
ಗಾಜಾ(ಮೇ.21): ಹಮಾಸ್ ಉಗ್ರರನ್ನು ಸದೆಬಡೆಯಲು ಇಸ್ರೇಲ್ ಸತತ 11 ದಿನಗಳ ಕಾಲ ಗಾಜಾ ಪಟ್ಟಿಯಲ್ಲಿ ನಡೆಸಿದ ಕದನ ಇಂದು(ಮೇ.21) ಅಂತ್ಯಗೊಂಡಿದೆ. ಈಜಿಪ್ಟ್ ಮಧ್ಯಪ್ರವೇಶದಿಂದ ಇಸ್ರೇಲ್ ಕದನ ವಿರಾಮ ಘೋಷಿಸಿದೆ. ಇತ್ತ ಹಮಾಸ್ ಹೋರಾಟ ಅಂತ್ಯಗೊಳಿಸಲು ಒಪ್ಪಿಕೊಂಡಿದ್ದು, ಇಂದು ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಜಾರಿಯಾಗಿದೆ.
ಇಸ್ರೇಲ್ ವಾಯುದಾಳಿಗೆ ಗಾಜಾದಲ್ಲಿನ ಹಮಾಸ್ ಉಗ್ರರ ಸುರಂಗ ಧ್ವಂಸ!.
ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ನಡೆದ ಸಂಘರ್ಷ ಕಳೆದ 11 ದಿನಗಳಲ್ಲಿ ಮಿನಿ ಯುದ್ಧವಾಗಿ ಮಾರ್ಪಟ್ಟಿತ್ತು. ಉಗ್ರರ ಸದ್ದಡಗಿಸಲು ಇಸ್ರೇಲ್ ಸಜ್ಜಾಗಿತ್ತು. ಹೀಗಾಗಿ ಗಾಜಾ ಪಟ್ಟಿಯಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸತತ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ನಾಗರೀಕರು, ಮಕ್ಕಳು ಸಾವನ್ನಪ್ಪಿದ್ದರು.
ಇದೇ ಕಾರಣಕ್ಕೆ ವಿಶ್ವ ಸಂಸ್ಥೆ ಕದನ ವಿರಾಮಕ್ಕೆ ಪ್ರಯತ್ನ ನಡೆಸಿತ್ತು. ಇತ್ತ ಈಜಿಪ್ಟ್ ಪ್ರಸ್ತಾವನ್ನು ಸರ್ವಾನುಮತದಿಂದ ಒಪ್ಪಿಕೊಂಡಿರುವ ಇಸ್ರೇಲ್, ತಡರಾತ್ರಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೆಕ್ಯೂರಿಟಿ ಕ್ಯಾಬಿನೆಟ್ ಜೊತೆ ಸಭೆ ನಡೆಸಿದ್ದಾರೆ. ಬಳಿಕ ಕದನ ವಿರಾಮ ಘೋಷಿಸಿದ್ದಾರೆ.
ಇಸ್ರೇಲ್ ದಾಳಿಗೆ ನುಚ್ಚು ನೂರಾದ ಮನೆ: ಬದುಕುಳಿದ 6 ವರ್ಷದ ಮಗು!
ಕದನ ವಿರಾಮದ ಬೆನ್ನಲ್ಲೇ ಹಮಾಸ್ ಉಗ್ರರು ನೀಡಿದ ಹೇಳಿಕೆ ಇದೀಗ ಆತಂಕ ತಂದಿದೆ. ಕದನ ವಿರಾಮದಿಂದ ಇಸ್ರೇಲ್ ಸೋಲೋಪ್ಪಿಕೊಂಡಿದೆ . ಇದು ಹಮಾಸ್ ಹಾಗೂ ಪ್ಯಾಲೆಸ್ಟೈನ್ ಗೆಲುವು ಎಂದು ಸಂಭ್ರಮಾಚರಣೆ ನಡೆಸಿದ್ದಾರೆ. ಹಮಾಸ್ ಉಗ್ರರ ಹೇಳಿಕೆ ಇದೀಗ ಇಸ್ರೇಲ್ ಕೆರಳಿಸಿದೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ