'ಆಪರೇಷನ್​ ಸಿಂದೂರ್'​ನಲ್ಲಿ ಫ್ರೆಷ್ ಬಾಡಿ ಸಿಗತ್ತೆ ಅಂದ್ಕೊಂಡೆ! ಪಾಕ್​ ನಕ್ಷೆ ತೋರಿ ಖಾನ್​ ಸರ್ ಹೇಳಿದ್ದು ಕೇಳಿ

Published : Mar 26, 2026, 02:11 PM IST
Khan Sir about Pakistan

ಸಾರಾಂಶ

ಖಾನ್ ಸರ್, ತಮ್ಮ ವಿಶಿಷ್ಟ ಬೋಧನಾ ಶೈಲಿಯಿಂದ ಪ್ರಸಿದ್ಧರಾದ ಶಿಕ್ಷಣತಜ್ಞ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಪಾಕಿಸ್ತಾನದ ನಕ್ಷೆಯನ್ನು ನಾಯಿಗೆ ಹೋಲಿಸಿ, ಅವರ ಬುದ್ಧಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಈ ಮಾತುಗಳು ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.

ಖಾನ್​ ಸರ್​ ಎಂದ್ರೆ ಸಾಕು, ವಿದ್ಯಾರ್ಥಿಗಳಿಗಂತೂ ಸಿಕ್ಕಾಪಟ್ಟೆ ಅಚ್ಚುಮೆಚ್ಚು. ಬಹಳ ಕಠಿಣ ವಿಷಯಗಳನ್ನು ಮಕ್ಕಳಿಗೆ ಅರ್ಥ ಆಗುವ ರೀತಿಯಲ್ಲಿ ಯುಟ್ಯೂಬ್​ನಲ್ಲಿ ವಿವರಿಸುವ ಮೂಲಕ ಅದ್ಭುತವಾಗಿ ಪಾಠ ಮಾಡುವ ಕೌಶಲ ಇವರದ್ದು. ಇವರು ಬಿಹಾರದ ಪಾಟ್ನಾದವರಾಗಿದ್ದು, ಶಿಕ್ಷಣತಜ್ಞರಾಗಿ ಫೇಮಸ್​ ಆಗಿದ್ದಾರೆ. ಭಾರತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಕೋಚಿಂಗ್ ಕ್ಲಾಸ್​​ ಮೂಲಕ ಎಲ್ಲರ ಫೆವರೆಟ್​ ಆಗಿದ್ದಾರೆ. ಇದೀಗ ಅವರು ಪಾಕಿಸ್ತಾನದ ನಕ್ಷೆಯನ್ನು ತೋರಿ ಕುತೂಹಲದ ವಿಷಯವನ್ನು ತೆರೆದಿಟ್ಟಿದ್ದಾರೆ.

ನಕ್ಷೆಯಂತೆಯೇ ಬುದ್ಧಿ

ks__research ಇನ್​ಸ್ಟಾಗ್ರಾಮ್​ನಲ್ಲಿ ಇವರ ಸಂದರ್ಶನ ಶೇರ್​ ಮಾಡಲಾಗಿದೆ. ಇದರಲ್ಲಿ ಅವರು ಬಹುತೇಕ ಜನರಿಗೆ ಗೊತ್ತಿಲ್ಲದ ಪಾಕಿಸ್ತಾನದ ನಕ್ಷೆಯನ್ನು ತೋರಿದ್ದಾರೆ. ಇದು ನಾಯಿಯ ಶೇಪ್​ನಲ್ಲಿ ಇದೆ. ಆದರೆ ನಾಯಿ ಎನ್ನುವುದು ನಿಯತ್ತಿನ ಸಂಕೇತವಾಗಿದೆ. ಇದರ ಹೊರತಾಗಿಯೂ ಇದನ್ನು ಕೆಟ್ಟ ಶಬ್ದವಾಗಿಯೂ ಬಳಕೆ ಮಾಡಲಾಗುತ್ತದೆ. ಇದನ್ನೇ ಹೇಳಿರುವ ಖಾನ್​​ ಸರ್​, ಬೀದಿನಾಯಿಗಳ ಬುದ್ಧಿಯೇ ಪಾಕಿಗಳಿಗೆ ಇರುವುದು, ಇದೇ ಕಾರಣಕ್ಕೆ ಇದರ ನಕ್ಷೆ ನಾಯಿಯಂತೆ ಇದೆ ಎಂದು ನೇರಾನೇರವಾಗಿ ಹೇಳಿದ್ದಾರೆ.

ಫ್ರೆಷ್​ ಬಾಡಿ

ಆಗ ಸಂದರ್ಶಕ, ನೀವು ಪಾಕಿಸ್ತಾನದ ಬಗ್ಗೆ ಈ ರೀತಿ ಮಾತನಾಡುತ್ತೀರಲ್ಲ, ನಿಮಗೆ ಬೆದರಿಕೆಗಳು ಬರಲ್ವಾ ಎಂದು ಪ್ರಶ್ನಿಸಿದಾಗ, ನನಗೆ ಸಾಧ್ಯವಾಗಿದ್ದರೆ ಇವರೆಲ್ಲರನ್ನೂ ಒಟ್ಟಿಗೇ ಮುಗಿಸಿ ಹೂತು ಹಾಕುತ್ತಿದ್ದೆ ಎಂದಿದ್ದಾರೆ. ಆಪರೇಷನ್​ ಸಿಂದೂರ್​ ಬಗ್ಗೆ ಮಾತನಾಡಿರುವ ಖಾನ್ ಸರ್​ ಅವರು, ನಾನು ಆಪರೇಷನ್​ ಸಿಂದೂರ್​ ಮಾಡಿದಾಗ, ಪಾಕಿಸ್ತಾನದಿಂದ ಕೆಲವೊಂದು ಫ್ರೆಷ್​ ಬಾಡಿಗಳು ಬಂದು ನಮ್ಮ ಭಾರತದ ಪ್ರಯೋಗಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಸಿಗತ್ತೆ ಅಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಹಾಗಾಗಿದ್ದರೆ ಚೆನ್ನಾಗಿತ್ತು ಎಂದು ಹೇಳಿದ್ದಾರೆ.

ನೆಟ್ಟಿಗರ ಮಾತು

ಈ ಮೂಲಕ ಭಾರತದಲ್ಲಿ ಇದ್ದುಕೊಂಡೇ ಪಾಕಿಸ್ತಾನದ ಉಗ್ರರಿಗೆ ಸಪೋರ್ಟ್ ಮಾಡುವ, ಪಾಕಿಗಳ ಬೆಂಬಲಕ್ಕೆ ನಿಲ್ಲುವ, ಪಾಕಿಸ್ತಾನದ ಜಿಂದಾಬಾದ್​ ಎನ್ನುವ ಘೋಷಣೆ ಮಾಡಿದರೂ, ಮತಗಳ ಓಲೈಕೆಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವ ಕೆಲ ರಾಜಕಾರಣಿಗಳು, ಭಾರತದ ನೆಲದಲ್ಲಿ ನೆಮ್ಮದಿಯಿಂದ ಇದ್ದು, ಇಲ್ಲಿಯ ಎಲ್ಲಾ ಸೌಲಭ್ಯಗಳನ್ನು ಪಡೆದು ಪಾಕಿಸ್ತಾನಕ್ಕೆ ಬೆಂಬಲಿಸುವವರಿಗೆ ಖಾನ್​ ಸರ್​ ಅವರ ಈ ಮಾತು ಅನ್ವಯ ಆಗುತ್ತದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೋಟ್‌ಗೆ ಏರುವ ವೇಳೆ ಪದ್ಮಾ ನದಿಗುರುಳಿದ ಬಸ್ : 25 ಜನರ ದಾರುಣ ಸಾವು
ಯುದ್ಧದ ನಡುವೆ ಆಗಸದಲ್ಲಿ ಭಯಾನಕ ಕಾಗೆಗಳು! ಇದೆಂಥ ಮುನ್ಸೂಚನೆ? ಮುನ್ನೆಲೆಗೆ ಬಂದ ಸಿಎಂ ಕಾರಿನ ಸ್ಟೋರಿ