Pakistan ಬೀದಿಗೆ ಬಂದು ಪ್ರತಿಭಟಿಸಿ ಎಂದು ಕರೆಕೊಟ್ಟ ಪಾಕ್ ಪ್ರಧಾನಿ ಇಮ್ರಾನ್ ಖಾನ್!

Published : Apr 02, 2022, 09:34 PM ISTUpdated : Apr 02, 2022, 09:41 PM IST
Pakistan ಬೀದಿಗೆ ಬಂದು ಪ್ರತಿಭಟಿಸಿ ಎಂದು ಕರೆಕೊಟ್ಟ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಸಾರಾಂಶ

ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)ನ ಹಲವು ಸಂಸದರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ನಿಂತಿರುವುದರಿಂದ, ಪ್ರಧಾನಿ ವಿರುದ್ಧದ ಅವಿಶ್ವಾಸ ನಿರ್ಣಯ ಯಶಸ್ವಿಯಾಗಲಿದೆ ಎಂದು ಪಾಕಿಸ್ತಾನದ ಪ್ರತಿಪಕ್ಷಗಳು ವಿಶ್ವಾಸ ವ್ಯಕ್ತಪಡಿಸಿವೆ.  

ನವದೆಹಲಿ (ಏ. 2): ವಿದೇಶಿ ಪಿತೂರಿಗಳು (foreign conspirators) ಇಸ್ಲಾಮಾಬಾದ್ ನಾಯಕತ್ವವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಮತ್ತೊಮ್ಮೆ ಒತ್ತಿಹೇಳಿರುವ ನಿರ್ಗಮನದ ಅಂಚಿನಲ್ಲಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Pakistan Prime Minister Imran Khan ) ಅವರು ಅವಿಶ್ವಾಸ ನಿರ್ಣಯದ ( no-trust vote) ವಿರುದ್ಧ ಬೀದಿಗಿಳಿಯುವಂತೆ ಶನಿವಾರ ತಮ್ಮ ದೇಶವಾಸಿಗಳಿಗೆ ಕರೆ ನೀಡಿದ್ದಾರೆ.

ಪಾಕಿಸ್ತಾನದ ಯಾವುದೇ ಪ್ರಧಾನಿ ಈವರೆಗೂ ಪೂರ್ಣಾವಧಿಯನ್ನು ಪೂರ್ಣಗೊಳಿಸಿಲ್ಲ ಮತ್ತು 2018 ರಲ್ಲಿ ಚುನಾಯಿತರಾದ ನಂತರ ಇಮ್ರಾನ್ ಖಾನ್ ಅವರು ತಮ್ಮ ಆಡಳಿತದಲ್ಲಿ ಈವರೆಗಿನ ದೊಡ್ಡ ಸವಾಲನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳು ಇಮ್ರಾನ್ ಖಾನ್ ಸರ್ಕಾರವನ್ನು ಆರ್ಥಿಕ ದುರುಪಯೋಗ ಮತ್ತು ವಿದೇಶಾಂಗ ನೀತಿಯಲ್ಲಿ ದೊಡ್ಡ ಮಟ್ಟದ ಅಪರಾಧ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

"ಅವರನ್ನು ಹೇಗೆ ಎದುರಿಸಬೇಕೆಂದು ನಾನು ಯೋಜಿಸುತ್ತಿದ್ದೇನೆ. ಇನ್ಶಾ ಅಲ್ಲಾ (ದೇವರ ಇಚ್ಛೆ), ನಾಳೆ ನಾನು ಅವರನ್ನು ಹೇಗೆ ಎದುರಿಸುತ್ತೇನೆ ಎಂದು ನೀವು ನೋಡುತ್ತೀರಿ. ನನ್ನ ಜನರು ಜಾಗರೂಕರಾಗಿರಬೇಕು, ಜೀವಂತವಾಗಿರಬೇಕು ಎಂದು ನಾನು ಬಯಸುತ್ತೇನೆ. ಅಂತಹ ಘಟನೆಗಳು ಹಾಗೇನಾದರೂ ಬೇರೆ ದೇಶದಲ್ಲಿ ನಡೆದಿದ್ದರೆ, ಜನರು ಬೀದಿಗಿಳಿಯುತ್ತಿದ್ದರು' ಎಂದು ಹೇಳಿದ್ದಾರೆ.

"ಇಂದು ಮತ್ತು ನಾಳೆ ಬೀದಿಗಿಳಿಯಲು ನಾನು ನಿಮ್ಮೆಲ್ಲರಿಗೂ ಕರೆ ನೀಡುತ್ತೇನೆ. ನಿಮ್ಮ ಆತ್ಮಸಾಕ್ಷಿಗಾಗಿ, ಈ ರಾಷ್ಟ್ರದ ಹಿತಾಸಕ್ತಿಗಾಗಿ ನೀವು ಹಾಗೆ ಮಾಡಬೇಕು. ಯಾವುದೇ ಪಕ್ಷವು ನಿಮ್ಮನ್ನು ಹಾಗೆ ಮಾಡಲು ಒತ್ತಾಯಿಸಬಾರದು. ನೀವು ಭವಿಷ್ಯಕ್ಕಾಗಿ ಬೀದಿಗಿಳಿಯಬೇಕು. ನಿಮ್ಮ ಮಕ್ಕಳ ಬಗ್ಗೆ. ನೀವೆಲ್ಲರೂ ಹೊರಗೆ ಹೋಗಿ ನೀವು ಜಾಗರೂಕರಾಗಿದ್ದೀರಿ ಎಂದು ತೋರಿಸಬೇಕು" ಎಂದು ಇಮ್ರಾನ್ ಖಾನ್ ಖಾಸಗಿ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲ್ಲ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

ಕಳೆದ ವಾರ 342 ಸದಸ್ಯರ ಅಸೆಂಬ್ಲಿಯಲ್ಲಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು (ಪಿಟಿಐ) (Pakistan Tehreek-e-Insaf party)ತನ್ನ ಬಹುಮತವನ್ನು ಕಳೆದುಕೊಂಡಿದೆ. 1992 ರಲ್ಲಿ ಪಾಕಿಸ್ತಾನದ ಏಕೈಕ ವಿಶ್ವಕಪ್ ಗೆಲುವಿಗೆ ನಾಯಕರಾಗಿದ್ದ ಮಾಜಿ ಅಂತರರಾಷ್ಟ್ರೀಯ ಕ್ರಿಕೆಟ್ ತಾರೆ, ಇಮ್ರಾನ್ ಖಾನ್ ಅವರು ತಾವಿನ್ನೂ ಹೋರಾಟದಲ್ಲಿ ಉಳಿದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಸುಮ್ಮನೆ ರಾಜೀನಾಮೆ ನೀಡುವುದಿಲ್ಲ ಎಂದಿದ್ದರು.

ನಾಳೆಯ ಬಗ್ಗೆ ನನ್ನ ಬಳಿ ಪ್ಲಾನ್ ಇದೆ, ನೀವು ಚಿಂತಿಸಬೇಡಿ, ನಾನು ಅವರನ್ನು ಅಸೆಂಬ್ಲಿಯಲ್ಲಿ ಇದನ್ನು ಎದುರಾಳಿಗಳಿಗೆ ತೋರಿಸುತ್ತೇನೆ ಮತ್ತು ಸೋಲಿಸುತ್ತೇನೆ ಎಂದಿದ್ದಾರೆ. ಹತ್ತಕ್ಕೂ ಹೆಚ್ಚು ಪಿಟಿಐ ಶಾಸಕರು ತಾವು ಕ್ರಾಸ್ ವೋಟ್ ಮಾಡುವುದಾಗಿ ಸೂಚಿಸಿದ್ದಾರೆ, ಆದರೂ ಪಕ್ಷದ ನಾಯಕರು ಇವರುಗಳು ಮತದಾನ ಮಾಡದಂತೆ ತಡೆಯಲು ಪ್ರಯತ್ನಿಸಿದ್ದಾರೆ.
ಆಡಳಿತಾರೂಢ ಪಿಟಿಐನ ಅನೇಕ ಶಾಸಕರು ಪ್ರಧಾನಿ ಖಾನ್ ವಿರುದ್ಧ ಬಹಿರಂಗವಾಗಿ ಬಂದಿರುವುದರಿಂದ ತನ್ನ ಪ್ರಸ್ತಾವನೆಗೆ ಜಯ ಸಿಗಲಿದೆ ಎಂದು ಪ್ರತಿಪಕ್ಷವು ವಿಶ್ವಾಸ ಹೊಂದಿದೆ. ಬಹುಮತ ಕಳೆದುಕೊಂಡರೂ ರಾಜೀನಾಮೆ ನೀಡುವುದಿಲ್ಲ ಎಂದು ಧಿಕ್ಕರಿಸಿದ ಇಮ್ರಾನ್ ಖಾನ್ ಅವರು "ಕೊನೆಯ ಎಸೆತದವರೆಗೂ ಹೋರಾಡುತ್ತೇನೆ" ಎಂದು ಹೇಳಿದ್ದಲ್ಲದೆ, ಭಾನುವಾರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತ ಯುದ್ಧವನ್ನು ಎದುರಿಸುವುದಾಗಿ ಹೇಳಿದ್ದಾರೆ.

Imran Khan ಎಂಕ್ಯೂಎಂ ಪಕ್ಷದ ಬೆಂಬಲ ವಾಪಸ್, ಅವಿಶ್ವಾಸಕ್ಕೂ ಮುನ್ನವೇ ಇಮ್ರಾನ್ ರಾಜೀನಾಮೆ ಗುಸುಗುಸು!
ಪ್ರಮುಖ ಮಿತ್ರ ಪಕ್ಷವಾದ ಎಂಕ್ಯೂಎಂ, ವಿರೋಧ ಪಕ್ಷವಾದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (PPP) ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ ಮತ್ತು 342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ಮತವನ್ನು ಬೆಂಬಲಿಸುವುದಾಗಿ ಘೋಷಿಸಿದೆ. "ಅವಧಿಪೂರ್ವ ಚುನಾವಣೆಗಳು ಅತ್ಯುತ್ತಮ ಆಯ್ಕೆಯಾಗಿದೆ ಎಂದು ನಾನು ಹೇಳಿದ್ದೇನೆ ... ನಾನು ಎಂದಿಗೂ ರಾಜೀನಾಮೆ ನೀಡುವ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ... ಮತ್ತು ಅವಿಶ್ವಾಸ ನಿರ್ಣಯಕ್ಕಾಗಿ ನಾನು ಕೊನೆಯ ಕ್ಷಣದವರೆಗೂ ಹೋರಾಡುತ್ತೇನೆ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!