
ನವದೆಹಲಿ(ಜು.03): ದಕ್ಷಿಣ ಏಷ್ಯಾದಲ್ಲಿ ಚೀನಾದ ಅತ್ಯಂತ ನಿಕಟ ಸ್ನೇಹಿತನಾಗಿರುವ ಮ್ಯಾನ್ಮಾರ್ ಕೂಡ ಈಗ ಚೀನಾದ ವಿರುದ್ಧ ತಿರುಗಿನಿಂತಿದೆ. ನೇಪಾಳಕ್ಕೆ ನೆರವು ನೀಡುವ ನೆಪದಲ್ಲಿ ಅಲ್ಲಿನ ಭೂಮಿಯನ್ನೇ ಕಬಳಿಸಿದ ಚೀನಾ ಇದೀಗ ಮ್ಯಾನ್ಮಾರ್ನಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುವ ಮೂಲಕ ಮ್ಯಾನ್ಮಾರ್ ಸರ್ಕಾರಕ್ಕೆ ಕಿರುಕುಳ ನೀಡಲು ಆರಂಭಿಸಿದೆ.
ಈ ವಿಷಯವನ್ನು ಸ್ವತಃ ಮ್ಯಾನ್ಮಾರ್ನ ಸೇನಾಪಡೆಯ ಮುಖ್ಯಸ್ಥ ಮಿನ್ ಆಂಗ್ ಹೇಲಿಯಾಂಗ್ ಅವರೇ ರಷ್ಯಾದ ಟೀವಿ ಚಾನಲ್ಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದು, ‘ಬಲಶಾಲಿ ಶಕ್ತಿಗಳು’ ತಮ್ಮ ದೇಶದ ಕೆಲ ಭಯೋತ್ಪಾದಕ ಸಂಘಟನೆಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿವೆ ಎಂದು ಚೀನಾದ ಹೆಸರು ಹೇಳದೆ ಆಪಾದಿಸಿದ್ದಾರೆ. ಇದನ್ನು ತಡೆಯಲು ಜಾಗತಿಕ ಸಮುದಾಯ ತಮ್ಮ ನೆರವಿಗೆ ಬರಬೇಕು ಎಂದೂ ಕೋರಿದ್ದಾರೆ.
ಚೀನಾ ಮೇಲೆ ಭಾರತದ ರಾಜತಾಂತ್ರಿಕ ‘ದಾಳಿ’
ಮ್ಯಾನ್ಮಾರ್ನ ಅರಕನ್ ಆರ್ಮಿ ಎಂಬ ಬಂಡುಕೋರ ಸಂಘಟನೆಯ ಬಳಿ ಚೀನಾ ನಿರ್ಮಿತ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಮ್ಯಾನ್ಮಾರ್ ಜೊತೆಗೆ ‘ಚೀನಾ-ಮ್ಯಾನ್ಮಾರ್ ಆರ್ಥಿಕ ಕಾರಿಡಾರ್’ ನಿರ್ಮಾಣದ ಕುರಿತು ಒಪ್ಪಂದ ಮಾಡಿಕೊಳ್ಳಲು ಚೀನಾ ಒತ್ತಡ ಹೇರುತ್ತಿದ್ದು, ತನ್ಮೂಲಕ ಮ್ಯಾನ್ಮಾರನ್ನು ತನ್ನ ಸಾಲದಲ್ಲಿ ಕೆಡವಲು ಯತ್ನಿಸುತ್ತಿದೆ. ಈ ಒಪ್ಪಂದ ಏರ್ಪಟ್ಟರೆ ಬಂಗಾಳ ಕೊಲ್ಲಿಗೆ ಹಾಗೂ ಹಿಂದೂ ಮಹಾಸಾಗರದ ಪೂರ್ವ ಭಾಗಕ್ಕೆ ಚೀನಾದ ಪ್ರವೇಶ ಸುಲಭವಾಗುತ್ತದೆ. ಇದು ಭಾರತಕ್ಕೆ ಅಪಾಯಕಾರಿ. ಚೀನಾದ ಈ ಪ್ರಯತ್ನಕ್ಕೆ ಮ್ಯಾನ್ಮಾರ್ ಸೊಪ್ಪುಹಾಕುತ್ತಿಲ್ಲ. ಹೀಗಾಗಿ ಮ್ಯಾನ್ಮಾರ್ನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಚೀನಾ ಕುಮ್ಮಕ್ಕು ನೀಡುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ