Dharma Sansad Hate Speech: ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ, ಭಾರತೀಯ ರಾಜತಾಂತ್ರಿಕನಿಗೆ ಪಾಕಿಸ್ತಾನ ಸಮನ್ಸ್

By Suvarna NewsFirst Published Dec 28, 2021, 10:04 PM IST
Highlights
  • ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್  ಕಾರ್ಯಕ್ರಮ
  • ಘಟನೆ ಬಳಿಕ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದ ಹಲವು ರಾಜಕೀಯ ಪಕ್ಷಗಳು
  • ಭಾರತ ಸರ್ಕಾರ ಸುಮ್ಮನಿರುವುದು ಆಘಾತ ತಂದಿದೆ ಎಂದ ಪಾಕ್ 
     

ಇಸ್ಲಾಮಾಬಾದ್: ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳು ಮಾಡಲ್ಪಟ್ಟಿರುವುದಾಗಿ ಆರೋಪಿಸಿರುವ ಪಾಕಿಸ್ತಾನ ಈ ಸಂಬಂಧ ಇಸ್ಲಾಮಾಬಾದಿನಲ್ಲಿರುವ ಭಾರತೀಯ ರಾಜತಾಂತ್ರಿಕ ( Indian diplomat ) ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ಧರ್ಮ ಸಂಸದ್ (Dharma sansad) ಅಧಿವೇಶನದಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲಬೇಕು ಎನ್ನುವ ಅರ್ಥದಲ್ಲಿ ಭಾಷಣಗಳನ್ನು ನೀಡಲಾಗಿದ್ದು, ಭಾರತ ಸರ್ಕಾರ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಆಘಾತ ತಂದಿದೆ ಎಂದು ಪಾಕ್ ಅಭಿಪ್ರಾಯಪಟ್ಟಿದೆ. 

ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಬಿತ್ತುವ ಚಟುವಟಿಕೆಗಳನ್ನು ನಿರ್ಬಂಧಿಸುವ ಜವಾಬ್ದಾರಿ ಭಾರತದ ಮೇಲಿದೆ, ಮುಂದಿನ ದಿನಗಳಲ್ಲಿ ಈ ಬಗೆಯ ಘಟನೆಗಳು ನಡೆಯದಂತೆ ಭಾರತ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದಿದೆ ಇಮ್ರಾನ್ ಸರ್ಕಾರ.

Hate Speech: ಧರ್ಮ ಸಂಸತ್ತಿನಲ್ಲಿ ಪ್ರಚೋದನಕಾರಿ ಭಾಷಣ, ಹರಿದ್ವಾರದಲ್ಲಿ ದಾಖಲಾಯ್ತು ಕೇಸ್!

ಈ ಹಿಂದೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಹರಿದ್ವಾರದ ಧರ್ಮ ಸಂಸದ್ ಅಧಿವೇಶನ ಕುರಿತಾಗಿ ವಿರೋಧ ವ್ಯಕ್ತಪಡಿಸಿದ್ದವು. ಅಧಿವೇಶನದಲ್ಲಿ ಕೋಮು ಪ್ರಚೋದಕ ಭಾಷಣ ನೀಡಿದ ಜಿತೇಂದ್ರ ನಿತ್ಯಾನಂದ ತ್ಯಾಗಿ ವಿರುದ್ಧ ಎಫ್ ಐ ಆರ್ ಕೂಡ ದಾಖಲಾಗಿತ್ತು.

ವಾಸ್ತವವಾಗಿ, ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ಧರ್ಮ ಸಂಸದ್ ಆಯೋಜಿಸಲಾಗಿತ್ತು. ಇದರಲ್ಲಿ ಜಿತೇಂದ್ರ ನಾರಾಯಣ ತ್ಯಾಗಿ ಮುಸ್ಲಿಂ ಸಮುದಾಯದ ಬಗ್ಗೆ ವಿವಾದಾತ್ಮಕ ಭಾಷಣ ಮಾಡಿದ್ದಾರೆ ಎಂಬ ಆರೋಪವಿದೆ. ಅನೇಕ ಸಂತರಲ್ಲದೆ, ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಕೂಡ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಸಮಾವೇಶಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರ್‌ಟಿಐ ಕಾರ್ಯಕರ್ತ ಮತ್ತು ತೃಣಮೂಲ ಕಾಂಗ್ರೆಸ್‌ನ ಸಾಕೇತ್ ಗೋಖಲೆ ಪ್ರತಿಭಟನೆ ನಡೆಸಿದ್ದರು.

Uttarakhand Elections: ಕಾಂಗ್ರೆಸ್‌ಗೆ ಉತ್ತರಾಖಂಡದಲ್ಲಿ ಶಾಕ್ ಕೊಟ್ಟ ರಾವತ್, ಹೊಸ ನಿರ್ಧಾರದ ಮಾತು!

ಮತ್ತೊಂದೆಡೆ, ಸಾಕೇತ್ ಗೋಖಲೆ ಈ ಬಗ್ಗೆ ಟ್ವೀಟ್ ಮಾಡಿದ್ದು, ಜ್ವಾಲಾಪುರ ಪೊಲೀಸ್ ಠಾಣೆಯಲ್ಲಿ ಎಸ್‌ಎಚ್‌ಒಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ. 24 ಗಂಟೆಗಳ ಒಳಗೆ ಸಂಘಟಕರು ಮತ್ತು ಭಾಷಣಕಾರರ ವಿರುದ್ಧ ಎಫ್‌ಐಆರ್ ದಾಖಲಿಸದಿದ್ದರೆ, ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಬರೆದಿದ್ದಾರೆ.

ಈ ಸಮ್ಮೇಳನವನ್ನು ಯತಿ ನರಸಿಂಹಾನಂದರು ಆಯೋಜಿಸಿರುವುದು ಉಲ್ಲೇಖಾರ್ಹ. ಹಿಂದೂ ರಕ್ಷಣಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಮೋದಾನಂದ ಗಿರಿ, ಸ್ವಾಮಿ ಆನಂದಸ್ವರೂಪ್, ಸಾಧ್ವಿ ಅನ್ನಪೂರ್ಣ ಮುಂತಾದವರು ಈ ಸಮಾವೇಶದಲ್ಲಿ ಭಾಷಣಕಾರರಾಗಿ ಭಾಗವಹಿಸಿದ್ದರು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರ ಮೇಲೂ ಆರೋಪ ಕೇಳಿಬರುತ್ತಿದೆ, ಆದರೂ ಅವರು ಕೇವಲ ಮೂವತ್ತು ನಿಮಿಷ ಮಾತ್ರ ಕಾರ್ಯಕ್ರಮದಲ್ಲಿ ಇದ್ದರು ಎಂದು  ಹೇಳಲಾಗಿದೆ.

Jallianwala Bagh: ಜಲಿಯನ್‌ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್‌ ರಾಣಿ ಹತ್ಯೆ ಬೆದರಿಕೆ!

ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಡಾ.ಶಾಮಾ ಮೊಹಮ್ಮದ್ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮುನವ್ವರ್ ಫಾರೂಕಿ ಅವರು ಮಾಡದ ಅಪಹಾಸ್ಯಕ್ಕೆ ನಿರಂತರವಾಗಿ ಶಿಕ್ಷೆ ಅನುಭವಿಸುತ್ತಿದ್ದರು, ಆದರೆ ವಿವಾದಾತ್ಮಕ ಮಾತುಗಳನ್ನು ಆಡಿದ ಧರ್ಮಗಳ ಸಂಸತ್ತಿನ ಸದಸ್ಯರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸ್ವರಾ ಭಾಸ್ಕರ್ ಅವರು ಐಪಿಎಸ್ ಅಶೋಕ್ ಕುಮಾರ್ ಅವರಿಗೆ ಗುಡ್‌ ಮಾರ್ನಿಂಗ್ ಎಂದು ಈ ವಿಚಾರವಾಗಿ ಪತ್ರ ಬರೆದಿದ್ದರು. ಇದರೊಂದಿಗೆ ಟೆನಿಸ್ ತಾರೆ ಮಾರ್ಟಿನಾ ನವ್ರಾಟಿಲೋವಾ ಕೂಡ ಈ ವಿಡಿಯೋಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 'ಇದೇನು ನಡೆಯುತ್ತಿದೆ?' ಎಂದವರು ಪ್ರಶ್ನಿಸಿ ಟ್ವೀಟ್ ಮಾಡಿದ್ದರು.

click me!