
ಬೀಜಿಂಗ್(ಜು.04): ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ಗೆ ಅಚ್ಚರಿಯ ಭೇಟಿ ನೀಡಿ ಯೋಧರ ಜತೆ ಸಂವಾದ ನಡೆಸಿದ್ದಕ್ಕೆ ಚೀನಾ ಆಕ್ಷೇಪಿಸಿದೆ. ಅಲ್ಲದೆ ಚೀನಾ ಅತಿಕ್ರಮಣ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಪರೋಕ್ಷ ಆರೋಪವನ್ನು, ಆಧಾರ ರಹಿತ ಎಂದು ಚೀನಾ ವಾದಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯಾನ್, ‘ಭಾರತ ಹಾಗೂ ಚೀನಾ ಗಡಿಯಲ್ಲಿನ ತ್ವೇಷ ಸ್ಥಿತಿ ತಣಿಸಲು ರಾಜತಾಂತ್ರಿಕ ಹಾಗೂ ಸೇನಾ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಯಾವುದೇ ಪಕ್ಷಗಳಾಗಲಿ (ಭಾರತ-ಚೀನಾ) ಈ ಹಂತದಲ್ಲಿ ಪರಿಸ್ಥಿತಿ ತ್ವೇಷಗೊಳಿಸಲು ಯತ್ನಿಸಬಾರದು. ದ್ವಿಪಕ್ಷೀಯ ಬಾಂಧವ್ಯಕ್ಕೆ ಅಡ್ಡಗೋಡೆ ಇಟ್ಟರೆ, ಭಾರತದ ಹಿತಾಸಕಿಗಳಿಗೇ ಹೆಚ್ಚಿನ ಹಿನ್ನಡೆ ಆಗಲಿದೆ. ಉಭಯ ದೇಶಗಳೂ ಚರ್ಚಿಸಿ ಗಡಿಯಲ್ಲಿ ಶಾಂತಿ ಸ್ಥಾಪಿಸಲು ಯತ್ನಿಸಬೇಕು ’ ಎಂದಿದ್ದಾರೆ.
ಚೀನಾ ಕಂಪನಿಗಳಿಗೆ ಭಾರತದಿಂದ ಎಲೆಕ್ಟ್ರಿಕ್ ಶಾಕ್!
ಮತ್ತೊಂದೆಡೆ ಭಾರತದಲ್ಲಿನ ಚೀನಾ ರಾಯಭಾರಿ ಜಿ ರೋಂಗ್ ಪ್ರತಿಕ್ರಿಯೆ ನೀಡಿ ‘ಚೀನಾ ತಾನು 14 ದೇಶಗಳೊಂದಿಗೆ ಹೊಂದಿರುವ ಗಡಿ ಪೈಕಿ 12 ದೇಶಗಳ ಜೊತೆ ಶಾಂತಿಯುತ ಮಾತುಕತೆ ಮೂಲಕ ಗಡಿ ರೇಖೆ ಗುರುತಿಸಿಕೊಂಡಿದೆ. ಹೀಗಾಗಿ ಚೀನಾವನ್ನು ಅತಿಕ್ರಮಣಕಾರಿ ಎನ್ನುವುದು ಆಧಾರರಹಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ