... ಇಲ್ಲಿದೆ ಡಿಟೇಲ್ಸ್...
ಪೂರ್ತಿ ಓದಿಸೌದಿಯಲ್ಲಿ ಮಲಯಾಳಿ ಜೋಡಿ ದುರ್ಮರಣ; ಮೃತದೇಹ ವಾಪಸಾತಿಗೆ ಪರದಾಟ!
ಸೌದಿ ಅರೇಬಿಯಾದಲ್ಲಿ ನಡೆದ ವಾಹನ ಅಪಘಾತದಲ್ಲಿ ಮೃತಪಟ್ಟ ಮಲಯಾಳಿ ನರ್ಸ್ ಮತ್ತು ಆಕೆಯ ನಿಶ್ಚಿತಾರ್ಥ ಮಾಡಿಕೊಂಡ ವರನ ಮೃತದೇಹಗಳನ್ನು ತವರಿಗೆ ಕಳುಹಿಸಲು ಪ್ರಯತ್ನಗಳು ನಡೆಯುತ್ತಿವೆ. ಮೃತದೇಹಗಳು ಸುಟ್ಟುಹೋಗಿದ್ದರಿಂದ ಗುರುತಿಸುವಿಕೆ ಸಂಕೀರ್ಣವಾಗಿತ್ತು.
ಪೂರ್ತಿ ಓದಿಪಾಕಿಸ್ತಾನ ಭಯೋತ್ಪಾದಕರಿಗಾಗಿ ನಮ್ಮೊಂದಿಗೆ ಕಾದಾಟಕ್ಕಿಳಿದಿದ್ದು ದುರಾದೃಷ್ಟಕರ: ಏರ್ ಮಾರ್ಷಲ್ ಎ.ಕೆ. ಭಾರ್ತಿ
ಭಾರತ ಮತ್ತು ಪಾಕಿಸ್ತಾನದ DGMOಗಳ ನಡುವಿನ ಮಾತುಕತೆಯನ್ನು ಸಂಜೆಗೆ ಮುಂದೂಡಲಾಗಿದೆ. ಇತ್ತ ಭಾರತದ ಅಧಿಕಾರಿಗಳು ಆಪರೇಷನ್ ಸಿಂದೂರ್ನ ಇಂಚಿಂಚು ವಿವರವನ್ನು ವೀಡಿಯೋ ಸಹಿತ ನೀಡುತ್ತಿದ್ದಾರೆ.
ಪೂರ್ತಿ ಓದಿಅಣ್ವಸ್ತ್ರ ಇದೆ ಎಂದು ಹೆದರಿಸ್ತಿರೋ ಪಾಕ್, ಕದನ ವಿರಾಮಕ್ಕೆ ಕಾಲು ಹಿಡಿದಿದ್ದೇಕೆ? ಅಸಲಿ ಸ್ಟೋರಿನೇ ಬೇರೆ!
ಅಣ್ವಸ್ತ್ರ ಇದೆ ಎಂದು ಮೊದಲಿಂದಲೂ ಹೇಳ್ತಿರೋ ಪಾಕ್, ಕದನ ವಿರಾಮಕ್ಕೆ ಅಮೆರಿಕದ ಕಾಲು ಹಿಡಿದಿದ್ದೇಕೆ? ಅಸಲಿಗೆ ಇರೋ ಸ್ಟೋರಿನೇ ಬೇರೆ! ಇಲ್ಲಿದೆ ನೋಡಿ ಡಿಟೇಲ್ಸ್
ಪೂರ್ತಿ ಓದಿಭಯೋತ್ಪಾದಕರಿಗೆ ಪಾಕಿಸ್ತಾನವೇ ತಾಯಿ, ಅಲ್ಲಿನ ಸೇನೆಯೇ ನಿರ್ವಾಹಕ ಅವು ಬೇರೆ ಬೇರೆ ಅಲ್ಲ!
: ಪಾಕಿಸ್ತಾನವೂ ಭಯೋತ್ಪಾದಕರ ತಾಯಿ, ಪಾಕಿಸ್ತಾನದ ಸೇನೆಯೇ ಇದರ ಹ್ಯಾಂಡಲರ್ ಎಂಬುದನ್ನು ಭಾರತ ಇಡೀ ಜಗತ್ತಿನ ಮುಂದೆ ಬಯಲು ಮಾಡಿದ್ದು, ಭಯೋತ್ಪಾದಕ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಪಾಕಿಸ್ತಾನದ ಸೇನೆಯ ಅಧಿಕಾರಿಗಳನ್ನು ಜಾಗತಿಕ ಭಯೋತ್ಪಾದಕರು ಎಂದು ಗುರುತಿಸಲು ಆಗ್ರಹಿಸಿದೆ
ಪೂರ್ತಿ ಓದಿಪ್ರಸಿದ್ಧಿಗಾಗಿ ಪಾಕಿಸ್ತಾನ ಬೆಂಬಲಿಸಿದ ಯೂಟೂಬರ್ ಬಿಯರ್ ಬೈಸೆಪ್ಸ್ ರಣವೀರ್ ಅಲ್ಲಾಬಾದಿಯಾ!
ಯೂಟ್ಯೂಬರ್ ರಣವೀರ್ ಅಲ್ಲಾಹಾಬಾದಿಯಾ ಪಾಕಿಸ್ತಾನದ ಬೆಂಬಲಕ್ಕೆ ನಿಂತು ವಿವಾದಕ್ಕೆ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಂತರ ಅಳಿಸಿದ್ದಾರೆ. ಪೋಸ್ಟ್ನಲ್ಲಿ ಪಾಕಿಸ್ತಾನಿಯರ ಪರ 'ಸಹೋದರ ಸಹೋದರಿಯರೆ' ಎಂಬ ಪದ ಬಳಸಿ ಕ್ಷಮೆ ಕೇಳಿದ್ದಾರೆ.
ಪೂರ್ತಿ ಓದಿ