
ಕೊಲಂಬೋ: ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀಲಂಕಾ ಭೇಟಿ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿ ಭಾರತ ಹಾಗೂ ಶ್ರೀಲಂಕಾ ರಕ್ಷಣಾ ಒಪ್ಪಂದ ಹಾಗೂ ಇಂಧನ ಕೇಂದ್ರ ಸ್ಥಾಪನೆ ಒಪ್ಪಂದ ಸೇರಿ 7 ಒಡಂಬಡಿಕೆಗೆ ಸಹಿ ಹಾಕಿವೆ. ಇವು ಈ ಪ್ರದೇಶದಲ್ಲಿ ಚೀನಾ ಪ್ರಭಾವ ತಗ್ಗಿಸಲು ಸಹಕಾರಿಯಾಗಲಿವೆ. ಲಂಕಾ ಅಧ್ಯಕ್ಷ ಅನುರಕುಮಾರ ದಿಸ್ಸಾನಾಯಕೆ ಜತೆಗಿನ ಭೇಟಿ ವೇಳೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ರಕ್ಷಣಾ ಒಪ್ಪಂದದ ಸ್ವರೂಪವೇನು ಎಂಬುದನ್ನು ಎರಡೂ ದೇಶಗಳು ಬಹಿರಂಗಪಡಿಸಿಲ್ಲ. ಆದರೆ ಲಂಕಾದಲ್ಲಿ ಭಾರತ 35 ವರ್ಷ ಹಿಂದೆ ಶಾಂತಿ ಪಡೆಗಳನ್ನು ನಿಯೋಜಿಸಿದ ನಂತರದ ಮಹತ್ವದ ಒಪ್ಪಂದ ಇದಾಗಿದೆ.
ಇದೇ ವೇಳೆ ಭಾರತಕ್ಕೆ ಹತ್ತಿರ ಇರುವ ಟ್ರಿಂಕೋಮಲಿ ಬಂದರನ್ನು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇಲ್ಲಿ ಯುಎಇ ಜತೆಗೂಡಿ ಭಾರತ ಇಂಧನ ಕೇಂದ್ರ ಅಭಿವೃದ್ಧಿಪಡಿಸಲಿದೆ. ಇಲ್ಲಿ ಇಂಡಿಯನ್ ಆಯಿಲ್ ತನ್ನ ತೈಲ ಕೇಂದ್ರ ಸ್ಥಾಪನೆ ಮಾಡುವ ನಿರೀಕ್ಷೆ ಇದೆ. ಇದರ ಜತೆಗೆ ಟ್ರಿಂಕೋಮಲಿಯು ಸಾಗರ ತಳದ ಸಂಶೋಧನೆ, ಭಾರತದ ಹಡಗು ಲಂಗರು ಹಾಕಲು ಸಹಕಾರಿ ಆಗಲಿದೆ.
ಈಗಾಗಲೇ ಲಂಕಾದ ಹಂಬನ್ತೋಟ ಬಂದರನ್ನು ಚೀನಾ ಅಭಿವೃದ್ಧಿಪಡಿಸಿ ತನ್ನ ಪ್ರಭಾವ ಹೊಂದಿದೆ. ಆದರೆ ಭಾರತದ ಹೊಸ ನಡೆಯು ಲಂಕಾದಲ್ಲಿನ ಚೀನಾ ಪ್ರಭಾವ ತಗ್ಗಿಸಲಿದೆ. ಇದನ್ನು ವ್ಯೂಹಾತ್ಮಕ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಕ್ರಮವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಮೋದಿ - ಯೂನುಸ್ ಭೇಟಿ: ಹೊಸ ದಿಕ್ಕಿನಲ್ಲಿ ಮೊದಲ ಹೆಜ್ಜೆ?
ಭಾರತ-ಶ್ರೀಲಂಕಾ ಒಪ್ಪಂದಗಳು:
ಇದನ್ನೂ ಓದಿ: Trump tax war: ತೆರಿಗೆ ಏರಿಕೆ ಮೊದಲೇ ವಸ್ತುಗಳ ಖರೀದಿಗೆ ಮುಗಿಬಿದ್ದ ಅಮೆರಿಕನ್ನರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ