ಭಾರತ - ಪಾಕ್‌ ರಾಜತಾಂತ್ರಿಕ ಯುದ್ಧ: ಪಹಲ್ಗಾಂ ದಾಳಿ ಬಳಿಕ ಎರಡೂ ದೇಶಗಳ ಸಂಘರ್ಷ, ಪ್ರತೀಕಾರ

Published : Apr 25, 2025, 08:27 AM ISTUpdated : Apr 25, 2025, 08:39 AM IST
ಭಾರತ - ಪಾಕ್‌ ರಾಜತಾಂತ್ರಿಕ ಯುದ್ಧ: ಪಹಲ್ಗಾಂ ದಾಳಿ ಬಳಿಕ ಎರಡೂ ದೇಶಗಳ ಸಂಘರ್ಷ, ಪ್ರತೀಕಾರ

ಸಾರಾಂಶ

ಪಹಲ್ಗಾಂ ದಾಳಿ ಬೆನ್ನಲ್ಲೇ ಉಗ್ರರ ಆಶ್ರಯ ತಾಣವಾದ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದ್ದ ಭಾರತದ ವಿರುದ್ಧ ಪಾಕಿಸ್ತಾನ ಕೂಡ ಪ್ರತಿಕ್ರಮಗಳನ್ನು ಘೋಷಿಸಿದೆ. 

ಇಸ್ಲಾಮಾಬಾದ್‌ (ಏ.25): ಪಹಲ್ಗಾಂ ದಾಳಿ ಬೆನ್ನಲ್ಲೇ ಉಗ್ರರ ಆಶ್ರಯ ತಾಣವಾದ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದ್ದ ಭಾರತದ ವಿರುದ್ಧ ಪಾಕಿಸ್ತಾನ ಕೂಡ ಪ್ರತಿಕ್ರಮಗಳನ್ನು ಘೋಷಿಸಿದೆ. ಉಭಯ ದೇಶಗಳ ನಡುವಣ ವಿವಾದವನ್ನು ಎರಡೂ ದೇಶಗಳೇ ಬಗೆಹರಿಸಿಕೊಳ್ಳಬೇಕು ಎಂದು ಸಾರುವ ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ನಿರ್ಧರಿಸುವ, 1972ರಲ್ಲಿ ಏರ್ಪಟ್ಟ ಅತ್ಯಂತ ಮಹತ್ವದ ಶಿಮ್ಲಾ ಅಗ್ರಿಮೆಂಟ್‌ ಸೇರಿ ಎಲ್ಲ ಒಪ್ಪಂದವನ್ನೂ ಅಮಾನತುಗೊಳಿಸುವುದಾಗಿ ಸಾರಿದೆ.

ಜೊತೆಗೆ ‘24 ಕೋಟಿ ಪಾಕಿಸ್ತಾನಿಯರ ಜೀವಾಳವಾಗಿರುವ ಸಿಂಧು ಜಲ ಒಪ್ಪಂದ ಅಮಾನತನ್ನು ಯುದ್ಧ ಎಂದು ಪರಿಗಣಿಸಲಾಗುವುದು’ ಎಂದು ಯುದ್ಧೋತ್ಸಾಹದ ಮಾತುಗಳನ್ನು ಆಡಿದೆ. ಭಾರತದ ಕ್ರಮಗಳ ಬೆನ್ನಲ್ಲೇ, ಹಿರಿಯ ಸಚಿವರು, ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರ ಜೊತೆ ಪ್ರಧಾನಿ ಶೆಹಬಾಜ್‌ ಷರೀಫ್‌ ಗುರುವಾರ ತುರ್ತು ಸಭೆ ನಡೆಸಿದರು. ಭಾರತ ಜತೆಗಿನ ಎಲ್ಲ ಒಪ್ಪಂದಗಳನ್ನು ಅಮಾನತುಗೊಳಿಸುವುದಾಗಿ ಪಾಕಿಸ್ತಾನ ಹೇಳುವುದರಿಂದ ಶಿಮ್ಲಾ ಒಪ್ಪಂದ ಕೂಡ ನಿಷ್ಕ್ರಿಯವಾಗಲಿದೆ. ತನ್ಮೂಲಕ ಎರಡು ದೇಶಗಳ ನಡುವಣ ಕಾಶ್ಮೀರ ವಿವಾದವನ್ನು ವಿಶ್ವ ಮಟ್ಟದ ವಿವಾದವಾಗಿಸಲು ಪಾಕಿಸ್ತಾನ ಹೊಂಚು ಹಾಕಿದಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಶ್ಮೀರ ದಾಳಿಕೋರರು ಎಲ್ಲೇ ಇದ್ದರೂ ಬಿಡೋದಿಲ್ಲ: ಪ್ರಧಾನಿ ಮೋದಿ

ಭಾರತೀಯರಿಗೆ ನೀಡಲಾಗಿರುವ ಎಲ್ಲ ಸಾರ್ಕ್‌ ವೀಸಾ ರದ್ದು ಮಾಡಲಾಗುವುದು. ಆದರೆ ಇದರಿಂದ ಸಿಖ್ಖರಿಗೆ ಮಾತ್ರ ವಿನಾಯಿತಿ ಇರುತ್ತದೆ. ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಯಾವುದೇ ಭಾರತೀಯ ವಿಮಾನ ಹಾರಾಟ ನಡೆಸಕೂಡದು. ವಾಘಾ ಗಡಿಯನ್ನು ಬಂದ್‌ ಮಾಡಲಿದ್ದು, 48 ಗಂಟೆಗಳಲ್ಲಿ ಭಾರತೀಯರು ದೇಶ ತೊರೆಯಬೇಕು. ಭಾರತದೊಂದಿನ ಎಲ್ಲ ಬಗೆಯ ವ್ಯಾಪಾರ ಬಂದ್‌ ಮಾಡಲಾಗುವುದು ಎಂದು ಪಾಕಿಸ್ತಾನ ಘೋಷಿಸಿದೆ.

ಸಭೆ ಬಳಿಕ ಪಾಕ್‌ ರಾಷ್ಟ್ರೀಯ ಭದ್ರತಾ ಸಮಿತಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಪಾಕಿಸ್ತಾನ ಎಲ್ಲಾ ಮಾದರಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ. ದೇಶದ ಸಾರ್ವಭೌಮತ್ವ ಮತ್ತು ಜನರ ಭದ್ರತೆಗೆ ಬೆದರಿಕೆ ಬಂದಲ್ಲಿ, ಎಲ್ಲಾ ಮಾರ್ಗಗಳಲ್ಲಿ ಪ್ರತಿಕ್ರಮ ಕೈಗೊಳ್ಳುತ್ತೇವೆ. ಭಾರತ ತನ್ನ ರಾಜಕೀಯ ಲಾಭಕ್ಕಾಗಿ ಪಹಲ್ಗಾಮ್‌ನಂತಹ ಘಟನೆಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇದರಿಂದ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಅಡ್ಡಿಯಾಗುತ್ತದೆ’ ಎಂದಿದೆ.

ಒಪ್ಪಂದಕ್ಕೆ ಪಾಕ್‌ ಕೊಕ್‌
- ಎಲ್‌ಒಸಿ ನಿರ್ಧರಿಸುವ ಶಿಮ್ಲಾ ಒಪ್ಪಂದವೂ ಅಮಾನತು
- ಸಿಂಧು ನೀರಿಗೆ ಅಡ್ಡಿ ಯುದ್ಧಕ್ಕೆ ಸಮ ಎಂದು ರಣೋತ್ಸಾಹ
- ವಾಘಾ ಬಂದ್‌ । ದೇಶ ಬಿಡಲು ಭಾರತೀಯರಿಗೆ ತಾಕೀತು
- ಭಾರತದ ವಿಮಾನಗಳು ತನ್ನ ಆಗಸ ಬಳಕೆಗೂ ನಿಷೇಧ
ಉಗ್ರರ ಕೃತ್ಯವನ್ನು ಖಂಡಿಸಿಯೇ ಇಲ್ಲ ಪಾಕ್‌ ಪ್ರಧಾನಿ!

ನೆರೆಯ ದೇಶಗಳಲ್ಲಿ ಉಗ್ರರ ದಾಳಿಗಳು ನಡೆದಾಗ ಪ್ರಧಾನಮಂತ್ರಿಗಳು ಅದನ್ನು ಖಂಡಿಸುವುದು ಮಾಮೂಲಿ. ಭಾರತದಲ್ಲಿ 26 ಮಂದಿಯನ್ನು ಉಗ್ರರು ಕೊಂದು ಹಾಕಿದ್ದರೂ ಸೌಜನ್ಯಕ್ಕೂ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅದನ್ನು ಖಂಡಿಸಿಲ್ಲ!

1000 ಸಶಸ್ತ್ರ ನಕ್ಸಲರನ್ನು ಸುತ್ತುವರೆದ 3 ರಾಜ್ಯಗಳ 20000 ಭದ್ರತಾ ಸಿಬ್ಬಂದಿ!

ಪಾಕ್‌ ಕ್ರಮಗಳೇನು?: ಎಲ್‌ಒಸಿ ನಿರ್ಧರಿಸುವ ಶಿಮ್ಲಾ ಅಗ್ರಿಮೆಂಟ್‌ ಸೇರಿ ಭಾರತದೊಂದಿಗಿನ ಎಲ್ಲ ಒಪ್ಪಂದ ರದ್ದು- ಭಾರತೀಯರಿಗೆ ನೀಡಲಾಗುವ ಸಾರ್ಕ್‌ ವೀಸಾ ರದ್ದು. ಆದರೆ ಸಿಖ್ಖರಿಗೆ ವಿನಾಯ್ತಿ- ತನ್ನ ವಾಯುಪ್ರದೇಶದಲ್ಲಿ ಎಲ್ಲಾ ಭಾರತೀಯ ವಿಮಾನಗಳ ಹಾರಾಟವನ್ನು ನಿರ್ಬಂಧ- ವಾಘಾ ಗಡಿ ಬಂದ್‌. ಭಾರತೀಯರಿಗೆ ದೇಶ ಬಿಡಲು 48 ಗಂಟೆ ಸಮಯಾವಕಾಶ- ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ 30 ಜನರಿಗೆ ಮಾತ್ರ ಅವಕಾಶ- ಭಾರತದೊಂದಿಗಿನ ಎಲ್ಲಾ ನೇರ, 3ನೇ ದೇಶಗಳ ಮೂಲಕ ನಡೆವ ವ್ಯಾಪಾರ ಪೂರ್ಣ ಬಂದ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!