
ನವದೆಹಲಿ (ಫೆ.20): ರೈತರ ಹೋರಾಟಕ್ಕೆ ಸಂಬಂಧಿಸಿದ ಟೂಲ್ಕಿಟ್ ಸೃಷ್ಟಿಪ್ರಕರಣದಲ್ಲಿ ಬಂಧಿತಳಾಗಿರುವ ಬೆಂಗಳೂರಿನ ಪರಿಸರವಾದಿ ದಿಶಾ ರವಿಗೆ ಸ್ವೀಡನ್ ಪರಿಸರವಾದಿ ಗ್ರೆಟಾ ಥನ್ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾಳೆ.
ಶುಕ್ರವಾರ ಟ್ವೀಟ್ ಮಾಡಿರುವ ಗ್ರೆಟಾ, ‘ವಾಕ್ ಸ್ವಾತಂತ್ರ್ಯ ಹಾಗೂ ಶಾಂತಿಯುತ ಪ್ರತಿಭಟನೆ ಹಕ್ಕುಗಳು ರಾಜಿ ಮಾಡಿಕೊಳ್ಳಲಾಗದ ಮಾನವ ಹಕ್ಕುಗಳು. ಯಾವುದೇ ಪ್ರಜಾಸತ್ತೆಯ ಮೂಲಭೂತ ಅಂಗಗಳು ಇವು.
ಟೂಲ್ಕಿಟ್ ಪ್ರಕರಣ: ದಿಶಾ ರವಿಗೆ ಬೇಲ್ ಇಲ್ಲ, ಮತ್ತೆ ಮೂರು ದಿನ ನ್ಯಾಯಾಂಗ ಬಂಧನ! .
ದಿಶಾ ರವಿ ಜತೆ ನಿಲ್ಲುವೆ’ ಎಂದು ಹೇಳಿದ್ದಾಳೆ. ಈ ಟೂಲ್ಕಿಟ್ನಲ್ಲಿ ಭಾರತ ವಿರೋಧಿ ಅಂಶಗಳಿದ್ದು, ಇದರ ಗ್ರೆಟಾ ಜತೆಗೂಡಿ ದಿಶಾ ಇದನ್ನು ಸಿದ್ಧಪಡಿಸಿದ್ದಳು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಗ್ರೆಟಾಳ ಈ ಬಹಿರಂಗ ಬೆಂಬಲಕ್ಕೆ ಮಹತ್ವ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ